ಪಿಎಂ ಕಿಸಾನ್ ಯೋಜನೆಯ ಹಿಂದಿನ ಕಂತು ಜಮಾ ಆಗಿಲ್ಲವೇ?..ಹೀಗೆ ಮಾಡಿ!
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ರೈತರಿಗೆ ಉಪಯುಕ್ತ ಯೋಜನೆ ಆಗಿದೆ. ಈ ಯೋಜನೆಯ ಅಡಿಯಲ್ಲಿ ರೈತರ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡಲಾಗುತ್ತದೆ. ಸದ್ಯ ನಿಮಗೆ ಹಿಂದಿನ ಕಂತಿನ ಹಣ ಜಮಾ ಆಗಿರದೆ ಇದ್ದರೇ, ಸದ್ಯದಲ್ಲೇ ಬಿಡುಗಡೆ ಮಾಡುವ ಮತ್ತೊಂದು ಕಂತಿನಲ್ಲಿ ಪಡೆಯುವಿರಿ. ಆದರೆ ಹಿಂದಿನ ಕಂತಿನ ಹಣ ಸ್ವೀಕರಿಸದ ರೈತರು ಅರ್ಜಿಯಲ್ಲಿ ಸರಿಯಾದ ಮಾಹಿತಿ ಭರ್ತಿ ಮಾಡುಬೇಕಿರುತ್ತದೆ.

ಹೌದು, ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ವಾರ್ಷಿಕವಾಗಿ 6 ಸಾವಿರ ರೂಪಾಯಿಗಳನ್ನು ರೈತರ ಖಾತೆಗೆ ವರ್ಗಾಯಿಸಲಾಗುತ್ತದೆ. ಈ ಮೊತ್ತವನ್ನು 2,000ರೂ.ಗಳಂತೆ ಮೂರು ಕಂತುಗಳ ಮೂಲಕ ನೇರವಾಗಿ ರೈತರ ಅಕೌಂಟ್ಗೆ ವರ್ಗಾಯಿಸಲಾಗುತ್ತದೆ.

ಒಂದು ವೇಳೆ ಹಿಂದಿನ ಕಂತು ಸ್ವೀಕರಿಸದೇ ಇದ್ದಲ್ಲಿ, ಅಂತಹ ರೈತರು ಮುಂದಿನ ಕಂತಿನೊಂದಿಗೆ ಆ ಹಣವನ್ನು ಪಡೆಯಬಹುದಾಗಿದೆ. ಆದರೆ ಅರ್ಜಿಯಲ್ಲಿ ಏನಾದರೂ ತಪ್ಪುಗಳಿದ್ದರೇ ಅದನ್ನು ಸರಿಪಡಿಸಬೇಕು. ಯೋಜನೆಯ ಅಧಿಕೃತ ವೈಟ್ಸೈಟ್ಗೆ https://pmkisan.gov.in/Grievance.aspx ಭೇಟಿ ನೀಡಿ ಸರಿಪಡಿಸಬಹುದಾಗಿದೆ.

ನೋಂದಾಯಿಸಿಕೊಳ್ಳಲು ಅವಕಾಶ
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ಈವರೆಗೂ ತಮ್ಮನ್ನು ನೋಂದಾಯಿಸಿಕೊಳ್ಳದ ರೈತರು ಈಗ ಹೆಸರನ್ನು ನೋಂದಾಯಿಸಲು ಅವಕಾಶ ಇದೆ. ಇದೇ ಸೆಪ್ಟೆಂಬರ್ 30 ರೊಳಗೆ ನೋಂದಾಯಿಸಿಕೊಳ್ಳಲು ಕಾಲಾವಕಾಶ ಇದೆ. ಈ ಯೋಜನೆಗೆ ನೋಂದಾಯಿಸುವುದರಿಂದ ರೈತರು ನೇರವಾಗಿ 4,000ರೂ. ಹಣ ಪಡೆಯಲು ಅರ್ಹರಾಗಿರುತ್ತಾರೆ. ಎರಡು ಕಂತುಗಳ ಹಣವನ್ನು (4 ಸಾವಿರ ರೂಪಾಯಿ) ಒಮ್ಮಗೆ ಪಡೆಯುತ್ತಾರೆ. ಇನ್ನು ಪಿಎಂ ಕಿಸಾನ್ ಸಮ್ಮಾನ್ ನಿಧಿ ಹಣ ಜಮಾ ಆಗಿದೆಯಾ ಎಂಬುದನ್ನು ಪರಿಶೀಲನೆ ಮಾಡಲು ಈ ಮುಂದಿನ ಕ್ರಮಗಳನ್ನು ಅನುಸರಿಸಿ.

