ಕಷ್ಟದಲ್ಲಿರುವವರಿಗೆ ಸಹಾಯ ಮಾಡಲಿರುವ ಫೇಸ್ಬುಕ್
ಬಳಕೆದಾರ ಬೆಂಬಲವನ್ನು ವರ್ಧಿಸುವ ಸಲುವಾಗಿ, ಸಾಮಾಜಿಕ ಮಾಧ್ಯಮ ದೈತ್ಯ ಫೇಸ್ಬುಕ್ ಕಳಕಳಿಯುಳ್ಳ ಸಂದೇಶ ರವಾನೆಯ ಹೊಸ ಆಯ್ಕೆಯೊಂದಿಗೆ ಮುಂದೆ ಬಂದಿದೆ. ಕಳಕಳಿಯುಳ್ಳ ಸಂದೇಶವನ್ನು ನಿಮ್ಮ ಸ್ನೇಹಿತರಿಗೆ ರವಾನಿಸುವ ಮೂಲಕ ಆತ್ಮಹತ್ಯೆಯಂತಹ ಯೋಚನೆಯಿಂದ ನೊಂದಿರುವವರಿಗೆ ಸಾಂತ್ವಾನನ್ನು ನೀಡಬಹುದಾಗಿದೆ.

ಅದೇ ರೀತಿ ಕಷ್ಟದಲ್ಲಿರುವವರಿಗೆ ನಾವು ಸಹಾಯ ಹಸ್ತವನ್ನು ಚಾಚಲಿದ್ದು ಬೇಕಾದ ಸಂಪನ್ಮೂಲವನ್ನು ಅವರಿಗೆ ಒದಗಿಸಲಾಗುತ್ತದೆ. ಅದೇ ರೀತಿ ಆತ್ಮಹತ್ಯೆಯ ನಿರ್ಧಾರವನ್ನು ತಾಳಿರುವವರಿಗೆ ಸೂಕ್ತವಾದ ಪರಿಹಾರವನ್ನು ಒದಗಿಸಿ ಅವರಿಗೆ ನೆರವಾಗುವ ಮಾನವೀಯ ಕಳಕಳಿಗೆ ಫೇಸ್ಬುಕ್ ಮುಂದಾಗಿದೆ.

ಫೇಸ್ಬುಕ್ನ ಈ ಕಾಳಜಿ ನಿಜಕ್ಕೂ ಸಾಮಾಜಿಕ ಮಾಧ್ಯಮ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನೇ ಇದು ಹುಟ್ಟು ಹಾಕಲಿದೆ ಎಂಬುದಂತೂ ನಿಜವಾಗಿದೆ.


Click it and Unblock the Notifications








