ಭಾರತರತ್ನ ಸರ್‌ಎಂವಿಗೆ ಗೂಗಲ್‌ನಿಂದ ಡೂಡಲ್‌ ನಮನ ..!

|

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ಭಾರತರತ್ನ ಸರ್‌.ಎಂ.ವಿಶ್ವೇಶ್ವರಯ್ಯ ಅವರಿಗೆ ಡೂಡಲ್‌ ಮೂಲಕ ಗೌರವ ಸಲ್ಲಿಸಿದೆ. ವಿಶ್ವೇಶ್ವರಯ್ಯನವರ 158ನೇ ಜನ್ಮದಿನವಾದ ಸೆಪ್ಟೆಂಬರ್ 15ರಂದು ಇಂಜಿನಿಯರ್‌ಗಳ ದಿನವೂ ಕೂಡ ಹೌದು. ಅದಕ್ಕಾಗಿ ಗೂಗಲ್‌ ತನ್ನ ಡೂಡಲ್‌ ಬದಲಿಸುವ ಮೂಲಕ ಕೆಆರ್‌ಎಸ್‌ ನಿರ್ಮಾತೃ ವಿಶ್ವೇಶ್ವರಯ್ಯನವರಿಗೆ ಗೌರವ ಸಲ್ಲಿಸಿದೆ.

ಭಾರತರತ್ನ ಸರ್‌ಎಂವಿಗೆ ಗೂಗಲ್‌ನಿಂದ ಡೂಡಲ್‌ ನಮನ ..!

ಗೂಗಲ್ ವಿಶೇಷ ದಿನಗಳು, ಪ್ರಸಿದ್ಧ ವ್ಯಕ್ತಿಗಳ ಜನ್ಮದಿನಗಳಂದು ತನ್ನ ಹೋಮ್‌ ಪೇಜ್‌ನಲ್ಲಿರುವ ಲೋಗೋ ಬದಲಿಸುವ ಕಾರ್ಯವನ್ನು ಮಾಡುತ್ತದೆ. ದೇಶ-ವಿದೇಶದ ಪ್ರತಿಷ್ಠಿತ ಸಾಧಕರ ಜನ್ಮದಿನದಂದೂ ಹಾಗೂ ವಿಶೇಷ ದಿನಗಳಂದು ಅದರದ್ದೇ ಡೂಡಲ್ ನಿರ್ಮಿಸಿ ಅವರ ಸಾಧನೆಯನ್ನು ತಿಳಿಸುವ ಮತ್ತು ಸ್ಮರಿಸುವ ಮೂಲಕ ಗೌರವ ವಂದನೆಯನ್ನು ಸಲ್ಲಿಸುತ್ತದೆ. ಅದರಂತೆ ಇಂದು ಗೂಗಲ್ನಲ್ಲಿ ಸರ್‌ಎಂವಿ ಅವರ ಜನ್ಮ ದಿನಕ್ಕೆ ಡೂಡಲ್‌ ಗೌರವವನ್ನು ಸಲ್ಲಿಸಿದೆ.

ಗೂಗಲ್ ಡೂಡಲ್‌ನಲ್ಲಿ ಏನೀದೆ..?

ಗೂಗಲ್ ಡೂಡಲ್‌ನಲ್ಲಿ ಏನೀದೆ..?

ಗೂಗಲ್‌ ಸರ್ .ಎಂ.ವಿ ಅವರ ನೆನಪಿಗಾಗಿ ಪ್ರಕಟಿಸಿರುವ ಡೂಡಲ್‌ನಲ್ಲಿ ವಿಶ್ವೇಶ್ವರಯ್ಯನವರ ಭಾವಚಿತ್ರವನ್ನು ನೀಡಿದ್ದು, ಹಿನ್ನೆಲೆಯಲ್ಲಿ ಆಣೆಕಟ್ಟನ್ನು ನೀಡಲಾಗಿದೆ.

