ಹೊಸ ಒಟಿಪಿ ಮರುಪಾವತಿ ವ್ಯವಸ್ಥೆ ಪರಿಚಯಿಸಿದೆ ಐಆರ್ಸಿಟಿಸಿ!..ಏನಿದು ತಿಳಿಯಿರಿ!
ರದ್ದಾದ ಅಥವಾ ಸಂಪೂರ್ಣ ವೇಟ್ ಲಿಸ್ಟ್ ಮಾಡಿದ ಟಿಕೆಟ್ಗಳಿಗಾಗಿ ಐಆರ್ಸಿಟಿಸಿ ( ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ) ಹೊಸ ಒಟಿಪಿ ಮರುಪಾವತಿ ವ್ಯವಸ್ಥೆಯನ್ನು ಪರಿಚಯಿಸಿದೆ. ಮರುಪಾವತಿ ಪ್ರಕ್ರಿಯೆಯನ್ನು ಸರಾಗಗೊಳಿಸುವ ಉದ್ದೇಶದಿಂದ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಹೊಸ ಯೋಜನೆಯನ್ನು ಪರಿಚಯಿಸಿದ್ದು, ಐಆರ್ಸಿಟಿಸಿ ಅಧಿಕೃತ ಏಜೆಂಟರು ಕಾಯ್ದಿರಿಸಿದ ಟಿಕೆಟ್ಗಳಿಗಾಗಿ ಒಟಿಪಿ ಆಧಾರಿತ ಮರುಪಾವತಿ ಯೋಜನೆ ಕಾರ್ಯನಿರ್ವಹಿಸುತ್ತದೆ.

ಮರುಪಾವತಿ ಪ್ರಕ್ರಿಯೆಗಾಗಿ ಪ್ರಯಾಣಿಕರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಎಸ್ಎಂಎಸ್ ಮೂಲಕ ಒಟಿಪಿ ಸ್ವೀಕರಿಸುತ್ತಾರೆ ಎಂದು ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ ತಿಳಿಸಿದ್ದು, ಒಟಿಪಿ ಪಠ್ಯ ಸಂದೇಶವು ಮರುಪಾವತಿ ಮಾಡಲಾಗುವ ಮೊತ್ತವನ್ನೂ ಒಳಗೊಂಡಿರುತ್ತದೆ. ಅಲ್ಲಿ ಪ್ರಯಾಣಿಕರು ಅವುಗಳನ್ನು ರದ್ದುಗೊಳಿಸುತ್ತಾರೆ ಅಥವಾ ಸಂಪೂರ್ಣ ವೇಟ್ಲಿಸ್ಟ್ ಮಾಡಿದ ಟಿಕೆಟ್ ಅನ್ನು ನೋಡಬಹುದಾಗಿದ್ದು, ಆ ಟಿಕೆಟ್ಗಳಿಗೆ ಮರುಪಾವತಿಯನ್ನು ನೀಡಲಾಗುತ್ತದೆ.
ಇನ್ನು ಟಿಕೆಟ್ಗಳನ್ನು ಕಾಯ್ದಿರಿಸುವಾಗ ಪ್ರಯಾಣಿಕರು ಸರಿಯಾದ ಮೊಬೈಲ್ ಸಂಖ್ಯೆಯನ್ನು ಅಧಿಕೃತ ಏಜೆಂಟರಿಗೆ ನಮೂದಿಸುವ ಅಗತ್ಯವಿದೆ ಎಂದು ಐಆರ್ಸಿಟಿಸಿ ಒತ್ತಿ ಹೇಳಿದೆ ಅಧಿಕೃತ ದಲ್ಲಾಳಿ ನಮೂದಿಸಿದ ದೂರವಾಣಿ ಸಂಖ್ಯೆಯನ್ನು ಸಹ ಎರಡು ಬಾರಿ ಪರಿಶೀಲಿಸುವಂತೆ ಪ್ರಯಾಣಿಕರಿಗೆ ಸೂಚಿಸಲಾಗಿದೆ. ರದ್ದಾದ ಅಥವಾ ವೇಟ್ಲಿಸ್ಟ್ ಮಾಡಿದ ಟಿಕೆಟ್ ಕೈಬಿಟ್ಟಾಗ ಮಾತ್ರ ಇ-ಟಿಕೆಟ್ಗಳಿಗಾಗಿ ಮಾತ್ರ ಒಟಿಪಿ ಆಧಾರಿತ ಮರುಪಾವತಿ ಕಾರ್ಯನಿರ್ವಹಿಸುತ್ತದೆ ಎಂದು ಸಚಿವಾಲಯವು ನೆನಪಿಸಲಿದೆ.
