ವ್ಯಂಗ್ಯಚಿತ್ರ ದಂತಕಥೆ ಆರ್ಕೆ ಲಕ್ಷ್ಮಣ್ಗೆ ಇಸ್ರೋ ಕಾಣಿಕೆ ಏನು?
ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವ್ಯಂಗ್ಯ ಚಿತ್ರದ ದಂತಕಥೆ ಎಂದೇ ಎನಿಸಿಕೊಂಡಿರುವ ಆರ್ ಕೆ ಲಕ್ಷ್ಮಣ್ ಅವರಿಗೆ ಅವರೇ ರಚಿಸಿದ ಮಂಗಳಯಾನ ವ್ಯಂಗ್ಯ ಚಿತ್ರವನ್ನು ಟ್ವೀಟ್ ಮಾಡುವ ಮೂಲಕ ಶ್ರದ್ಧಾಂಜಲಿಯನ್ನು ಸಲ್ಲಿಸಿದೆ. ಮಂಗಳಯಾನದ ಕುರಿತು ಅವರು ಬಿಡಿಸಿದ ಕೊನೆಯ ಕಾರ್ಟೂನ್ ಇದಾಗಿತ್ತು.

ಹೆಚ್ಚು ಜನಪ್ರಿಯ "ಕಾಮನ್ ಮೆನ್" (ಜನಸಾಮಾನ್ಯ) ರಚಕ ಆರ್ಕೆ ಲಕ್ಷ್ಮಣ್ ದೀರ್ಘ ಕಾಲದ ಕಾಯಿಲೆಯಿಂದ ಬಳಲುತ್ತಿದ್ದು ಸೋಮವಾರ ಪುಣೆಯ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ನಾವು ವ್ಯಂಗ್ಯಚಿತ್ರದ ದಂತಕಥೆ ಎಂದೆನಿಸಿರುವ ಆರ್ಕೆ ಲಕ್ಷ್ಮಣ್ ಅವರಿಗೆ ಈ ಮೂಲಕ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತಿದ್ದೇವೆ ಎಂದು ಇಸ್ರೋ ತಿಳಿಸಿದೆ.
ಇದನ್ನೂ ಓದಿ: ಫೋನ್ ನೀರಲ್ಲಿ ಬಿದ್ದಾಗ ಈ ಟ್ರಿಕ್ಗಳನ್ನು ಅನುಸರಿಸಿ
ಆರ್ಕೆ ಲಕ್ಷ್ಮಣ್ ಇಸ್ರೋಗೆ ಈ ಅತ್ಯಮೂಲ್ಯ ಕೊಡುಗೆಯನ್ನು ಕೆಲವು ವಾರಗಳ ಹಿಂದೆಯಷ್ಟೇ ನೀಡಿದ್ದರು. ಅತಿ ಸರಳ ಕಾರ್ಟೂನ್ಗಳ ಮೂಲಕ ಸಮಾಜಕ್ಕೆ ಮನಮುಟ್ಟುವ ಸಂದೇಶವನ್ನು ತಲುಪಿಸುತ್ತಿದ್ದು ಆರ್ಕೆ ಹಿಂದೂ ದಿನಪತ್ರಿಕೆಯಲ್ಲಿ 54 ವರ್ಷಗಳ ಕಾಲ ಸೇವೆ ಸಲ್ಲಿಸಿ ಜನಸಾಮಾನ್ಯ (ಕಾಮನ್ ಮೆನ್) ನಿಂದ ಪ್ರಸಿದ್ಧಿಗೆ ಬಂದವರು.


Click it and Unblock the Notifications