ಸ್ವಯಂಚಾಲಿತ ಫ್ಲಡ್‌ಗೇಟ್‌ಗಳ ಪಿತಾಮಹ

ಸ್ವಯಂಚಾಲಿತ ಫ್ಲಡ್‌ಗೇಟ್‌ಗಳ ಪಿತಾಮಹ

ಅಣೆಕಟ್ಟುಗಳಲ್ಲಿ ಉಪಯೋಗಿಸಲಾಗುವ ಸ್ವಯಂಚಾಲಿತ ಫ್ಲಡ್ ಗೇಟ್ ವಿನ್ಯಾಸ ಆವಿಷ್ಕರಿಸಿ ಪೇಟೆಂಟ್ ಪಡೆದರು. ನಂತರ ಮೊದಲ ಬಾರಿಗೆ 1902 ರಲ್ಲಿ ಈ ಸ್ವಯಂಚಾಲಿತ ಫ್ಲಡ್ ಗೇಟ್ ಗಳನ್ನು ಪುಣೆಯ 'ಖಡಕ್ವಾಸ್ಲಾ' ಅಣೆಕಟ್ಟಿನಲ್ಲಿ ಕಾರ್ಯಾರಂಭ ಮಾಡಿದವು. ಅಲ್ಲಿನ ಯಶಸ್ಸಿನ ನಂತರ ಗ್ವಾಲಿಯರ್ನ 'ಟಿಗ್ರಾ' ಮತ್ತು ಕರ್ನಾಟಕದ 'ಕೃಷ್ಣರಾಜಸಾಗರ' ಅಣೆಕಟ್ಟುಗಳಲ್ಲಿ ಸಹ ಸ್ವಯಂಚಾಲಿತ ಫ್ಲಡ್‌ಗೇಟ್‌ಗಳನ್ನು ಬಳಸಲಾಯಿತು.

ಕೆಆರ್‌ಎಸ್‌ ನಿರ್ಮಾತೃ

ಕೆಆರ್‌ಎಸ್‌ ನಿರ್ಮಾತೃ

1924ರಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಮಂಡ್ಯ ಜಿಲ್ಲೆಯಲ್ಲಿ ಕೃಷ್ಣರಾಜ ಸಾಗರ ಜಲಾಶಯವನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಸರ್‌.ಎಂ.ವಿಶ್ವೇಶ್ವರಯ್ಯ. ಕೆಆರ್‌ಎಸ್‌ನಿಂದ ಬೆಂಗಳೂರು ಸೇರಿ ಅನೇಕ ನಗರಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಹಳೇ ಮೈಸೂರು ಭಾಗದಲ್ಲಿ ಕೃಷಿಗೆ ಬಹಳಷ್ಟು ಸಹಾಯಕವಾಗಿದೆ.

ಮೈಸೂರು ದಿವಾನರು

ಮೈಸೂರು ದಿವಾನರು

ಮೋಕ್ಷಗುಂಡಂ ವಿಶ್ವೇಶ್ವರಯ್ಯ ಎಂದು ಕರೆಯಲಾಗುವ ಇವರು ಮೈಸೂರು ಸಂಸ್ಥಾನದ 19ನೇ ದಿವಾನರಾಗಿ, 1912 ರಿಂದ 1918ರವರೆಗೆ ಕಾರ್ಯನಿರ್ವಹಿಸಿ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡಿದ್ದಾರೆ. ಇವರ ಅಧಿಕಾರಾವಧಿಯಲ್ಲಿ ಕೈಗಾರಿಕೆ ಮತ್ತು ಕೃಷಿಗೆ ಹೆಚ್ಚಿನ ಆದ್ಯತೆ ದೊರೆತಿದ್ದು, 1917ರಲ್ಲಿ ಬೆಂಗಳೂರಿನಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಸ್ಥಾಪಿಸಲಾಯಿತು. ನಂತರ ಆ ಕಾಲೇಜಿಗೆ ಅವರ ಹೆಸರನ್ನೇ ಇಡಲಾಗಿದೆ.

