Truecaller: ಟ್ರೂಕಾಲರ್ ಜೊತೆಗೆ ಕೈ ಜೋಡಿಸಿದ ಕರ್ನಾಟಕ ಸರ್ಕಾರ! ಯಾಕೆ ಗೊತ್ತಾ!?
ಕರ್ನಾಟಕ ಸರ್ಕಾರ (Government of Karnataka) ಇತ್ತೀಚಿನ ದಿನಗಳಲ್ಲಿ ಆನ್ಲೈನ್ ವಿಷಯಕ್ಕೆ ಹೆಚ್ಚಿನ ಪ್ರಾದಾನ್ಯತೆ ನೀಡುತ್ತಾ ಬರುತ್ತಿದೆ. ಈ ನಡುವೆ ರಾಜ್ಯದ ಜನರಿಗೆ ಆನ್ಲೈನ್ ವಂಚನೆ ಬಗ್ಗೆ ಎಚ್ಚರದಿಂದ ಇರಲಿ ವಿವಿಧ ರೀತಿಯಲ್ಲಿ ಮನವರಿಕೆಯನ್ನೂ ಸಹ ಮಾಡಿಕೊಂಡು ಬರುತ್ತಿದೆ. ಅದಾಗ್ಯೂ ಬೆಂಗಳೂರಂತ ಮಹಾನಗರಗಳಲ್ಲಿ ಹೆಚ್ಚು ಹೆಚ್ಚು ಆನ್ಲೈನ್ ಸ್ಕ್ಯಾಮ್ಗಳು (Online scams) ವರದಿಯಾಗುತ್ತಿರುವುದು ಸಂಬಂಧಿಸಿದ ಇಲಾಖೆಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಹೌದು, ಆನ್ಲೈನ್ ವಂಚನೆಗಳಿಗೆ ಕಡಿವಾಣ ಹಾಕಲು ಎಷ್ಟೇ ಪ್ರಯತ್ನ ಪಟ್ಟರು ಸಹ ಸ್ಕ್ಯಾಮರ್ಗಳು ವಿವಿಧ ಹೊಸ ಮಾರ್ಗಗಳನ್ನು ಕಂಡುಕೊಂಡು ಮೋಸ ಮಾಡುತ್ತಲೇ ಬರುತ್ತಿದ್ದಾರೆ. ಈ ಕಾರಣಕ್ಕೆ ಈಗ ರಾಜ್ಯದಲ್ಲಿ ಸೈಬರ್ ಸುರಕ್ಷತೆ ಜಾಗೃತಿಯನ್ನು ಹೆಚ್ಚಿಸಲು ಕರ್ನಾಟಕ ಸರ್ಕಾರವು 'ಟ್ರೂಕಾಲರ್' (Truecaller) ಜೊತೆ ಪಾಲುದಾರಿಕೆ ಹೊಂದಿದೆ. ಹಾಗಿದ್ರೆ, ಈ ಪಾಲುದಾರಿಕೆ ಸಂಬಂಧ ಸಂಬಂಧಿಸಿದ ಅಧಿಕಾರಿಗಳು ಹೇಳಿದ್ದೇನು?, ಇದರಿಂದ ಸಾರ್ವಜನಿಕರಿಗೆ ಲಾಭ ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಟ್ರೂಕಾಲರ್ ಜೊತೆ ಪಾಲುದಾರಿಕೆ ಪಡೆದ ಸರ್ಕಾರ: ಸಾಕಷ್ಟು ಜನರು ಆನ್ಲೈನ್ ವಂಚನೆ ಅಥವಾ ಸೈಬರ್ ಅಪರಾಧಗಳಿಗೆ ಬಲಿ ಆಗುತ್ತಲೇ ಇದ್ದಾರೆ. ಇದರ ವಿರುದ್ಧ ಈಗ ಕರ್ನಾಟಕ ಸರ್ಕಾರ ಸಮರ ಸಾರಿದ್ದು, ಇದರಿಂದಾಗಿಯೇ ಟ್ರೂಕಾಲರ್ ನೊಂದಿಗೆ ಕೆಲಸ ಮಾಡಲು ಮುಂದಾಗಿದೆ. ಈ ಸಂಬಂಧ ಕರ್ನಾಟಕ ಐಟಿ ಸಚಿವ ಪ್ರಿಯಾಂಕ್ ಖರ್ಗೆ, ಡಿಜಿಟಲ್ ಸಂವಹನದಲ್ಲಿ ಜಾಗೃತಿ ಮತ್ತು ಸುರಕ್ಷತೆಯನ್ನು ಉತ್ತೇಜಿಸಲು ಸರ್ಕಾರವು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದಿದ್ದಾರೆ.
