ಕೇವಲ 2000 ರೂ.ಗೆ ಕೃಷಿ ಬೆಳೆಕಾಯುವ ಯಂತ್ರ!..ರೈತರಿಗಾಗಿ IIT ವಿಧ್ಯಾರ್ಥಿಗಳ ಸಾಧನೆ!!
ಐಐಟಿ ಮದ್ರಾಸ್ ವಿಧ್ಯಾರ್ಥಿಗಳು ರೈತರಿಗಾಗಿ ಕೃಷಿ ಭೂಮಿಯನ್ನು ರಕ್ಷಿಸಿಕೊಳ್ಳಲು ಪರಿಹಾರ ಕಂಡುಹಿಡಿದಿದ್ದಾರೆ.!
ಇಂದು ರೈತರ ಆತ್ಮಹತ್ಯೆಗೆ ಹಲವು ಕಾರಣಗಳಲ್ಲಿ ಅವರು ಬಳೆದಿರುವ ಬೆಳೆ ನಾಶವೂ ಕೂಡ ಒಂದು!. ಕಾಡುಪ್ರಾಣಿ ಅಥವಾ ಜಾನುವಾರುಗಳು ರೈತ ಬೆಳೆದ ಬೆಳೆಗಳನ್ನು ಹಾಳು ಮಾಡಿ ಲಕ್ಷಾಂತರ ರೂಪಾಯಿ ಹಣವನ್ನು ಹಾಳು ಮಾಡುತ್ತವೆ. ಇದನ್ನು ತಡೆಯುವುದೇ ರೈತರಿಗೆ ದೊಡ್ಡ ಸವಾಲಾಗಿ ನಿಲ್ಲುತ್ತದೆ.!!
ಹಾಗಾಗಿಯೇ , ರೈತರ ಜಾನುವಾರುಗಳಿಂದ ಕೃಷಿ ಭೂಮಿಯನ್ನು ರಕ್ಷಿಸಿಕೊಳ್ಳುವ ತಲೆನೋವು ಕಡಿಮೆ ಮಾಡಲು ಐಐಟಿ ಮದ್ರಾಸ್ ವಿಧ್ಯಾರ್ಥಿಗಳು ಇದಕ್ಕೊಂದು ಪರಿಹಾರ ಕಂಡುಹಿಡಿದಿದ್ದಾರೆ.! ಅತ್ಯಂತ ಕಡಿಮೆ ಬೆಲೆಯಲ್ಲಿ ಬೆಳೆ ರಕ್ಷಣೆ ಮಾಡುವ ತಂತ್ರಜ್ಞಾನವನ್ನು ಅವರು ಅಭಿವೃದ್ದಿಪಡಿಸಿದ್ದಾರೆ.! ಹಾಗಾದರೆ, ಆ ಯಂತ್ರದಿಂದ ಬೆಳೆರಕ್ಷಣೆ ಹೇಗೆ ಆಗುತ್ತದೆ? ಯಂತ್ರದ ಬೆಲೆ ಎಷ್ಟು? ಎಂಬ ಮಾಹಿತಿಗಳನ್ನು ಕೆಳಗಿನ ಸ್ಲೈಡರ್ಗಳಲ್ಲಿ ತಿಳಿಯಿರಿ.!!

ಸೆನ್ಸಾರ್ ಸಿಸ್ಟಮ್ ಮೂಲಕ ಕಾರ್ಯನಿರ್ವಹಣೆ!!
ಐಐಟಿ ಮದ್ರಾಸ್ನಲ್ಲಿ ಓದುತ್ತಿರುವ ರವಿ ಖತ್ರಿ ಮತ್ತು ಎಸ್ ಶರದತ್ ಎಂಬ ವಿಧ್ಯಾರ್ಥಿಗಳು ಸೆನ್ಸಾರ್ ಸಿಸ್ಟಮ್ ಮೂಲಕ ಒಂದು ಉಪಕರಣವನ್ನು ವನ್ನು ಅಭಿವೃದ್ಧಿಪಡಿಸಿದ್ದು, ಯಾವುದೇ ಪ್ರಾಣಿಯೂ ಕೃಷಿ ಭೂಮಿಯ ಬಳಿ ಬರದಂತೆ ತಡೆಯುವಲ್ಲಿ ಈ ಉಪಕರಣ ಯಶಸ್ವಿಯಾಗಿದೆ.!!