ಸರ್‌ಎಂವಿ ಪಯಣ

ಸರ್‌ಎಂವಿ ಪಯಣ

ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೆಬಿಹಾಳದ ಬ್ರಾಹ್ಮಣ ಕುಟುಂಬವೊಂದರಲ್ಲಿ 1861ರ ಸೆಪ್ಟೆಂಬರ್ 15ರಂದು ಜನಿಸಿದ ವಿಶ್ವೇಶ್ವರಯ್ಯ ಅವರ ತಂದೆ ಶ್ರೀನಿವಾಸ ಸಂಸ್ಕೃತ ವಿದ್ವಾಂಸರಾಗಿದ್ದರು. ಪ್ರಾಥಮಿಕ ಶಿಕ್ಷಣವನ್ನು ಚಿಕ್ಕಬಳ್ಳಾಪುರದಲ್ಲಿ, ಪ್ರೌಢಶಿಕ್ಷಣವನ್ನು ಬೆಂಗಳೂರಿನಲ್ಲಿ ಪಡೆದರು. ನಂತರ 1881ರಲ್ಲಿ ಮದ್ರಾಸ್‌ ವಿವಿಯಿಂದ ಬಿಎ ಪದವಿ ಪಡೆದರು. ನಂತರ ಮುಂಬೈನಲ್ಲಿ ಲೋಕೋಪಯೋಗಿ ಇಲಾಖೆ ಸೇರಿ, 1908ರಲ್ಲಿ ಸ್ವಯಂ ನಿವೃತ್ತಿ ಘೋಷಿಸಿದರು. ನಂತರ ಮೈಸೂರು ದಿವಾನರಾಗಿ ಸೇವೆ ಸಲ್ಲಿಸಿದ ಇವರು 1962ರಲ್ಲಿ ನಿಧನರಾದರು.

ಭಾರತರತ್ನ ವಿಶ್ವೇಶ್ವರಯ್ಯ

ಭಾರತರತ್ನ ವಿಶ್ವೇಶ್ವರಯ್ಯ

ಇವರ ಸಾಧನೆಗೆ ಅನೇಕ ಪ್ರಶಸ್ತಿಗಳು ಬಂದಿದ್ದು ಅದರಲ್ಲಿ ಭಾರತದ ಅತ್ಯುನ್ನತ ಗೌರವ ಭಾರತರತ್ನವೂ ಕೂಡ ಸೇರಿದೆ. 1955ರಲ್ಲಿ ಸರ್‌.ಎಂ.ವಿ ಅವರಿಗೆ ಭಾರತ ಸರ್ಕಾರ ಭಾರತರತ್ನವನ್ನು ನೀಡಿ ಗೌರವಿಸಿತು. ಅದಲ್ಲದೇ ಬ್ರಿಟಿಷ್ ಇಂಡಿಯಾ ಸಾಮ್ರಾಜ್ಯದಲ್ಲಿ ಉತ್ತಮ ಸಾರ್ವಜನಿಕ ಸೇವೆಗಾಗಿ ಇಂಗ್ಲೆಂಡ್‌ ರಾಜ 5ನೇ ಜಾರ್ಜ್‌ನಿಂದ ನೈಟ್‌ ಕಮಾಂಡರ್‌ ಎಂಬ ಬಿರುದನ್ನು ಸಹ ಪಡೆದಿದ್ದರು. ಇವರ ಜನ್ಮದಿನವನ್ನು ಭಾರತದಲ್ಲಿ ಇಂಜಿನಿಯರ್‌ಗಳ ದಿನವನ್ನಾಗಿ ಆಚರಿಸಿ ಸರ್‌.ಎಂ.ವಿ.ಗೆ ಗೌರವ ಸಲ್ಲಿಸುತ್ತಿದ್ದಾರೆ.

ಮೊದಲ ಡೂಡಲ್ ಬಂದಿದ್ದು 1998ರಲ್ಲಿ

ಮೊದಲ ಡೂಡಲ್ ಬಂದಿದ್ದು 1998ರಲ್ಲಿ

ಗೂಗಲ್ ತನ್ನ ಮೊದಲ ಡೂಡಲ್ ಪರಿಚಯಿಸಿದ್ದು ಆಗಸ್ಟ್ 20, 1998ರಲ್ಲಿ. ಇದನ್ನು ಲ್ಯಾರಿ ಪೇಜ್ ಮತ್ತು ಸರ್ಜಿ ಬ್ರಿನ್ ಎಂಬುವವರು ಸೃಷ್ಟಿಸಿದರು. ಅದು ಬರ್ನಿಂಗ್ ಮ್ಯಾನ್ ಫೆಸ್ಟಿವಲ್ ಕುರಿತ ಡೂಡಲ್ ಆಗಿತ್ತು. ಇದು ಉತ್ಸವದಲ್ಲಿ ಗೂಗಲ್ ಬಳಕೆದಾರರು ಇಲ್ಲ ಎನ್ನುವುದನ್ನು ನೆನಪಿಸಿತ್ತು. ಅಂದಿನಿಂದ ಇಂದಿನವರೆಗೂ ಗೂಗಲ್ ಪ್ರಮುಖ ವ್ಯಕ್ತಿಗಳ ಜನ್ಮದಿನ, ಪ್ರುಮಖ ದಿನಗಳು, ಪ್ರಮುಖ ಪಂದ್ಯಾವಳಿ ಸಂದರ್ಭದಲ್ಲಿ ವಿಶೇಷ ಡೂಡಲ್ ಪ್ರಕಟಿಸುವುದು ವಾಡಿಕೆಯಾಗಿದೆ.

