ಶಾಕಿಂಗ್ ವರದಿ..ವೈರಸ್ ದಾಳಿಗೆ ತುತ್ತಾಗುವ ದೇಶಗಳಲ್ಲಿ ಭಾರತವೇ ಮೊದಲು!! ಏಕೆ?
ಕೆಲವು ವರದಿಗಳು ವನ್ನಾಕ್ರೈ ವೈರಸ್ ದಾಳಿ ಭಾರತಕ್ಕೇ ಹೆಚ್ಚೇನು ಹಾನಿಯಾಗಿಲ್ಲ ಎಂದು ಹೇಳಿದ್ದವು. ಆದರೆ, ಇದೀಗ ಬಂದಿರುವ ರಿಪೋರ್ಟ್ ಭಾರತವೇ ಸೈಬರ್ ದಾಳಿಗೆ ಹೆಚ್ಚು ತೆರದುಕೊಂಡಿದೆ ಎಂದು ಹೇಳಿದೆ.!
ಇಡೀ ಪ್ರಪಂಚಾದ್ಯಂತ ವನ್ನಾಕ್ರೈ ವೈರಸ್ ನಡೆಸಿದ ದಾಳಿ ಈಗಾಗಲೇ ಎಲ್ಲರಿಗೂ ಗೊತ್ತು. ಈ ಬಗ್ಗೆ ಇನ್ನೊಂದು ಶಾಕಿಂಗ್ ರಿಪೋರ್ಟ್ ಹೊರಬಿದ್ದಿದ್ದು, ವೈರಸ್ ದಾಳಿಗೆ ತುತ್ತಾಗುವ ದೇಶಗಳಲ್ಲಿ ಭಾರತೀಯರೆ ಮೊದಲಿಗರಾಗಿದ್ದಾರೆ.!!
ಹೌದು, ಕೆಲವು ವರದಿಗಳು ವನ್ನಾಕ್ರೈ ವೈರಸ್ ದಾಳಿ ಭಾರತಕ್ಕೇ ಹೆಚ್ಚೇನು ಹಾನಿಯಾಗಿಲ್ಲ ಎಂದು ಹೇಳಿದ್ದವು. ಆದರೆ, ಇದೀಗ ಬಂದಿರುವ ರಿಪೋರ್ಟ್ ಭಾರತವೇ ಸೈಬರ್ ದಾಳಿಗೆ ಹೆಚ್ಚು ತೆರದುಕೊಂಡಿದೆ ಎಂದು ಹೇಳಿದೆ.!!
ಹಾಗಾದರೆ, ಭಾರತದಲ್ಲಿ ಸೈಬರ್ ಅಟ್ಯಾಕ್ ಹೆಚ್ಚಾಗಲು ಕಾರಣವೇನು? ಇದಕ್ಕೆ ಪರಿಹಾರವೇನು? ಎಂಬುದನ್ನು ಕೆಳಗಿನ ಸ್ಲೈಡರ್ಗಳಲ್ಲಿ ತಿಳಿಯಿರಿ.!!

ನಕಲಿ ಸಾಫ್ಟ್ವೇರ್ ಬಳಕೆ ಹೆಚ್ಚು.!!
ಹೌದು, ಭಾರತದಲ್ಲಿ ನಕಲಿ ಸಾಫ್ಟ್ವೇರ್ ಬಳಕೆ ಹೆಚ್ಚಾಗಿದ್ದು, ಇದರಿಂದ ಹ್ಯಾಕರ್ಗಳು ಸುಲಭವಾಗಿ ಇಂತಹ ಕಂಪ್ಯೂಟರ್ಗಳನ್ನು ಹ್ಯಾಕ್ ಮಾಡುತ್ತಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಭಾರತದಲ್ಲಿ 10 ರಲ್ಲಿ ಒಬ್ಬರು ನಕಲಿ ಸಾಫ್ಟ್ವೇರ್ ಬಳಕೆ ಮಾಡುತ್ತಿದ್ದಾರೆ.!!

ಮಾಲ್ವೇರ್ಗಳ ಬಗ್ಗೆ ಎಚ್ಚರಿಕೆ ಇಲ್ಲ.!!
ಬಹುತೇಕ ಭಾರತೀಯರಿಗೆ ಮಾಲ್ವೇರ್ಗಳ ಬಗ್ಗೆ ಯಾವುದೇ ಎಚ್ಚರಿಕೆ ಇಲ್ಲ. ಇನ್ನು ಸೈಬರ್ ಅಟ್ಯಾಕ್ನಿಂದ ಆಗುತ್ತಿರುವ ತೊಂದರೆ ಬಗ್ಗೆಯೂ ಅವರಿಗೆ ಹೆಚ್ಚು ತಿಳಿವಳಿಕೆ ಇಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.!!

ಆಂಟಿವೈರಸ್ ಬಳಕೆ ಕಡಿಮೆ.!!
ಭಾರತದಲ್ಲಿ ಹೆಚ್ಚಿನ ಕಂಪ್ಯೂಟರ್ ಬಳಕೆದಾರರು ಉತ್ತಮ ಆಂಟಿವೈರಸ್ ಬಳಕೆ ಮಾಡುತ್ತಿಲ್ಲ. ಇದರಿಂದಾಗಿ ವೈರಸ್ ಕಂಪ್ಯೂಟರ್ಗಳಿಗೆ ನುಸುಳುತ್ತಿವೆ ಎಂದು ವರದಿಯಲ್ಲಿ ಹೇಳಲಾಗಿದೆ.!! ಒಂದು ವೇಳೆ ಆಂಟಿ ವೈರಸ್ ಬಳಕೆ ಮಾಡುತ್ತಿದ್ದರೂ ಅದೂ ಕೂಡ ಬಹುತೇಕ ಪೈರೆಸಿಯಾಗಿರುತ್ತದೆ.!!

ಡೌನ್ಲೋಡ್ ಸುರಕ್ಷತೆ ಇಲ್ಲ.!!
ಭಾರತದ ಹೆಚ್ಚಿನ ಜನರು ತಾವು ಕಂಪ್ಯೂಟರ್ಗೆ ಏನನ್ನು ಡೌನ್ಲೋಡ್ ಮಾಡುತ್ತಿದ್ದೇನೆ? ಆ ಡೌನ್ಲೋಡ್ ಆಗುವ ತಂತ್ರಾಂಶದಿಂದ ಏನಾದರೂ ತೊಂದರೆ ಆಗಬಹುದೇ ಎನ್ನುವ ಯೋಚನೆ ಮಾಡುವುದಿಲ್ಲ. ಸರಸಗಾಟವಾಗಿ ಅಂತಹ ಆಪ್ಗಳನ್ನು ಡೌನ್ಲೋಡ್ ಮಾಡುತ್ತಿದ್ದಾರೆ.!!


Click it and Unblock the Notifications