ಈ ಸೇವೆ ಉತ್ತಮವಾದರೂ, ಈ ಸೇವೆಯ ಅನುಷ್ಠಾನವು ಒಂದು ಪ್ರಶ್ನೆಯಾಗಿಯೇ ಉಳಿದಿದೆ. ರದ್ದಾದ ಅಥವಾ ಸಂಪೂರ್ಣ ವೇಟ್ ಲಿಸ್ಟ್ ಮಾಡಿದ ಟಿಕೆಟ್ಗಳಿಗಾಗಿ ಪ್ರಯಾಣಿಕರು ಮರುಪಾವತಿಗಾಗಿ ಐಆರ್ಸಿಟಿಸಿ ಒಟಿಪಿಯನ್ನು ಸ್ವೀಕರಿಸಿದ ನಂತರ, ಮರುಪಾವತಿ ಮೊತ್ತವನ್ನು ಪಡೆಯಲು ಅದನ್ನು ಅಧಿಕೃತ ಐಆರ್ಸಿಟಿಸಿ ಏಜೆಂಟರೊಂದಿಗೆ ಹಂಚಿಕೊಳ್ಳಬೇಕಿದೆ. ಈ ಪ್ರಕ್ರಿಯೆಯಲ್ಲಿ ಏಜೆಂಟರಿಂದ ಸಮಸ್ಯೆ ಎದುರಿಸಬಹುದು. ಆದರೂ ಅಂತಹ ದುಷ್ಕೃತ್ಯಗಳು ನಡೆಯುವುದಿಲ್ಲ ಎಂದು ರೈಲ್ವೆ ಸಚಿವಾಲಯ ನಂಬಿದೆ.
ಸ್ಟ್ಯಾಟಿಸ್ಟಾ ಡಾಟ್ ಕಾಮ್ ಪ್ರಕಾರ ಭಾರತದಲ್ಲಿ 299.24 ಮಿಲಿಯನ್ ಸ್ಮಾರ್ಟ್ಫೋನ್ ಬಳಕೆದಾರರಿದ್ದಾರೆ. ವೈ-ಫೈ ಸೇವೆಯನ್ನು ದೊಡ್ಡ ಪ್ರಮಾಣದಲ್ಲಿ ಹೊರತಂದರೆ ಪ್ರಯೋಜನ ಪಡೆಯುವ ಜನರ ಸಂಖ್ಯೆ ಹಲವು. ಅಂತೆಯೇ, ಹೊಸ ಒಪಿಟಿ ಮರುಪಾವತಿ ವ್ಯವಸ್ಥೆಯು ಪ್ರಯಾಣಿಕರ ಕೊನೆಯಲ್ಲಿ ಮರುಪಾವತಿ ಪ್ರಕ್ರಿಯೆಯನ್ನು ಸ್ಪಷ್ಟಪಡಿಸುವ ಮೂಲಕ ಪಾರದರ್ಶಕತೆಯನ್ನು ತರುವ ಗುರಿಯನ್ನು ಹೊಂದಿದೆ. ರೈಲ್ವೆ ಸಚಿವಾಲಯ ಇತ್ತೀಚೆಗೆ ಐಆರ್ಸಿಟಿಸಿ ಸೇವೆಗಳನ್ನು ಆಧುನೀಕರಿಸಲು ಪ್ರಯತ್ನಿಸುತ್ತಿದೆ.


Click it and Unblock the Notifications