ಡಾ.ರಾಜ್‌ಗೂ ನಮನ ಸಲ್ಲಿಸಿದ್ದ ಗೂಗಲ್

ಡಾ.ರಾಜ್‌ಗೂ ನಮನ ಸಲ್ಲಿಸಿದ್ದ ಗೂಗಲ್

ಏಪ್ರಿಲ್‌ 24, 2017ರಂದು ಗೂಗಲ್‌ ಡಾ.ರಾಜ್‌ಕುಮಾರ್ ಅವರ ಡೂಡಲ್‌ ರಚಿಸಿ, ನಟ ಸಾರ್ವಭೌಮನಿಗೆ ಜನ್ಮದಿನದ ಗೌರವವನ್ನು ಸಲ್ಲಿಸಿ ಅಸಂಖ್ಯಾತ ಕನ್ನಡಿಗರ ಮನ ಗೆದ್ದಿತ್ತು. ಚಿತ್ರಮಂದಿರದಲ್ಲಿನ ದೊಡ್ದ ಪರದೆಯಲ್ಲಿ ಅಣ್ಣಾವ್ರ ಭಾವಚಿತ್ರವನ್ನು ಸೇರಿಸಿ ಅಭಿಮಾನಿಗಳು ವೀಕ್ಷಿಸುತ್ತಿರುವ ಡೂಡಲ್‌ನ್ನು ಗೂಗಲ್ ರಚಿಸಿತ್ತು.

ಕುವೆಂಪು ಅವರಿಗೂ ಸಂದ ಡೂಡಲ್ ಗೌರವ

ಕುವೆಂಪು ಅವರಿಗೂ ಸಂದ ಡೂಡಲ್ ಗೌರವ

ಡಿಸೆಂಬರ್ 29, 2017ರಂದು ರಾಷ್ಟ್ರಕವಿ ಕುವೆಂಪು ಅವರಿಗೆ ಡೂಡಲ್ ರಚಿಸುವ ಮೂಲಕ ಗೂಗಲ್ ನಮನ ಸಲ್ಲಿಸಿತ್ತು. ಕುವೆಂಪು ಅವರ ಜನ್ಮದಿನಕ್ಕೆ ಗೂಗಲ್ ತನ್ನ ಮುಖಪುಟದಲ್ಲಿ ಕುವೆಂಪು ಭಾವ ಚಿತ್ರದ ಜತೆಗೆ ಕನ್ನಡದಲ್ಲಿಯೇ ಗೂಗಲ್ ಎಂದು ಬರೆದಿರುವ ಡೂಡಲ್ ಮೂಲಕ ವಿಶೇಷ ಗೌರವ ಸಲ್ಲಿಸಿತ್ತು. ಬಿಳಿ ಪಂಚೆ ಮತ್ತು ಜುಬ್ಬದಲ್ಲಿ ಕುವೆಂಪು ಕಂಗೊಳಿಸುತ್ತಿದ್ದು, ಪ್ರಕೃತಿಯ ಮಡಿಲಲ್ಲಿ ಬಂಡೆ ಮೇಲೆ ಕುಳಿತಿರುವ ಕುವೆಂಪು ಭಾವಚಿತ್ರವನ್ನು ಗೂಗಲ್ ಮುಖಪುಟದಲ್ಲಿ ಬಳಕೆ ಮಾಡಿಕೊಂಡಿತ್ತು.

ವಿಶ್ವವನ್ನೇ ಬದಲಾಯಿಸಿದ ಅಸಾಮಾನ್ಯ ಭಾರತೀಯ ವಿಜ್ಞಾನಿಗಳು ಇವರೆಲ್ಲರೂ!!

