ಐಟಿ ನಗರಿ ಬೆಂಗಳೂರಿಗೆ ಇನ್ನೊಂದು ಹೆಮ್ಮೆಯ ಗರಿ
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಬೆಂಗಳೂರಿನ ಪ್ರೊಫೆಸರ್ ಯು ರಾಮ್ಮೂರ್ತಿ 2015 ರ ವರ್ಲ್ಡ್ ಅಕಾಡೆಮಿ ಆಫ್ ಸೈನ್ಸ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದು ನಗದು ಬಹುಮಾನ $15,000 ಅನ್ನು ಇಂಜಿನಿಯರಿಂಗ್ ವಿಭಾಗದಲ್ಲಿ ಹೊಂದಿದೆ ಎನ್ನಲಾಗಿದೆ.
ಓದಿರಿ: ಹೊಸ ವರ್ಷಕ್ಕೆ ಕಾಲಿಡುತ್ತಿವೆ ಈ ಆಶ್ಚರ್ಯಕರ ಟೆಕ್ನಾಲಜಿಗಳು
ಟಿಡಬ್ಲ್ಯೂಎಸ್ ಯುನೆಸ್ಕೊ ನಿರ್ವಹಣೆಯಲ್ಲಿದ್ದು ಪ್ರತೀ ವರ್ಷ ಈ ಸಂಸ್ಥೆ ಕೃಷಿ ವಿಜ್ಞಾನ, ಬಯೋಲಜಿ, ರಸಾಯನ ಶಾಸ್ತ್ರ, ಇಂಜಿನಿಯರಿಂಗ್ ವಿಜ್ಞಾನ, ಗಣಿತ, ವೈದ್ಯಕೀಯ ವಿಜ್ಞಾನ ಮತ್ತು ಭೌತಶಾಸ್ತ್ರ ವಿಭಾಗದಲ್ಲಿ ನೀಡುತ್ತಿದೆ. ಈ ಬಹುಮಾನ ನಗದು $15,000 ಅನ್ನು ಒಳಗೊಂಡಿದೆ.

ಹೆಚ್ಚು ಗೌರವಯುತವಾದ ಪ್ರಶಸ್ತಿ
ಹೆಚ್ಚು ಗೌರವಯುತವಾದ ಪ್ರಶಸ್ತಿ ಇದಾಗಿದ್ದು ಚೀನಾ, ಕೊರಿಯಾ, ಬ್ರೆಜಿಲ್ ಮತ್ತು ಇತರ ದೇಶಗಳ ಪ್ರಸಿದ್ಧ ವಿಜ್ಞಾನಿಗಳೊಂದಿಗೆ ನೀವು ಸ್ಪರ್ಧಿಸಬೇಕಾಗುತ್ತದೆ.

ರಾಮ್ಮೂರ್ತಿ
ದೇಶದಲ್ಲಿರುವ ಹೆಚ್ಚಿನ ಜನರನ್ನು ಇನ್ನಷ್ಟು ಸಂಶೋಧನೆ ನಡೆಸಲು ಇದು ಪ್ರೋತ್ಸಾಹವನ್ನು ನೀಡುತ್ತದೆ ಎಂಬುದು ರಾಮ್ಮೂರ್ತಿಯವರ ಮಾತಾಗಿದೆ.

ವಿಜ್ಞಾನ ವಿಭಾಗ
ಭಾರತದಲ್ಲಿ ವಿಜ್ಞಾನ ವಿಭಾಗದಲ್ಲಿ ಬಹಳಷ್ಟು ಅವಕಾಶಗಳಿದ್ದು ಸೂಕ್ತ ಅವಕಾಶ ಮತ್ತು ಅವರ ಪ್ರತಿಭೆಯನ್ನು ಪ್ರೋತ್ಸಾಹಿಸುವ ದಾರಿಗಳು ದೊರಕಿದಲ್ಲಿ ಇಡೀ ವಿಶ್ವವೇ ದೇಶವನ್ನು ಗೌರವಿಸುವಂತಹ ಸಾಧನೆಯನ್ನು ಅವರು ಮಾಡಲಿದ್ದಾರೆ ಎಂದು ರಾಮ್ಮೂರ್ತಿ ತಿಳಿಸಿದ್ದಾರೆ.

ಅಗಾಧ ಅವಕಾಶ
ಮ್ಯಾಸಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯನ್ನು ತ್ಯಜಿಸಿ ನಾನು ಭಾರತಕ್ಕೆ ಬಂದಿರುವುದು ಇಲ್ಲಿರುವ ಅಗಾಧ ಅವಕಾಶಗಳನ್ನು ನೋಡಿ ಆಗಿದೆ. ಪ್ರೋತ್ಸಾಹ ಮತ್ತು ಧನಸಹಾಯ ಈ ವಿಷಯದಲ್ಲಿ ಇನ್ನಷ್ಟು ನಡೆಯಬೇಕಾಗಿದೆ.

ಭವಿಷ್ಯದ ಸಂಶೋಧಕ
ಹೆಚ್ಚಿನ ಭಾರತೀಯರು ಇಂತಹ ಪ್ರಶಸ್ತಿಗಳನ್ನು ಪಡೆದುಕೊಳ್ಳುವುದರಿಂದ ಭವಿಷ್ಯದ ಸಂಶೋಧಕರಲ್ಲಿ ಇನ್ನಷ್ಟು ಸಾಧಿಸುವ ಉತ್ಸಾಹ ತಾನೇ ತಾನಾಗಿ ಮೂಡುತ್ತದೆ ಅಂತೆಯೇ ಇನ್ನಷ್ಟು ಬೆಳೆಯಬೇಕೆಂಬ ಆಸೆ ಕುಡಿಯೊಡೆಯುತ್ತದೆ ಎಂಬುದಾಗಿ ಅವರು ತಿಳಿಸಿದ್ದಾರೆ.

ಟಿಡಬ್ಲ್ಯೂಎಸ್
ಟಿಡಬ್ಲ್ಯೂಎಸ್ ಯುನೆಸ್ಕೊ ನಿರ್ವಹಣೆಯಲ್ಲಿದ್ದು ಪ್ರತೀ ವರ್ಷ ಈ ಸಂಸ್ಥೆ ಕೃಷಿ ವಿಜ್ಞಾನ, ಬಯೋಲಜಿ, ರಸಾಯನ ಶಾಸ್ತ್ರ, ಇಂಜಿನಿಯರಿಂಗ್ ವಿಜ್ಞಾನ, ಗಣಿತ, ವೈದ್ಯಕೀಯ ವಿಜ್ಞಾನ ಮತ್ತು ಭೌತಶಾಸ್ತ್ರ ವಿಭಾಗದಲ್ಲಿ ನೀಡುತ್ತಿದೆ.

ನಗದು
ಈ ಬಹುಮಾನ ನಗದು $15,000 ಅನ್ನು ಒಳಗೊಂಡಿದೆ.


Click it and Unblock the Notifications








