ಕರ್ನಾಟಕಕ್ಕೆ ಹೆಚ್ಚು ವರ್ಧ ಚಂಡಮಾರುತದ ಎಫೆಕ್ಟ್!!..ಇದು ಟೆಕ್ ವಿಷಯ!
ವರ್ಧ ಚಂಡಮಾರುತದ ಎಫೆಕ್ಟ್ ತಮಿಳುನಾಡು ಮತ್ತು ಆಂಧ್ರ ಪದೇಶ ರಾಜ್ಯಗಳಿಗಿಂತ ಹೆಚ್ಚಾಗಿ ಕರ್ನಾಟಕಕ್ಕೆ ಆಗಿದೆ!
ವರ್ಧ ಚಂಡಮಾರುತದ ಎಫೆಕ್ಟ್ ತಮಿಳುನಾಡು ಮತ್ತು ಆಂಧ್ರ ಪದೇಶ ರಾಜ್ಯಗಳಿಗಿಂತ ಹೆಚ್ಚಾಗಿ ಕರ್ನಾಟಕಕ್ಕೆ ಆಗಿದೆ.!! ಹೌದು, ಹೇಗೆ ಅಂತಿರಾ? ಎಲ್ಲವೂ ಅಂತರ್ಜಾಲವೇ ಆಗಿರುವ ಇಂದಿನ ದಿನಗಳಲ್ಲಿ ವರ್ಧ ಚಂಡಮಾರುತದ ಎಫೆಕ್ಟ್ನಿಂದ ಕರ್ನಾಟಕದಲ್ಲಿ ಇಂಟರ್ನೆಟ್ ವೇಗ ಕಡಿಮೆಯಾಗಿದೆ.!
ಚೆನ್ನೈ ಮತ್ತು ತ್ರಿಪುರಾದದಲ್ಲಿರುವ ಇಂಟರ್ನೆಟ್ ಗೇಟ್ ವೇಗೆ ಹೊಡೆತ ಬಿದ್ದ ಕಾರಣ ದೇಶದೆಲ್ಲೆಡೆ ಬ್ರಾಡ್ಬ್ಯಾಂಡ್ ಮತ್ತು ಮೊಬೈಲ್ ಇಂಟರ್ನೆಟ್ ವೇಗ ಹೆಚ್ಚು ಕಡಿಮೆಯಾಗಿದದ್ದು, ಕರ್ನಾಟಕದಲ್ಲಿ ಇದರ ಪ್ರಮಾಣ ಹೆಚ್ಚಾಗಿದೆ! ಹಾಗಾಗಿ, ಇಂಟರ್ನೆಟ್ ವೇಗ ಕಡಿಮೆಯಾದ ಹಿನ್ನೆಲೆಯಲ್ಲಿ ಗ್ರಾಹಕರು ಸೇವಾ ಕಂಪೆನಿಗಳಿಗೆ ದೂರು ನೀಡುತ್ತಿದ್ದಾರೆ.

ಶಿಯೋಮಿಯ ಅತ್ಯಾಧುನಿಕ ವಿ ಆರ್ ಹೆಡ್ಸೆಟ್ ಬೆಲೆ ಕೇವಲ 999 ರೂ.!! ವಿಶೇಷತೆಗಳೇನು?
ಟೆಲಿಕಾಂ ಕಂಪೆನಿಗಳು ಇದಕ್ಕೆ ಉತ್ತರಿಸುತ್ತಿದ್ದು, ವರ್ಧಾ ಚಂಡಮಾರುತದಿಂದ ಇಂಟರ್ನೆಟ್ ಗೇಟ್ ವೇಗೆ ಸಮಸ್ಯೆಯಾಗಿದೆ. ಸಮಸ್ಯೆಯನ್ನು ಬಹುಬೇಗ ಪರಿಹಾರ ಮಾಡಲಾಗುವುದು ದಯವಿಟ್ಟು ಸಹಕರಿಸಿ ಎಂದು ಮೆಸೇಜ್ ಕಳುಹಿಸುತ್ತಿವೆ. ಏಟ್ಟೆಲ್, ಮತ್ತು ವೊಡಾಫೋನ್ಗಳು ಈ ಬಗ್ಗೆ ತನ್ನ ಗ್ರಾಹಕರ ಕ್ಷಮೆ ಕೋರಿವೆ.

ಸ್ಲೋ ಇಂಟರ್ನೆಟ್ ಕಾರಣದಿಂದಾಗಿ ಹಲವು ಬ್ಯಾಂಕ್ಗಳಲ್ಲಿನ ವ್ಯವಹಾರ ನಡೆದಿಲ್ಲ ಎನ್ನಲಾಗಿದೆ. 1000 ಮತ್ತು 500 ನೋಟುಗಳು ರದ್ದಾದ ನಂತರ ಅಂತರ್ಜಲ ವ್ಯವಹಾದ ಹೆಚ್ಚಾಗಿದ್ದು, ಇಂಟರ್ನೆಟ್ ಸರಿಯಾಗಿ ದೊರೆಯದಿದ್ದರೆ ಇ-ವಾಲೆಟ್ ವ್ಯವಹಾರವೂ ಕುಸಿತದ ಬಿಸಿ ಎದುರಿಸುತ್ತಿದೆ.

ಎಲ್ಲವೂ ಅಂತರ್ಜಾಲವೇ ಆಗಿರುವ ಇಂದಿನ ದಿನಗಳಲ್ಲಿ ಒಂದು ದಿನ ಇಂಟರ್ನೆಟ್ ಕನೆಕ್ಷನ್ ಇಲ್ಲದಿದ್ದರೇ ಆಗುವ ತೊಂದರೆ ಊಹಿಸಲು ಅಸಾಧ್ಯ! ಕ್ಯಾಶ್ ಇಲ್ಲದೆಯೂ ಇರಬಹುದು ಆದರೆ ಇಂಟರ್ನೆಟ್ ಇಲ್ಲದೇ ಇಂದಿನ ವ್ಯವಹಾರಗಳು ನಡೆಯಲಾರವು
ಹೊಸ ಸ್ಮಾರ್ಟ್ಫೋನ್ಗಳ ಆನ್ಲೈನ್ ಡೀಲ್ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications








