ಕೊನೆ ದಿನ ಕೆಲಸಕ್ಕೆ ಕುದುರೆ ಏರಿ ಬಂದ ಸಾಫ್ಟ್ ವೇರ್ ಇಂಜಿನಿಯರ್..!
ಆಫೀಸ್ ಗೆ ಯಾರಾದರೂ ಬಸ್ ನಲ್ಲಿ, ಆಟೋದಲ್ಲಿ, ಕಾರ್ ನಲ್ಲಿ ಅಥವಾ ಮೆಟ್ರೋದಲ್ಲಿ ಬರೋದನ್ನ ನೋಡಿದಿರಾ, ಆದರೆ ಬೆಂಗಳೂರಿನೊಲ್ಲೊಬ್ಬ ಕುದುರೆ ಸವಾರಿ ಮಾಡ್ತಾ ಆಫೀಸ್ ಗೆ ಹೋಗಿದಾನೆ. ಹೌದು, ಕೆಲಸದ ಕೊನೆ ದಿನ ವಿಶಿಷ್ಟವಾಗಿ ಹೋಗಬೇಕೆಂದು ತಿರ್ಮಾನಿಸಿದ ಸಾಫ್ಟ್ ವೇರ್ ಇಂಜಿನಿಯರ್ ಗೆ ಹೊಳೆದಿದ್ದೆ ಕುದುರೆ ಸವಾರಿ.

ಮೂಲತಃ ರಾಜಸ್ಥಾನದವರಾದ ರೂಪೇಶ್ ಕುಮಾರ್ ವರ್ಮಾ ತಮ್ಮ ಸಾಫ್ಟವೇರ್ ಇಂಜಿನಿಯರ್ ಕೆಲಸಕ್ಕೆ ವಿದಾಯ ಹೇಳುತ್ತಿದ್ದಾರೆ. ಆದ್ದರಿಂದ ಕೊನೆ ದಿನ ಕೆಲಸಕ್ಕೆ ವಿಶಿಷ್ಟವಾಗಿ ಕುದುರೆ ಸವಾರಿ ಮಾಡ್ಕೊಂಡು ಹೋಗಿದ್ದಾರೆ. ಅದಲ್ಲದೇ ಕುದುರೆಗೊಂದು ಬೋರ್ಡ್ ನೇತು ಹಾಕಿ ಅದರಲ್ಲಿ "ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೊನೆ ದಿನ" ಎಂದು ಬರೆದಿದ್ದರು.
ರೂಪೇಶ್ ಕುಮಾರ್ ವರ್ಮಾ ಕುದುರೆ ಸವಾರಿ ಮಾಡಬೇಕಾದರೆ, ಸಾರ್ವಜನಿಕರನ್ನು ಆಕರ್ಷಿಸಿದ್ದಂತೂ ಸುಳ್ಳಲ್ಲ. ಕೆಲವು ಜನಗಳ ಕ್ಯಾಮೆರಾದಲ್ಲೂ ಪೋಟೋ ಸ್ನಾಪ್ ಆಗಿ ರೂಪೇಶ್ ಕುಮಾರ್ ಉಳಿದರು. ಹೊಸ ದ್ಯಮ ಪ್ರಾರಂಭಿಸುವ ಇರಾದೆಯಲ್ಲಿದ್ದಾರೆ ರೂಪೇಶ್ ಕುಮಾರ್ .

ಬೆಂಗಳೂರಿನಲ್ಲಿ 8 ವರ್ಷಗಳಿಂದ ವಾಸವಿದ್ದ ವರ್ಮಾ, ಇಲ್ಲಿನ ಟ್ರಾಫಿಕ್ ಸಮಸ್ಯೆಯಿಂದ ಬಹಳ ಬೇಸತ್ತಿದ್ದರು. ಆದ್ದರಿಂದ ವರ್ಮಾ ಕುದುರೆ ಸವಾರಿ ಆಯ್ಕೆ ಮಾಡಿಕೊಂಡು ಇಂಟರ್ ಮಿಡಿಯೆಟ್ ರಿಂಗ್ ರೋಡ್ ಮೂಲಕ ಕಚೇರಿಗೆ ಹೋಗಿ ಟ್ರಾಫಿಕ್ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.


Click it and Unblock the Notifications