ಮೋದಿ ಸರ್ಕಾರದಿಂದ ಬಡವರ ಖಾತೆಗೆ ನೇರ ಹಣ ವರ್ಗಾವಣೆ!!
ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿಯಲ್ಲಿ ಸಂಗ್ರಹವಾಗುವ ಹಣವನ್ನು ಬಳಸಿಕೊಂಡು ನಿರ್ದಿಷ್ಟ ಮೊತ್ತವನ್ನು ಸರ್ಕಾರ ಬಡವರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುತ್ತದೆ ಎಂದು ವರದಿಯಾಗಿದೆ.
ಕೇಂದ್ರ ಸರ್ಕಾರದ ಮಹತ್ವದ ಯೋಜನೆ ಬಡವರಿಗೆ ನೇರ ಹಣ ವರ್ಗಾವಣೆ ಮಾಡುವ ಯೋಜನೆ ಕೆಲವೇ ದಿವಸಗಳಲ್ಲಿ ಜಾರಿಯಾಗಲಿಗದೆ. ಬಡತನ ರೇಖೆಗಿಂತ ಕೆಳಗಿರುವವರ ಜನ್ಧನ್ ಖಾತೆಗೆ ಮಾಸಿಕ 500 ರಿಂದ 1000 ರೂಪಾಯಿ ಹಣವನ್ನು ಕೇಂದ್ರ ಸರ್ಕಾರ ನೀಡಲಿದೆ.!!
2017ರ ಕೇಂದ್ರ ಬಜೆಟ್ನಲ್ಲಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿಯಲ್ಲಿ ಸಂಗ್ರಹವಾಗುವ ಹಣವನ್ನು ಬಳಸಿಕೊಂಡು ನಿರ್ದಿಷ್ಟ ಮೊತ್ತವನ್ನು ಸರ್ಕಾರ ಬಡವರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುತ್ತದೆ ಎಂದು ವರದಿಯಾಗಿದೆ.

'ವೇಪರ್ವೇರ್' ಲೀಸ್ಟ್ ಸೇರಿದ "ಫ್ರೀಡಂ 251" ಸ್ಮಾರ್ಟ್ಫೋನ್!!
ಕಾಳಧನಿಕರಿಗೆ ತೆರಿಗೆ ಮತ್ತು ದಂಡದ ಹಣವನ್ನು ಪಾವತಿಸಿ ತಮ್ಮ ಆದಾಯವನ್ನು ಸಕ್ರಮಗೊಳಿಸಲು ಸರ್ಕಾರ ಮಾರ್ಚ್ 30ರ ತನಕ ಕಾಲಾವಕಾಶ ನೀಡಿದ್ದು, ಈ ಯೋಜನೆಗೆ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ ಎಂದು ಹೆಸರಿಡಲಾಗಿದೆ.

ಹೀಗೆ ಸಂಗ್ರಹವಾದ ಹಣವನ್ನು ಬಡವರ ಖಾತೆಗೆ ನೇರವಾಗಿ ವರ್ಗಾಯಿಸುವ ಅಬಿಲಾಷೆಯನ್ನು ಕೇಂದ್ರ ಸರ್ಕಾರ ಹೊಂದಿದ್ದು, ಮಾರ್ಚ್ 30ರ ನಂತರ ಸರ್ಕಾರದಿಂದಲೇ ಮಾಡಿಸಲ್ಪಟ್ಟಿರುವ ಬಡವರ ಜನ್ಧನ್ ಖಾತೆಗೆ ನೇರ ಹಣ ಹಾಕಲಾಗುತ್ತದೆ ಎಂದು ಹೇಳಲಾಗಿದೆ.


Click it and Unblock the Notifications