ಪಿಎಂ ಕಿಸಾನ್ ಸಮ್ಮಾನ್ ನಿಧಿ ಫಲಾನುಭವಿ ಸ್ಟೇಟಸ್ ಅನ್ನು ಪರಿಶೀಲಿಸಲು ಈ ಕ್ರಮ ಫಾಲೋ ಮಾಡಿ:
ಹಂತ 1: ಪಿಎಂ ಕಿಸಾನ್ ಸಮ್ಮಾನ್ ನಿಧಿ ಸ್ಟೇಟಸ್ ಚೆಕ್ ಮಾಡಲು https://pmkisan.gov.in/beneficiarystatus.aspx ಲಿಂಕ್ ತೆರೆಯಿರಿ.
ಹಂತ 2: ಪಿಎಂ ಕಿಸಾನ್ ಸಮ್ಮಾನ್ ನಿಧಿ ಫಲಾನುಭವಿ ಸ್ಟೇಟಸ್ ಅನ್ನು ಪರೀಕ್ಷಿಸಲು ಆಧಾರ್ ಸಂಖ್ಯೆ, ಖಾತೆ ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆ ಅಗತ್ಯವಿದೆ.
ಹಂತ 3: ಕಾಣಿಸುವ ಲಿಂಕ್ ನಲ್ಲಿ, ನಿಮಗೆ ಬೇಕಾದ ಟ್ಯಾಬ್ ಅನ್ನು ಆರಿಸಿ ಮತ್ತು ಅದರ ಮೇಲೆ ಕ್ಲಿಕ್ ಮಾಡಿ. ನಿಮ್ಮ ಆಧಾರ್ ಸಂಖ್ಯೆ, ಖಾತೆ ಸಂಖ್ಯೆ, ಮೊಬೈಲ್ ಸಂಖ್ಯೆ ನಮೂದಿಸಿ.
ಹಂತ 4: 'ಡೇಟಾ ಪಡೆಯಿರಿ' ಆಯ್ಕೆಯ ಮೇಲೆ ಟ್ಯಾಪ್ ಮಾಡಿ.

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಕೆಲವು ಹೈಲೈಟ್ಸ್
ಈ ಯೋಜನೆಯಡಿ ಕೇಂದ್ರ ಸರ್ಕಾರವು ಇಲ್ಲಿಯವರೆಗೆ ಒಟ್ಟು 9 ಕಂತುಗಳ ಹಣ ಬಿಡುಗಡೆ ಮಾಡಿದೆ. ಮೊದಲ ಕಂತು 3.16 ಕೋಟಿ ರೈತರ ಖಾತೆಗೆ ನೇರವಾಗಿ ತಲುಪಿದ್ದು, ಇಲ್ಲಿಯವರೆಗೆ 9 ನೇ ಕಂತಿನಲ್ಲಿ 9.9 ಕೋಟಿ ರೈತರಿಗೆ ಹಣವನ್ನು ಕಳುಹಿಸಲಾಗಿದೆ. ಹಾಗೆಯೇ ಇದೇ ನವೆಂಬರ್ 30 ರವರೆಗೆ, ಯೋಜನೆಯ 9 ನೇ ಕಂತಿನ ಹಣವನ್ನು ಉಳಿದ ರೈತರ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ.

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ನಮಗೆ ತಿಳಿದಿರುವ ಮಾಹಿತಿಯಂತೆ ದೇಶದ ಸಣ್ಣ ಮತ್ತು ಸಣ್ಣ ರೈತರು ಈ ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ. 2 ಹೆಕ್ಟೇರ್ ಭೂಮಿಯನ್ನು ಹೊಂದಿರುವ ರೈತರು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
- ಮೊದಲು ಅಧಿಕೃತ ಪಿಎಂ ಕಿಸಾನ್ ಪೋರ್ಟಲ್ pmkisan.gov.in ಗೆ ಹೋಗಿ.
- ಮುಖಪುಟದಿಂದ, ನೀವು ರೈತರ ಕಾರ್ನರ್ ವಿಭಾಗವನ್ನು ಕಾಣುತ್ತಿರಿ.
- ನಂತರ, ಹೊಸ ರೈತ ನೋಂದಣಿ ಆಯ್ಕೆಯನ್ನು ಕ್ಲಿಕ್ ಮಾಡಿ ಮತ್ತು ನೋಂದಣಿ ಪೇಜ್ ತೆರೆಯುತ್ತದೆ.
- ಅಲ್ಲಿ, ನೀವು ಆಧಾರ್ ಸಂಖ್ಯೆ, ಕ್ಯಾಪ್ಚಾ ಕೋಡ್ ನಮೂದಿಸಿ, ನಂತರ ನಿಮ್ಮ ರಾಜ್ಯವನ್ನು ಆಯ್ಕೆ ಮಾಡಲು ಕೇಳಲಾಗುತ್ತದೆ.
- ಕೇಳಲಾದ ಎಲ್ಲಾ ವಿವರಗಳನ್ನು ಭರ್ತಿ ಮಾಡಿದ ನಂತರ, ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿ.
- ಈಗ ಸಂಪೂರ್ಣ ನೋಂದಣಿ ನಮೂನೆಯು ತೆರೆಯುತ್ತದೆ. ಅಲ್ಲಿ ನೀವು ಎಲ್ಲಾ ವಿವರಗಳನ್ನು ಸರಿಯಾಗಿ ನಮೂದಿಸಬೇಕಾಗುತ್ತದೆ.
- ನೀವು ಎಲ್ಲವನ್ನೂ ನಮೂದಿಸಿದ ನಂತರ, ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ.
- ಈಗ ನೀವು ನಿಮ್ಮ ಬ್ಯಾಂಕ್ ವಿವರಗಳನ್ನು ನಮೂದಿಸಬೇಕಾಗುತ್ತದೆ, ಅಲ್ಲಿ ನೀವು ಕಂತು ಜಮಾ ಮಾಡಬೇಕೆಂದು ಬಯಸುತ್ತೀರಿ.
- ಬ್ಯಾಂಕ್ ವಿವರಗಳನ್ನು ಸಲ್ಲಿಸಿ ಮತ್ತು ಈಗ ಅಧಿಕಾರಿಗಳು ನಿಮ್ಮ ಅರ್ಜಿಯನ್ನು ಪರಿಶೀಲಿಸುವವರೆಗೆ ಕಾಯಿರಿ.


Click it and Unblock the Notifications