ಸೆನ್ಸಾರ್ ಸಿಸ್ಟಮ್ ಹೇಗೆ ಕೆಲಸ ಮಾಡುತ್ತದೆ.?
ಕೃಷಿ ಭೂಮಿಯಿಂದ 10 ಮೀಟರ್ ದೂರದಲ್ಲಿ ಈ ಸೆನ್ಸಾರ್ ಉಪಕರಣವನ್ನು ಅಳವಡಿಸಲಾಗುತ್ತದೆ.! ಯಾವುದೇ ಪ್ರಾಣಿಯು ಕೃಷಿಭೂಮಿಯ ಬಳಿ ಬರುತ್ತಿದ್ದರೆ ಅದರ ಚಲನವಲನಗಳನ್ನು ಗಮನಿಸಿ ಜೂರಾಗಿ ಶಬ್ದ ಮಾಡುತ್ತದೆ. ಜೊತೆಗೆ ಲೈಟ್ಗಳು ಸಹ ಉರಿಯುತ್ತವೆ. ಇದರಿಂದ ಪ್ರಾಣಿಗಳು ಹೆದರಿ ಓಡಿಹೋಗುತ್ತವೆ.!!

ರೈತರಿಗೆ ಮಾಹಿತಿ ಸಹ ಒದಗಿಸುತ್ತದೆ.!!
ಜೂರಾಗಿ ಶಬ್ದ ಮಾಡಿ ಪ್ರಾಣಿಗಳನ್ನು ಓಡಿಸುವ ಈ ಯಂತ್ರವೂ ಹೆಚ್ಚುನ ತಂತ್ರಜ್ಞಾನವನ್ನು ಹೊಂದಿದ್ದು, ರೈತರಿಗೆ ಮೊಬೈಲ್ ಮೂಲಕ ಈ ಬಗ್ಗೆ ಮಾಹಿತಿಯನ್ನು ಸಹ ನೀಡುತ್ತದೆ ಎಂದು ರವಿ ಖತ್ರಿ ಮತ್ತು ಎಸ್ ಶರದತ್ ಅವರು ಹೇಳಿದ್ದಾರೆ.!!

ಉಪಕರಣದ ಬಳಕೆ ಕೂಡ ಸುಲಭ!!
ಪ್ರಾಣಿಗಳನ್ನು ಓಡಿಸುವ ಈ ಉಪಕರಣದ ಬಳಕೆ ಕೂಡ ಹೆಚ್ಚು ಸುಲಭವಾಗಿದ್ದು, ಬೆಳೆಯ ನಂತರ ಈ ಯಂತ್ರವನ್ನು ತೆಗೆದಿದ್ದು, ಮತ್ತೆ ಬೆಳೆ ಬೆಳೆದಾಗ ಈ ಯಂತ್ರವನ್ನು ಅಳವಡಿಸಿಕೊಳ್ಳಬಹುದು.!!

ಉಪಕರಣದ ಬೆಲೆ ಎಷ್ಟು?
ಪ್ರಾಣಿಗಳನ್ನು ಓಡಿಸಬಹುದಾದ ಈ ಉಪಕರಣವೂ ಈಗಷ್ಟೆ ಮಾರುಕಟ್ಟೆಗೆ ಕಾಲಿಡಲು ಬರುತ್ತಿದ್ದು, ಈ ಉಪಕರಣಕ್ಕೆ ಕೇವಲ 2000 ರೂಪಾಯಿಗಳಿಗಿಂತಲೂ ಕಡಿಮೆ ಬೆಲೆ ಸಾಕಾಗುತ್ತದೆ ಎಂದು ಐಐಟಿ ವಿಧ್ಯಾರ್ಥಿಗಳಾದ ರವಿ ಖತ್ರಿ ಮತ್ತು ಎಸ್ ಶರದತ್ ಅವರು ಹೇಳಿದ್ದಾರೆ.!!


Click it and Unblock the Notifications








