ಏರ್ಟೆಲ್ ವಿರುದ್ದ ತನಿಖೆ ನಡೆಸಲು ಆಧಾರ್ ಆಗ್ರಹ!!
ಏರ್ಟೆಲ್ ಮೇಲೆ ದಂಡ ವಿಧಿಸುವ ಕ್ರಮದ ಜತೆಗೆ ಕಂಪೆನಿಯ ವಿರುದ್ದ ಇನ್ನಿತರ ಕಾನೂನು ಕ್ರಮಗಳನ್ನು ಕೈಗೊಳ್ಳಲು ಆಧಾರ್ ಮುಂದಾಗಿದೆ.!!
ಏರ್ಟೆಲ್ ಮೊಬೈಲ್ ಸಂಖ್ಯೆಗಳಿಗೆ ಆಧಾರ್ ಜೋಡಣೆ ವೇಳೆ ಆಧಾರ್ ಕಾಯಿದೆ ಉಲ್ಲಂಘನೆ ಆರೋಪದಡಿ ಭಾರ್ತಿ ಏರ್ಟೆಲ್ ಟೆಲಿಕಾಂ ಕಂಪೆನಿ ವಿರುದ್ಧ ತನಿಖೆ ನಡೆಸುವಂತೆ ಆಧಾರ್ ಪ್ರಾಧಿಕಾರ (ಯುಐಡಿಎಐ) ಆದೇಶಿಸಿದೆ. ಹಾಗಾಗಿ, ಏರ್ಟೆಲ್ಗೆ ಮತ್ತೊಂದು ಸಂಕಷ್ಟ ಎದುರಾಗಲಿದೆ.!!
ಏರ್ಟೆಲ್ ಮೊಬೈಲ್ ಸಂಖ್ಯೆಗಳಿಗೆ ಆಧಾರ್ ಜೋಡಣೆ ವೇಳೆ ಗ್ರಾಹಕರಿಗೆ ತಿಳಿಯದಂತೆ ಏರ್ಟೆಲ್ ಪೇಮೆಂಟ್ಸ್ ಬ್ಯಾಂಕ್ನಲ್ಲಿ ಅವರ ರಹಸ್ಯವಾಗಿ ಖಾತೆಗಳನ್ನು ತೆರೆದಿರುವುದಕ್ಕೆ ಆಧಾರ್ ಪ್ರಾಧಿಕಾರವು ಏರ್ಟೆಲ್ ಮೇಲೆ ದಂಡ ವಿಧಿಸುವ ಕ್ರಮದ ಜತೆಗೆ ಕಂಪೆನಿಯ ವಿರುದ್ದ ಇನ್ನಿತರ ಕಾನೂನು ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.!!

ಏರ್ಟೆಲ್ ಕಂಪೆನಿ ಮಾಡಿರುವುದು ಗಂಭೀರ ಅಪರಾಧ. ವಿಶ್ವಾಸ ಮತ್ತು ಒಪ್ಪಂದದ ಉಲ್ಲಂಘನೆ ಜತೆಗೆ ಆಧಾರ್ ಕಾಯಿದೆಯ ಉಲ್ಲಂಘನೆ ಆರೋಪಗಳು ನಿಜವೆಂದು ಕಂಡು ಬಂದಿರುವ ಹಿನ್ನೆಲೆಯಲ್ಲಿ ಕಂಪೆನಿಯ ವಿರುದ್ಧ ತನಿಖೆಗೆ ಆದೇಶಿಸಿರುವುದಾಗಿ ಯುಐಡಿಎಐ ಹೇಳಿದೆ.! ಮತ್ತು ತನಿಖೆಯ ನಂತರ ಏರ್ಟೆಲ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.!!

ಏರ್ಟೆಲ್ ಪೇಮೆಂಟ್ಸ್ ಬ್ಯಾಂಕ್ನಲ್ಲಿ ಏರ್ಟೆಲ್ ಗ್ರಾಹಕರಿಗೆ ತಿಳಿಯದಂತೆ ಆಧಾರ್ ಮೂಲಕ ಅವರ ಅಕೌಂಟ್ ಅನ್ನು ತೆರೆಯಲಾಗಿತ್ತು. ಇದರಿಂದಾಗಿ, ಸರ್ಕಾರ ನೀಡುವ ಅಡುಗೆ ಅನಿಲ ಸಬ್ಸಿಡಿ ಹಣದಲ್ಲಿ 40 ಕೋಟಿಗೂ ಹೆಚ್ಚು ಹಣ ಇತರೆ ಬ್ಯಾಂಕ್ ಖಾತೆಗಳಿಗೆ ಬದಲಾಗಿ ಏರ್ಟೆಲ್ ಪೇಮೆಂಟ್ಸ್ ಬ್ಯಾಂಕ್ ನಲ್ಲಿ ಜಮೆಯಾಗಿತ್ತು.!!
ಓದಿರಿ: ಆನ್ಲೈನ್ನಲ್ಲಿ ಉದ್ಯೋಗ ಹುಡುಕುತ್ತಿದ್ದರೆ ಎಚ್ಚರ!..ಈ ನಾಲ್ವರಿಗೆ ಬಂದ ಪರಿಸ್ಥಿತಿ ನಿಮಗೂ ಬರಬಹುದು!!


Click it and Unblock the Notifications