ವಿಶ್ವವನ್ನೇ ಬದಲಾಯಿಸಿದ ಅಸಾಮಾನ್ಯ ಭಾರತೀಯ ವಿಜ್ಞಾನಿಗಳು ಇವರೆಲ್ಲರೂ!!

ಪ್ರತಿಯೊಬ್ಬರ ಜೀವನದಲ್ಲಿಯೂ ಅವರೆ ಗಮನಿಸದಷ್ಟು ಬದಲಾವಣೆ ಮಾಡಿರುವ ವಿಜ್ಞಾನವು ಇಂದು ದಿನ ಬಳಕೆಯ ವಸ್ತುಗಳಿಂದ ಹಿಡಿದು ಉನ್ನತ ತಂತ್ರಜ್ಞಾನದವರೆಗೆ ಸಾಗಿದೆ. ವಿಜ್ಞಾನದ ನೆರವಿಲ್ಲದೆ ಒಂದು ಕ್ಷಣವೂ ಬದುಕಲು ಸಾಧ್ಯವಿಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ, ಈಗ ಜೀವನವೇ ವಿಜ್ಞಾನ!!
ಇನ್ನು ವಿಶ್ವ ವಿಜ್ಞಾನ ಲೋಕಕ್ಕೆ ಭಾರತೀಯರ ಕೊಡುಗೆ ಏನು ಎಂದು ಪ್ರಶ್ನಿಸಿದರೆ ಎಲ್ಲರಿಗೂ ಥಟ್ಟನೆ ನೆನಪಾಗುವುದು 'ಸೊನ್ನೆ' ಎಂದು ಮಾತ್ರ! ಇಡೀ ವಿಶ್ವಕ್ಕೆ ಭಾರತೀಯರು ಸೊನ್ನೆಯನ್ನು ನೀಡಿರುವುದು ಅದ್ಬುತವೇ ಸರಿ. ಆದರೆ, ಸೊನ್ನೆಯೊಂದನ್ನು ಬಿಟ್ಟು ಭಾರತೀಯರು ವಿಶ್ವಕ್ಕೆ ನೀಡಿರುವ ಕೊಡುಗೆಗಳನ್ನು ನೆನಪಿಸಿಕೊಳ್ಳದೇ ಇರುವುದು ಮಾತ್ರ ದುರಂತ.!!
ಹಾಗೆಯೇ ವಿಜ್ಞಾನಿಗಳು ಎಂದರೆ ಐನ್‌ಸ್ಟೀನ್, ಐಸಾಕ್ ನ್ಯೂಟನ್ ಮತ್ತು ಸ್ಟೀಫನ್ ಹಾಕಿಂಗ್ ಎಂದು ಹೇಳುತ್ತಾರೆ ಹೊರತು ಭಾರತದ ಯಾವೊರ್ವ ಸಾಧಕ ವಿಜ್ಞಾನಿಯನ್ನು ಸಹ ನೆನೆಸಿಕೊಳ್ಳುವುದಿಲ್ಲ.! ಹಾಗಾಗಿ, ಭಾರತ ಕಂಡಂತಹ ಅಸಾಮಾನ್ಯ 7 ಜನ ಭಾರತೀಯ ವಿಜ್ಞಾನಿಗಳನ್ನು ನಾವು ಮತ್ತೆ ಮತ್ತೆ ನೆನಪಿಸಿಕೊಳ್ಳೋಣ ಎಂಬುದಕ್ಕೆ ಇಂದಿನ ಲೇಖನ.!!

ಸಿ.ವಿ. ರಾಮನ್!!

ಸಿ.ವಿ. ರಾಮನ್!!

ವಿಶ್ವದ ಭೌತ ವಿಜ್ಞಾನಕ್ಕೆ ಭಾರೀ ಕೊಡುಗೆಯನ್ನು ನೀಡಿದ ಸಿ.ವಿ. ರಾಮನ್ ಅವರು 1888 ನವೆಂಬರ್ 7ರಂದು ತಮಿಳುನಾಡಿನ ತಿರುಚನಾಪಳ್ಳಿಯಲ್ಲಿ ಜನಿಸಿದರು. 1930ರಲ್ಲಿ . ಇವರು ಆವಿಷ್ಕರಿಸಿದ ರಾಮನ್ ಪರಿಣಾಮಗಳಿಗೆ ಭೌತಶಾಸ್ತ್ರ ವಿಭಾಗದಲ್ಲಿ 'ನೊಬೆಲ್' ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇವರು 1970 ನವೆಂಬರ್ 21 ರಂದು ಬೆಂಗಳೂರಿನಲ್ಲಿ ಮೃತಪಟ್ಟರು.

