OlX ನಲ್ಲಿ ಸಿಎಂ ಪುತ್ರಿಗೆ ಪಂಗನಾಮ ಹಾಕಿದ ಭೂಪ!
ಇತ್ತೀಚಿನ ದಿನಗಳಲ್ಲಿ ಆನ್ಲೈನ್ನಲ್ಲಿ ಮೋಸ ಹೋಗುವುದು ದಿನನಿತ್ಯ ವರದಿ ಆಗುತ್ತಿದೆ. ಸಾಮಾನ್ಯವಾಗಿ ಇಂತಹ ಮೋಸದ ಜಾಲದಲ್ಲಿ ಸಾಮಾನ್ಯರು ಸುಲಭವಾಗಿ ಮೋಸಹೋಗುತ್ತಿದ್ದಾರೆ. ಆದರೆ ಇದೀಗ ಮುಖ್ಯಮಂತ್ರಿ ಮಗಳು ಕೂಡ ಆನ್ಲೈನ್ನಲ್ಲಿ ಮೋಸ ಹೋಗಿದ್ದಾರೆ. ಅದು ಕೂಡ OLX ನಲ್ಲಿ ಹಳೆಯ ವಸ್ತುವನ್ನು ಸೇಲ್ ಮಾಡಲು ಹೋಗಿ 34,000 ರೂ ಗಳನ್ನು ಕಳೆದುಕೊಂಡಿದ್ದಾರೆ.

ಹೌದು, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮಗಳು ಇತ್ತೀಚೆಗೆ ಆನ್ಲೈನ್ ವಂಚಕರಿಂದ ಮೋಸ ಹೋಗಿದ್ದಾರೆ. ತಮ್ಮ ಮನೆಯಲ್ಲಿರುವ ಹಳೆಯ ಸೋಫಾ ಸೆಟ್ ಅನ್ನು ಒಎಲ್ಎಕ್ಸ್ನಲ್ಲಿ ಮಾರಾಟ ಮಾಡಲು ಹೋಗಿ ಆನ್ಲೈನ್ ವಂಚಕರಿಂದ 34,000 ರೂ. ಕಳೆದುಕೊಂಡಿದ್ದಾರೆ. ಹಾಗಾದ್ರೆ ಕೆಜ್ರಿವಾಲ್ ಪುತ್ರಿ ಮೋಸ ಹೋಗಲು ಮುಖ್ಯ ಕಾರಣವೇನು ಅನ್ನೊದನ್ನ ತಿಳಿಸಿಕೊಡ್ತೀವಿ ಓದಿರಿ.

ಆನ್ಲೈನ್ ಪಾವತಿಗಳ ಬಗ್ಗೆ ಜ್ಞಾನದ ಕೊರತೆಯಿಂದಾಗಿ ಮೋಸಗಾರರು ಬಳಕೆದಾರರನ್ನು ಲೂಟಿ ಮಾಡುವುದು ಇತ್ತಿಚಿಗೆ ಸುಲಭವಾಗಿ ಬಿಟ್ಟಿದೆ. ಅದರಲ್ಲೂ ಇ-ಕಾಮರ್ಸ್ ಪ್ಲಾಟ್ಫಾರ್ಮ್ಗಳಲ್ಲಿ ಈ ರೀತಿಯ ಹಗರಣಗಳು ಸಾಮಾನ್ಯವಾಗಿದೆ. ಅದರಲ್ಲಿ ಆನ್ಲೈನ್ ಮಾರುಕಟ್ಟೆ OLX ಹಗರಣಗಳ ಪ್ರಮುಖ ಬಲಿಪಶುಗಳಲ್ಲಿ ಒಂದಾಗಿದೆ. ಈಗಾಗಲೇ Olx ಮೂಲಕ ದೇಶಾದ್ಯಂತ ಹೆಚ್ಚಿನ ಬಳಕೆದಾರರು ಮೋಸ ಹೋಗಿರೋದು ಕಂಡು ಬಂದಿದೆ. ಸದ್ಯ ಇತ್ತೀಚಿನ ದೆಹಲಿ ಸಿಎಂ ಪುತ್ರಿ ಪ್ರಕರಣ ಇದೀಗ ಸಿಎಂ ನಿವಾಸದ ಸಮೀಪವಿರುವ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಮೋಸ ಪ್ರಕರಣ ದಾಖಲಿಸಿದ್ದು, ಆರೋಪಿಗಳನ್ನು ಹುಡುಕಲು ಪ್ರಾರಂಭಿಸಿದ್ದಾರೆ.