ಟ್ರೂಕಾಲರ್, ಕಾಲರ್ ಐಡಿ ಮತ್ತು ಸ್ಪ್ಯಾಮ್-ಬ್ಲಾಕಿಂಗ್ ಅಪ್ಲಿಕೇಶನ್ನೊಂದಿಗೆ 'ಲೆಟರ್ ಆಫ್ ಇಂಟೆಂಟ್'ಗೆ ಸಹಿ ಮಾಡುವ ಮೂಲಕ ಪಾಲುದಾರಿಕೆಯನ್ನು ಸರ್ಕಾರ ಅಧಿಕೃತಗೊಳಿಸಿದೆ. ಈ ಸಹಯೋಗವು ಸೈಬರ್ ಸುರಕ್ಷತೆಯ ಅರಿವನ್ನು ಹೆಚ್ಚಿಸಲು ಮತ್ತು ರಾಜ್ಯದಾದ್ಯಂತ ಸುರಕ್ಷಿತ ಡಿಜಿಟಲ್ ಸಂವಹನಕ್ಕಾಗಿ ಅನುಕೂಲ ಮಾಡಿಕೊಡುವ ಗುರಿಯನ್ನು ಹೊಂದಿದೆ.

ಅದರಂತೆ ಆನ್ಲೈನ್ ಸುರಕ್ಷತೆಯ ಜಾಗೃತಿಯನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾದ ಹಲವಾರು ಉಪಕ್ರಮಗಳನ್ನು ಟ್ರೂಕಾಲರ್ ಕೈಗೊಳ್ಳಲಿದೆ ಎಂದು ತಿಳಿದುಬಂದಿದ್ದು, ಇದರಿಂದಾಗಿ ನಾಗರಿಕರು ವಂಚನೆಗಳಿಗೆ ಬಲಿಯಾಗುವುದನ್ನು ತಡೆಯಲು ಪ್ರಾಯೋಗಿಕ ಸಲಹೆಗಳನ್ನು ನೀಡುತ್ತದೆ. ಅವರ ವೈಯಕ್ತಿಕ ಮಾಹಿತಿಯನ್ನು ರಕ್ಷಿಸಲು ಮತ್ತು ಡಿಜಿಟಲ್ ಸಂವಹನ ಡಿವೈಸ್ಗಳ ಜವಾಬ್ದಾರಿಯುತ ಬಳಕೆಯನ್ನು ಉತ್ತೇಜಿಸಲು ಅವರಿಗೆ ಅಧಿಕಾರ ನೀಡುತ್ತದೆ ಎಂದು ಹೇಳಿಕೆ ಹೇಳಲಾಗಿದೆ.
ಹಾಗೆಯೇ ಮುಖ್ಯ ಉತ್ಪನ್ನ ಅಧಿಕಾರಿ ಮತ್ತು ಟ್ರೂಕಾಲರ್ ಇಂಡಿಯಾದ ಎಂಡಿ ರಿಶಿತ್ ಜುಂಜುನ್ವಾಲಾ ಅವರು ಪ್ರತಿಕ್ರಿಯೆ ನೀಡಿ, ಟ್ರೂಕಾಲರ್ನಲ್ಲಿ ನಾವು ವಂಚನೆ ತಡೆಗಟ್ಟುವಿಕೆಯನ್ನು ಸುಧಾರಿಸಲು ಸತತವಾಗಿ ಕೆಲಸ ಮಾಡುತ್ತಿದ್ದೇವೆ ಮತ್ತು ಈ ಸಹಯೋಗವು ವಂಚಕರಿಂದ ಒಂದು ಹೆಜ್ಜೆ ಮುಂದೆ ಉಳಿಯಲು ಕರ್ನಾಟಕದ ನಾಗರಿಕರಿಗೆ ಸಹಾಯ ಮಾಡುತ್ತದೆ ಎಂಬ ವಿಶ್ವಾಸವಿದೆ ಎಂದು ಒತ್ತಿ ಹೇಳಿದ್ದಾರೆ.

ಇನ್ನು ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿ ಮಾತನಾಡಿದ ಐಟಿ ಸಚಿವ ಪ್ರಿಯಾಂಕ್ ಖರ್ಗೆ, ಡಿಜಿಟಲ್ ಪರಿಸರ ವ್ಯವಸ್ಥೆಯಲ್ಲಿ ನಮ್ಮ ನಾಗರಿಕರ ಸುರಕ್ಷತೆಗೆ ಆದ್ಯತೆ ನೀಡುವ ಕರ್ನಾಟಕ ಸರ್ಕಾರದ ಬದ್ಧತೆಯನ್ನು ಈ ಪಾಲುದಾರಿಕೆ ಒತ್ತಿಹೇಳುತ್ತದೆ. ಮುಂದುವರಿದ ತಂತ್ರಜ್ಞಾನದೊಂದಿಗೆ ಸೈಬರ್ ಅಪರಾಧಗಳು ಮತ್ತು ಡಿಜಿಟಲ್ ಸಂವಹನದಲ್ಲಿ ವಂಚನೆಯು ತ್ವರಿತ ಗತಿಯಲ್ಲಿ ಬೆಳೆಯುತ್ತಿದೆ, ಇದು ದುರ್ಬಲ ನಾಗರಿಕರನ್ನು ಹೆಚ್ಚಿನ ಅಪಾಯಕ್ಕೆ ಒಡ್ಡುತ್ತದೆ ಎಂದು ತಿಳಿಸಿದರು.
