ಜಿಯೋ ವಿರುದ್ದ ಕರ್ನಾಟಕದಲ್ಲಿ ಪ್ರತಿಭಟನೆ!! ಏಕೆ ಗೊತ್ತಾ?
ಖಾಸಾಗಿ ಟೆಲಿಕಾಂ ಕಂಪೆನಿಗಳಿಗೆ ಸವಲತ್ತುಗಳನ್ನು ನೀಡುವ ಬದಲು ಬಿಎಸ್ಎನ್ಎಲ್ ಬಲಪಡಿಸಿ ಎಂದು ನೌಕರರು ಆಗ್ರಹಿಸಿದರು.
ರಿಲಾಯನ್ಸ್ ಜಿಯೋ ಕಂಪನಿಗೆ ಕೇಂದ್ರ ಸರ್ಕಾರ ಅನಾವಶ್ಯಕವಾಗಿ ನೀಡುತ್ತಿರುವ ವಿವಿಧ ಸೌಲಭ್ಯಗಳನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ಬಿಎಸ್ಎನ್ಎಲ್ ನೌಕರರು ಬಳ್ಳಾರಿಯಲ್ಲಿ ಗುರುವಾರದಂದು ಪ್ರತಿಭಟನೆ ನಡೆಸಿದ್ದಾರೆ.!!
ಕೇಂದ್ರ ಸರ್ಕಾರದ ಅಧೀನ ಸಂಸ್ಥೆಯಾಗಿರುವ ಬಿಎಸ್ಎನ್ಎಲ್ ಬಲಪಡಿಸುವ ಬದಲಾಗಿ ಸರ್ಕಾರವೇ ಸರ್ಕಾರಿ ಸಂಸ್ಥೆಯನ್ನು ದುರ್ಬಲಗೊಳಿಸುತ್ತಿರುವುದು ಖಂಡನೀಯ. ಖಾಸಾಗಿ ಟೆಲಿಕಾಂ ಕಂಪೆನಿಗಳಿಗೆ ಸವಲತ್ತುಗಳನ್ನು ನೀಡುವ ಬದಲು ಬಿಎಸ್ಎನ್ಎಲ್ ಬಲಪಡಿಸಿ ಎಂದು ನೌಕರರು ಆಗ್ರಹಿಸಿದರು.

999 ರೂ. ಜಿಯೋ 4G ಫೋನ್ ಅನ್ನು ಆನ್ಲೈನ್ನಲ್ಲಿ ಬುಕ್ ಮಾಡೋದು ಹೇಗೆ?
ಕೇಂದ್ರದ ನೀತಿ ಆಯೋಗದ ಸೂಚನೆಯಂತೆ ಬಿಎಸ್ಎನ್ಎಲ್ ಸಂಸ್ಥೆಯಲ್ಲಿ ಬಂಡವಾಳ ಹಿಂತೆಗೆತಕ್ಕೆ ಕೇಂದ್ರ ಸರ್ಕಾರ ಯಾವ ಕಾರಣಕ್ಕೂ ಸಮ್ಮತಿಸಬಾರದು. ಮೊದಲಿನಿಂದಲೂ ಅತ್ಯುತ್ತಮ ಸೇವೆಯನ್ನು ನೀಡಿಕೊಂಡು ಬಂದಿರುವ ಬಿಎಸ್ಎನ್ಎಲ್ ಕಂಪೆನಿಯನ್ನು ಉಳಿಸಿ ಬೆಳೆಸುವ ಕಾರ್ಯವಾಗಬೇಕು ಎಂದು ಹೇಳಿದರು.

ಖಾಸಗಿ ಸಂಸ್ಥೆಗಳಿಗೆ ವಿನಾಕಾರಣ ನೀಡುತ್ತಿರುವ ವಿವಿಧ ಸೌಲಭ್ಯಗಳನ್ನು ನಿಲ್ಲಿಸಿ ಬಿಎಸ್ಎನ್ಎಲ್ಗೆ 4ಜಿ ಸ್ಪೆಕ್ಟ್ರಮ್ ಅನ್ನು ಉಚಿತವಾಗಿ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.


Click it and Unblock the Notifications