ಅರವಿಂದ್ ಕೇಜ್ರಿವಾಲ್ ಅವರ ಮಗಳಿಗೆ ಆನ್ಲೈನ್ ನಲ್ಲಿ ವಂಚನೆ ಆಗಿದ್ದು ಹೇಗೆ?
ದೆಹಲಿ ಸಿಎಂ ಕೇಜ್ರಿವಾಲ್ ಅವರ ಪುತ್ರಿ ಹರ್ಷಿತಾ ಕೇಜ್ರಿವಾಲ್ ಅವರು ಜನಪ್ರಿಯ ಮಾರಾಟ-ಖರೀದಿ ಆನ್ಲೈನ್ ಪ್ಲಾಟ್ಫಾರ್ಮ್ ಒಎಲ್ಎಕ್ಸ್ನಲ್ಲಿ ಸೆಕೆಂಡ್ ಹ್ಯಾಂಡ್ ಸೋಫಾವನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದರು. ಪ್ಲಾಟ್ಫಾರ್ಮ್ನಲ್ಲಿ ಆಸಕ್ತ ಖರೀದಿದಾರರು ಆಕೆಯನ್ನು ಸಂಪರ್ಕಿಸಿದರು. ಆಸಕ್ತ ಖರೀದಿದಾರ ನೆಪದಲ್ಲಿದ್ದ ವಂಚಕನು ಹರ್ಷಿತಾಗೆ ಕ್ಯೂಆರ್ ಕೋಡ್ ಕಳುಹಿಸಿ, ಇದರ ಮೂಲಕ ಹಣವನ್ನು ಸ್ವೀಕರಿಸಲು ಸ್ಕ್ಯಾನ್ ಮಾಡಲು ಹೇಳಿದ್ದಾನೆ. ಅಲ್ಲದೆ ಮೊದಲ ಬಾರಿ ನಂಬಿಕೆ ಗಿಟ್ಟಿಸುವುದಕ್ಕಾಗಿ ಸಣ್ಣ ಮೊತ್ತವನ್ನು ಅವಳ ಖಾತೆಗೆ ವರ್ಗಾಯಿಸಿದ್ದಾನೆ. ಆದರೆ ನಂತರ, ಅವಳ ಖಾತೆಯಿಂದ 34,000 ರೂಗಳನ್ನು ಎರಡು ಪ್ರತ್ಯೇಕ ಕಂತುಗಳಲ್ಲಿ ಡೆಬಿಟ್ ಮಾಡಿಕೊಂಡಿದ್ದಾನೆ. ಮೊದಲು 20,000 ರೂ ಮತ್ತು ನಂತರ 14,000 ರೂ. ಈ ಮೂಲಕ ಸಿಎಂ ಪುತ್ರಿಗೆ ವಂಚಕ ಪಂಗನಾಮ ಹಾಕಿದ್ದಾನೆ.

ಈ ಹಗರಣ ಹೇಗೆ ಕಾರ್ಯನಿರ್ವಹಿಸುತ್ತದೆ?
ಈ ರೀತಿಯ ಹಗರಣದಲ್ಲಿ, ದೆಹಲಿ ಸಿಎಂ ಅವರ ಮಗಳಂತೆ, ಬಲಿಪಶುಗಳ ವಿಶ್ವಾಸವನ್ನು ಗಳಿಸಿದ ನಂತರ ಮೋಸಗಾರರು ಏಕೀಕೃತ ಪಾವತಿ ಇಂಟರ್ಫೇಸ್ ಅಥವಾ ಯುಪಿಐ ಅನ್ನು ಬಳಸುತ್ತಾರೆ. ಗೂಗಲ್ ಪೇ, ಫೋನ್ಪೇ, ಮತ್ತು ಇತರ ಅಪ್ಲಿಕೇಶನ್ಗಳ ಮೂಲಕ ಮೂಸ ಮಾಡುತ್ತಾರೆ. ಇದು ಸುಲಭ, ಸರಳ ಮತ್ತು ತ್ವರಿತ. ಆದಾಗ್ಯೂ, ತಾಂತ್ರಿಕ ಕೊರತೆಯು ಮೋಸಗಾರರಿಂದ ಹಗರಣ ಮಾಡುವುದಕ್ಕೆ ವಂಚಕರಿಗೆ ಸುಲಭವಾಗಿದೆ. ವಂಚಕರು ಕ್ಯೂಆರ್ ಕೋಡ್ ಅಥವಾ ಬಲಿಪಶು ಪಟ್ಟಿ ಮಾಡಿದ ವಸ್ತುವನ್ನು ಖರೀದಿಸುವ ನೆಪದಲ್ಲಿ ಪಾವತಿಯನ್ನು ಸ್ವೀಕರಿಸಲು ವಿನಂತಿಯನ್ನು ಕಳುಹಿಸುತ್ತಾರೆ. ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಲು ಅಥವಾ ಪಾವತಿ ವಿನಂತಿಯನ್ನು ಸ್ವೀಕರಿಸಲು ಸ್ಕ್ಯಾಮರ್ ಬಳಕೆದಾರರನ್ನು ಕೇಳುತ್ತಾನೆ, ಇಲ್ಲದಿದ್ದರೆ ವ್ಯವಹಾರವು ವಿಫಲಗೊಳ್ಳುತ್ತದೆ. ಅವರು ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದ ತಕ್ಷಣ ಅಥವಾ ವಿನಂತಿಯನ್ನು ಸ್ವೀಕರಿಸಿದ ತಕ್ಷಣ, ಅವರ ಖಾತೆಯಿಂದ ಮೊತ್ತವನ್ನು ಕಡಿತಗೊಳಿಸಲಾಗುತ್ತದೆ.

ಇಂತಹ ವಂಚನೆಯನ್ನು ತಪ್ಪಿಸುವುದು ಹೇಗೆ?
ಇ-ಕಾಮರ್ಸ್ ಪ್ಲಾಟ್ಫಾರ್ಮ್ಗಳಲ್ಲಿ ಇಂತಹ ವ್ಯವಹಾರಗಳನ್ನು ಮಾಡುವಾಗ ಬಳಕೆದಾರರು ಶಾಂತವಾಗಿ ಮತ್ತು ಸಂಯೋಜನೆ ಹೊಂದಿರಬೇಕು. ಯಾವುದೇ ಪಾವತಿ ವಿನಂತಿಯನ್ನು ಸ್ವೀಕರಿಸುವ ಮೊದಲು ಅವರು ಎಲ್ಲವನ್ನೂ ನಿರ್ಣಯಿಸಬೇಕು. ನೆನಪಿನಲ್ಲಿಟ್ಟುಕೊಳ್ಳಬೇಕಾದ ಮೂಲ ವಿಷಯವೆಂದರೆ ಎಲ್ಲಾ ಯುಪಿಐ ಅಪ್ಲಿಕೇಶನ್ಗಳು ಬಳಕೆದಾರರು ಪಾವತಿ ಮಾಡುವಾಗ ತಮ್ಮ ಯುಪಿಐ ಪಿನ್ ಅಥವಾ ಎಂ-ಪಿನ್ ಅನ್ನು ನಮೂದಿಸುವಂತೆ ಕೇಳಿಕೊಳ್ಳುತ್ತಾರೆ, ಇದು ಪ್ರತಿ ಲಿಂಕ್ ಮಾಡಿದ ಬ್ಯಾಂಕ್ ಖಾತೆಗೂ ಭಿನ್ನವಾಗಿರುತ್ತದೆ. ಪಾವತಿಗಳನ್ನು ಸ್ವೀಕರಿಸಲು ಇದು ಅಗತ್ಯವಿಲ್ಲ. ಆದ್ದರಿಂದ, ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದ ನಂತರ ಈ ಪಿನ್ ಅನ್ನು ಹಾಕಲು ಅಪ್ಲಿಕೇಶನ್ ನಿಮ್ಮನ್ನು ಕೇಳಿದರೆ, ಕೋಡ್ ಅನ್ನು ನಮೂದಿಸಬೇಡಿ ಮತ್ತು ವ್ಯವಹಾರವನ್ನು ರದ್ದುಗೊಳಿಸಿ.


Click it and Unblock the Notifications



