ಸ್ನಾಪ್ಚಾಟ್ ಸಿಇಓಗೆ ಭಾರತೀಯರ ಪರ ಚಾಟಿ ಬೀಸಿದ ಫೇಸ್ಬುಕ್ ಸಿಇಓ ಹೇಳಿದ್ದೇನು..?
ಫೇಸ್ಬುಕ್ ಸಿಇಓ ಜುಕರ್ ಬರ್ಗ್ ಮಾತಿನ ಚಾಟಿ ಬೀಸಿದ್ದಾರೆ, ಭಾರತೀಯರ ಪರ ಬ್ಯಾಟಿಂಗ್ ಮಾಡಿದ್ದಾರೆ.
ಭಾರತ ಬಡವರ ದೇಶ ಎಂದು ವಿದಾತ್ಮಕ ಹೇಳಿಯನ್ನು ನೀಡಿ ಭಾರತೀಯ ಕೋಪಕ್ಕೆ ಗುರಿಯಾಗಿದ್ದ ಸ್ನಾಪ್ಚಾಟ್ ಆಪ್ ಸಿಇಓ ಇವಾನ್ ಸ್ಪೈಗೆಲ್ಗೆ ಫೇಸ್ಬುಕ್ ಸಿಇಓ ಜುಕರ್ ಬರ್ಗ್ ಮಾತಿನ ಚಾಟಿ ಬೀಸಿದ್ದಾರೆ, ಭಾರತೀಯರ ಪರ ಬ್ಯಾಟಿಂಗ್ ಮಾಡಿದ್ದಾರೆ. ಈ ಮೂಲಕ ತಮ್ಮ ಕಂಪನಿಯ ಪ್ರಮೋಷನ್ ಸಹ ಮಾಡಿಕೊಂಡಿದ್ದಾರೆ.

ಓದಿರಿ: ಬಿಡುಗಡೆಯಾಗಿದೆ ಜಿಯೋ DTH: ವಿಡಿಯೋ ನೋಡಿ..!!!!
ಸದ್ಯ ಭರ್ಜರಿ ಸದ್ದು ಮಾಡುತ್ತಿರುವ F8 ಸಮಾವೇಶ(ಫೇಸ್ಬುಕ್ ಡೆವಲಪರ್ಸ್ ಕಾನ್ಫರೆನ್ಸ್)ನಲ್ಲಿ ಮಾತನಾಡಿದ ಫೇಸ್ಬುಕ್ ಸಿಇಓ ಜುಕರ್ ಬರ್ಗ್, ನಾವು ನೀಡುವ ಸೇವೆಗಳು ಸಮುದಾಯದಲ್ಲಿರುವ ಎಲ್ಲರಿಗೂ ತಲುಪ ಬೇಕು, ಕೇವಲ ಶ್ರೀಮಂತರಿಗೆ ಬಡವರಿಗೆ ಎಂದು ಭೇದ ಭಾವ ಮಾಡಬಾರದು ಎಂದಿದ್ದಾರೆ.
ಫೇಸ್ಬುಕ್ ಇರುವುದು ಕೇವಲ ಶ್ರೀಮಂತರಿಗೆ ಮಾತ್ರವಲ್ಲ, ಬಡವರು ಫೇಸ್ಬುಕ್ ಸೇವೆಯನ್ನು ಪಡೆಯಲಿ ಎನ್ನುವ ಕಾರಣಕ್ಕೆ ಫೇಸ್ಬುಕ್ ಹಲವು ಸಂಶೋಧನೆಗಳನ್ನು ಕೈಗೊಳ್ಳುತ್ತಿದೆ. ಸಮಾಜದಲ್ಲಿರುವ ಕಡೆಯ ವ್ಯಕ್ತಿಗೂ ಫೇಸ್ಬುಕ್ ಬಳಕೆಯನ್ನು ಕೈಗೆಟುಕುವಂತೆ ಮಾಡುವುದು ನಮ್ಮ ಉದ್ದೇಶ ಎಂದಿದ್ದಾರೆ.

ಓದಿರಿ: ಸ್ಯಾಮ್ಸಂಗ್ ಫೋನ್ ಖರೀದಿಸಿ 309 ರೂ.ಗೆ 448 GB ಜಿಯೋ ಡೇಟಾ ಪಡೆಯಿರಿ..!!
ಸ್ನಾಪ್ಚಾಟ್ ಆಪ್ ಸಿಇಓ ಇವಾನ್ ಸ್ಪೈಗೆಲ್ ಈ ಹಿಂದೆ, 'ನಾವು ಸಿರಿವಂತರನ್ನು ಮಾತ್ರ ಟಾರ್ಗೆಟ್ ಮಾಡುತ್ತಿದ್ದೇವೆ. ಅವರಿಗೆ ಮಾತ್ರ ನಮ್ಮ ಸೇವೆಯನ್ನು ನೀಡಲು ಮುಂದಾಗಿದ್ದೇವೆ ಹಾಗಾಗಿ ನಾವು ಬಡದೇಶಗಳಾದ ಭಾರತ ಮತ್ತು ಸ್ಪೇನ್ ಕಡಗೆ ಗಮನ ಹರಿಸುತ್ತಿಲ್ಲ' ಎಂದು ಹೇಳಿಕೆ ನೀಡದ್ದನ್ನು ನಾವಿಲ್ಲಿ ಸ್ಮರಿಸಬಹುದು.


Click it and Unblock the Notifications