ಸರ್.ಎಂ ವಿಶ್ವೇಶ್ವರಯ್ಯ!!

ಸರ್.ಎಂ ವಿಶ್ವೇಶ್ವರಯ್ಯ!!

1860ರಲ್ಲಿ ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯಲ್ಲಿ ಜನಿಸಿದ ಕರ್ನಾಟಕದ ಸುಪುತ್ರ ಸರ್.ಎಂ ವಿಶ್ವೇಶ್ವರಯ್ಯನವರು ವಿಶ್ವದ ಪ್ರಖ್ಯಾತ ಇಂಜಿನಿಯರ್‌ಗಳಲ್ಲಿ ಒಬ್ಬರು ಎಂದು ಇಡೀ ವಿಶ್ವವೇ ಒಪ್ಪಿಕೊಂಡಿದೆ. ಕರ್ನಾಟಕದಲ್ಲಿ ಕೆಆರ್ಎಸ್ ನಿರ್ಮಿಸಿದ ಇವರು ದೇಶದಲ್ಲಿ ಕಾಲುವೆ ನೀರಾವರಿ ವ್ಯವಸ್ಥೆ ನಿರ್ಮಾಣದಲ್ಲಿ ಗಣನೀಯ ಸೇವೆ ಸಲ್ಲಿಸಿದರು. ಏಪ್ರಿಲ್ 14 1962ರಲ್ಲಿ ಈ ಭಾರತ ರತ್ನ ತನ್ನ ಸೇವೆಯನ್ನು ನಿಲ್ಲಿಸಿತು.!!

ಎಸ್.ಚಂದ್ರಶೇಖರ್!!

ಎಸ್.ಚಂದ್ರಶೇಖರ್!!

ಕಪ್ಪುಕುಳಿಗಳ ಗಣಿತ ಸಿದ್ದಾಂತಕ್ಕಾಗಿ 1983ರಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಎಸ್.ಚಂದ್ರಶೇಖರ್ ಅವರು 1910 ಅಕ್ಟೋಬರ್ 19ರಂದು ಬ್ರಿಟಿಷ್ ಇಂಡಿಯಾದ ಆಳ್ವಿಕೆಯ ಲಾಹೋನ್‌ನಲ್ಲಿ ಜನಿಸಿದರು. ಕುಬ್ಜ ನಕ್ಷತ್ರಗಳಿಗೆ ಸಂಬಂಧಿಸಿದಂತೆ ಅನೇಕ ಸಂಶೋಧನೆ ಹಾಗೂ ಪ್ರಬಂಧಗಳನ್ನು ನೀಡಿದ ಇವರು ರಲ್ಲಿ ಚಿಕಾಗೋದಲ್ಲಿ ತಮ್ಮ 82ನೇ ವಯಸ್ಸಿನಲ್ಲಿ ಮೃತಪಟ್ಟರು.

ಹೋಮಿ ಜೆ ಬಾಬಾ!!

ಹೋಮಿ ಜೆ ಬಾಬಾ!!

ಭಾರತದ ಮೊದಲ ಪರಮಾಣು ಶಕ್ತಿ ಆಯೋಗದ ಅಧ್ಯಕ್ಷರಾಗಿದ್ದ ಹೋಮಿ ಜೆ ಬಾಬಾ ಅವರು 1909 ಅಕ್ಟೋಬರ್ 30 ರಂದು ಮುಂಬೈನಲ್ಲಿ ಜನಿಸಿದರು. ದೇಶದ ಪರಮಾಣು ಶಕ್ತಿಯ ಪಿತಾಮಹ ಎಂದೇ ಖ್ಯಾತರಾಗಿದ್ದ ಹೋಮಿ ಜೆ ಬಾಬಾ ಅವರು 1966 ಜನವರಿ 24ರಂದು ವಿಮಾನ ಅಪಘಾತದಲ್ಲಿ ಮೃತಪಟ್ಟರು.

ಶ್ರೀನಿವಾಸನ್ ರಾಮಾನುಜಂ!!

ಶ್ರೀನಿವಾಸನ್ ರಾಮಾನುಜಂ!!

ಡಿಸೆಂಬರ್ 22, 1887 ನೇ ವರ್ಷ ತಮಿಳುನಾಡಿನಲ್ಲಿ ಭಾರತದ ಗಣಿತಶಾಸ್ತ್ರದ ಅದ್ಭುತ ಪ್ರತಿಭೆ ಶ್ರೀನಿವಾಸನ್ ರಾಮಾನುಜಂ ಅವರ ಜನನವಾಯಿತು. ಇಡೀ ವಿಶ್ವಕ್ಕೆ ಗಣೀತ ವಿಶ್ಲೇಷಣೆ, ಸಂಖ್ಯೆ ಸಿದ್ಧಾಂತ, ಅನಂತ ಸರಣಿ, ಮತ್ತು ಮುಂದುವರಿದ ಭಿನ್ನರಾಶಿಗಳ ಬಗ್ಗೆ ಹೆಚ್ಚಿನ ಕೊಡುಗೆ ನೀಡಿದ ಇವರು ಕೇವಲ 32ನೇ ವಯಸ್ಸಿಗೆ ವಿಧಿವಶವಾದರು.!!

ಜಗದೀಶ್ ಚಂದ್ರ ಬೋಸ್

ಜಗದೀಶ್ ಚಂದ್ರ ಬೋಸ್

ಸಸ್ಯಗಳಿಗೂ ಜೀವವಿದೆ ಎಂಬುದನ್ನು ಇಡೀ ಜಗತ್ತಿಗೆ ತಿಳಿಸಿಕೊಟ್ಟವರು ಅಸಾಮಾನ್ಯ ವಿಜ್ಞಾನಿ ಜಗದೀಶ್ ಚಂದ್ರ ಬೋಸ್ ಅವರು. ನವೆಂಬರ್ 30 1858 ರಲ್ಲಿ ಪಶ್ಚಿಮ ಬಂಗಾಳದಲ್ಲಿ ಜನಿಸಿದ ಬೋಸ್ ಅವರು ಭೌತವಿಜ್ಞಾನ, ಜೀವಶಾಸ್ತ್ರ, ಸಸ್ಯಶಾಸ್ತ್ರಗಳ ಬಗ್ಗೆ ತಿಳಿದಿದ್ದರು. ವಿಶ್ವದ ಹಲವು ಖ್ಯಾತ ವಿಜ್ಞಾನಿಗಳೊಂದಿಗೆ ಇವರು ಸಂಪರ್ಕ ಹೊಂದಿದ್ದರು.

ಎ.ಪಿ.ಜೆ. ಅಬ್ದುಲ್ ಕಲಾಂ

ಎ.ಪಿ.ಜೆ. ಅಬ್ದುಲ್ ಕಲಾಂ

ಭಾರತದ ಮಾಜಿ ರಾಷ್ಟ್ರಪತಿಗಳಾದ ಕಲಾಂ ಅವರು ಭಾರತದ ಅಣು ವಿಜ್ಞಾನದ ಪ್ರಗತಿಯಲ್ಲಿ ಅಪಾರ ಸಾಧನೆ ಮಾಡಿದರು. ತಮಿಳುನಾಡಿನ ರಾಮೇಶ್ವರಂನಲ್ಲಿ ಬಡಕುಟುಂಬವೊಂದರಲ್ಲಿ ಜನಿಸಿದ ಅಬ್ದುಲ್ ಕಲಾಂ ಅವರು ಬಾಹ್ಯಕಾಶ ವಿಜ್ಞಾನದಲ್ಲಿ ಖ್ಯಾತನಾಮರಾಗಿದ್ದರು. ಭಾರತ ರತ್ನ ಪ್ರಶಸ್ತಿ ಪಡೆದ ಇವರು ಜುಲೈ 25, 2015ರಂದು ಮೃತರಾದರು.

Best Mobiles in India

English summary
Google doodle on Indian engineering legend Visvesvaraya on 157th birthday. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X