ಡಿಜಿಟಲ್ ಸಂವಹನದಲ್ಲಿ ಜಾಗೃತಿ ಮೂಡಿಸಲು ಮತ್ತು ಸುರಕ್ಷತೆಯನ್ನು ಉತ್ತೇಜಿಸಲು ಸರ್ಕಾರವು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಬೆಂಗಳೂರು ನಾವೀನ್ಯತೆಗೆ ಸಮಾನಾರ್ಥಕವಾಗಿದೆ ಮತ್ತು ಅಭಿವೃದ್ಧಿ ಹೊಂದುತ್ತಿರುವ ಟೆಕ್ ಹಬ್ ಎಂದು ಗುರುತಿಸಲ್ಪಟ್ಟಿದೆ. ಇಲ್ಲಿ ನಾಗರಿಕರ ಆನ್ಲೈನ್ ಸುರಕ್ಷತೆಯನ್ನು ಹೆಚ್ಚಿಸಲು ಸಹಕಾರಿ ವಿಧಾನವನ್ನು ಅಳವಡಿಸಿಕೊಳ್ಳಲು ನಾವು ಹೆಮ್ಮೆಪಡುತ್ತೇವೆ ಎಂದು ತಿಳಿಸಿದ್ದಾರೆ.
ಆನ್ಲೈನ್ ವಂಚನೆಯಿಂದ ಬಳಕೆದಾರರನ್ನು ರಕ್ಷಿಸಲು ಸಾಮಾನ್ಯವಾಗಿ ಈಗಾಗಲೇ ಟ್ರೂಕಾಲರ್ ಹಲವಾರು ಹಂತಗಳನ್ನು ಹೊಂದಿದೆ, ಅಂದರೆ ಸ್ಪ್ಯಾಮ್ ಕರೆಗಳು, ಟೆಲಿಮಾರ್ಕೆಟರ್ಗಳು, ವಂಚನೆಗಳು ಮತ್ತು ವಂಚನೆಗಳನ್ನು ಗುರುತಿಸಲು ಟ್ರೂಕಾಲರ್ ಎಐ ಅನ್ನು ಬಳಸುತ್ತದೆ. ಇದರೊಂದಿಗೆ ಟ್ರೂಕಾಲರ್ ತನ್ನ ಸಮುದಾಯದಿಂದ ದೈನಂದಿನ ಪ್ರತಿಕ್ರಿಯೆಯನ್ನು ಪಡೆಯುವ ಕೆಲಸ ಮಾಡುತ್ತದೆ. ಹಾಗೆಯೇ ಟ್ರೂಕಾಲರ್ ಕಾನೂನುಬದ್ಧ ಕಳುಹಿಸುವವರಿಗೆ ಪರಿಶೀಲಿಸಿದ ಬ್ಯಾಡ್ಜ್ ಅನ್ನು ನೀಡುತ್ತದೆ.
ಇದರೊಂದಿಗೆ ಕಂಪನಿಗಳು ಮತ್ತು ಸರ್ಕಾರಿ ಏಜೆನ್ಸಿಗಳಿಂದ ಟ್ರೂಕಾಲರ್ ನಿಯಮಿತ ಹಗರಣ ವರದಿಗಳನ್ನು ಸ್ವೀಕರಿಸುತ್ತದೆ. ಕಳುಹಿಸುವವರಿಂದ ಮೋಸ ಮಾಡಬಹುದಾದ ಮೆಸೆಜ್ಗಳ ಮೇಲಿನ ಕ್ರಮಗಳನ್ನು ಆಫ್ ಮಾಡುತ್ತದೆ. ಅಷ್ಟೇ ಅಲ್ಲದೆ ಸೈಬರ್ ವಂಚನೆಯನ್ನು ಹೇಗೆ ಎದುರಿಸಬೇಕೆಂದು ನಾಗರಿಕರಿಗೆ ವಿವಿಧ ರೀತಿಯಲ್ಲಿ ಮನವರಿಕೆ ಮಾಡಿಕೊಡುವ ಕೆಲಸ ಮಾಡುತ್ತದೆ.
ಟ್ರೂಕಾಲರ್ ಕಾಲರ್ ಐಡಿಯನ್ನು ಸಹ ಹೊಂದಿದ್ದು, ಅದು ಸ್ಕ್ಯಾಮರ್ಗಳು, ಸ್ಪ್ಯಾಮ್ ಕರೆ ಮಾಡುವವರು ಅಥವಾ ಅನುಮಾನಾಸ್ಪದ ಸಂಖ್ಯೆಗಳಿಂದ ಕರೆಗಳು ಮತ್ತು ಮೆಸೆಜ್ಗಳನ್ನು ನಿರ್ಬಂಧಿಸಲಿದೆ.


Click it and Unblock the Notifications








