Just In
- 7 hrs ago Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- 8 hrs ago ಮೇ 1 ರಂದು ವಿವೋ T3x 5G ಮೊಬೈಲ್ ಮತ್ತೆ ಖರೀದಿಗೆ ಲಭ್ಯ!..ಅಗ್ಗದ ಬೆಲೆ ಇದೆ!
- 9 hrs ago Poco: ವಿಶೇಷ ಟ್ಯಾಬ್ಲೆಟ್ ಲಾಂಚ್ ಮಾಡಲು ಸಿದ್ಧವಾಗ್ತಿದೆ ಪೊಕೊ! ಸಖತ್ ಸ್ಟೈಲಿಶ್..
- 11 hrs ago Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
Don't Miss
- Movies Shobha Shetty ; ನಿಶ್ಚಿತಾರ್ಥದ ಬಗ್ಗೆ ಮಾಹಿತಿ ನೀಡಿದ ನಟಿ ಶೋಭಾ ಶೆಟ್ಟಿ
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- News ಸಿಯಾಚಿನ್ ಬಳಿ ಚೀನಾ ಆಕ್ರಮಿತ ಕಾಶ್ಮೀರದಲ್ಲಿ ಹೊಸ ರಸ್ತೆ ನಿರ್ಮಾಣ; ಖಚಿತಪಡಿಸಿದ ಉಪಗ್ರಹ ಚಿತ್ರಗಳು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸರಿಯಾಗಿ ಕಾಲೇಜಿಗೆ ಹೋಗದೇ ಇಂಜಿನಿಯರಿಂಗ್ ಮುಗಿಸಿದರೆ ಹೀಗಾಗುತ್ತದೆಯಂತೆ!!
ವಿಶ್ವದ ಅದ್ಬುತ ಮಾನವ ನಿರ್ಮಿತ ಕಟ್ಟಡಗಳ ಹಿಂದೆ ನಮ್ಮ ನಡುವೆಯೇ ಇರುವ ಸಿವಿಲ್ ಇಂಜಿನಿಯರ್ಗಳ ಶ್ರಮವಿರುತ್ತದೆ. ಬುರ್ಜ್ ಖಲಿಫಾದಂತಹ 1 ಕಿಲೋಮೀಟರ್ ಎತ್ತರದ ಕಟ್ಟಡವೇ ಆಗಲಿ ಅಥವಾ ಒಂದು ಚಿಕ್ಕದಾದ ಮನೆಯನ್ನೇ ಆಗಲಿ, ಅವುಗಳನ್ನು ನಿರ್ಮಿಸುವ ಸಿವಿಲ್ ಇಂಜಿನಿಯರ್ಗಳ ಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಹೇಳಬಹುದು.
ದಿನಗಟ್ಟಲೇ ಕುಳಿತು ಒಂದು ಕಟ್ಟಡದ ವಿನ್ಯಾಸ ಹೇಗೆ ಮೂಡಿಬರಬೇಕು ಎಂದು ತಲೆಯಲ್ಲಿಯೇ ಸ್ಕೆಚ್ ಹಾಕುವ ಇಂತಹ ಕೆಲಸವನ್ನು ಒಂದು ಕಲಾತ್ಮಕತೆ ಎನ್ನಬಹುದು. ಆದರೆ, ಇಂತಹ ಕಲಾತ್ಮಕತೆಯನ್ನು ತೋರುವಲ್ಲಿ ಅವರು ಸೋತರೆ ಏನಾಗಬಹುದು ಎಂದು ವಿಶ್ವದಲ್ಲಿ ಕೆಲ ಇಂಜಿನಿಯರ್ಗಳು ಮಾಡಿರುವ ಅತ್ಯಂತ ತಮಾಷೆಯ ವಿಫಲತೆಗಳು ಸಾಕ್ಷಿಯಾಗುತ್ತವೆ.
ಸರಿಯಾಗಿ ಕಾಲೇಜಿಗೆ ತೆರಳದೇ ಇಂಜಿನಿಯರಿಂಗ್ ಮುಗಿಸಿದರೆ ಹೀಗಾಗುತ್ತದೆ ಎಂದು ಎಂಜಿನಿಯರ್ಗಳನ್ನು ಟ್ರೋಲ್ ಮಾಡುವವರಿಗೆ ಆಹಾರವಾಗಿ ಇಂತಹ ಅತ್ಯಂತ ತಮಾಷೆಯ ಇಂಜಿನಿಯರ್ಗಳು ವಿಫಲತೆಗಳು ಇವಾಗಿವೆ. ಇವುಗಳನ್ನು ಒಮ್ಮೆ ನೋಡಿ ನೀವು ನಗದೇ ಇದ್ದರೆ, ಖಂಡಿತವಾಗಿ ನೀವು ಕೂಡ ಓರ್ವ ಎಂಜಿನಿಯರ್ ಆಗಿರಬಹುದು.!
1 ಮುಚ್ಚಿದ ರೈಲ್ವೆ ಹಳಿ!
ಈ ರೈಲ್ವೆ ಹಳಿಯ ಮೂಲಕ ಯಾವುದೇ ರೈಲು ಹಾದುಹೋಗುತ್ತದೆ ಎಂದು ನಾನು ಯೋಚಿಸುವುದಿಲ್ಲ. ನೀವು?
2 ವಾಹನಕ್ಕೆ ಸುರಕ್ಷಿತ ಸ್ಥಳ
ನಿಮ್ಮ ವಾಹನಗಳನ್ನು ಅತ್ಯಂತ ಸುರಕ್ಷಿತವಾಗಿ ಪಾರ್ಕಿಂಗ್ ಮಾಡಬಹುದಾದ ಜಾಗ ಇದು.ಕಳ್ಳನು ಕಾರನ್ನು ಕದಿಯಲು ಯೋಚಿಸುತ್ತಿದ್ದರೆ, ಅವನು ಕ್ರೇನ್ ಅನ್ನೇ ತರಬೇಕು!
3 ಅತ್ಯಂತ ಸುರಕ್ಷಿತ ಎಟಿಎಂ
ಕಳ್ಳತನದ ಸಾಧ್ಯತೆಗಳನ್ನು ತಪ್ಪಿಸಲು ಪ್ರತಿ ಬ್ಯಾಂಕು ಈ ರೀತಿಯ ಎಟಿಎಂ ಸ್ಥಾಪಿಸಬೇಕಿದೆ. ಗೋಡೆಯ ಒಳಗೆ ಸೇರಿಕೊಂಡಿರುವ ಈ ಎಟಿಎಂನಲ್ಲಿ ಕುಳಿತುಕೊಂಡು ಹಣ ಪಡೆಯಬೇಕು.!
4 ಮಧ್ಯದಲ್ಲಿ ಸಿಲುಕಿರುವುದು
ಇನ್ನೇನು ದೊಡ್ಡದೊಂದು ಪ್ರಾಜೆಕ್ಟ್ ಯಶಸ್ವಿಯಾಗಿ ಮುಗಿಯಿತು ಎನ್ನುವಾಗಲೇ ಇಂತಹ ತಪ್ಪು ನಡೆದುಹೋಗಿದೆ. ಎಂಜಿನಿಯರ್ ಮಾಡಿದ ಮಿಲಿಮೀಟರ್ನಷ್ಟು ಪ್ಲಾನ್ ಹೀಗಾಗಲು ಕಾರಣವಾಗಿದೆ.
5 ಅರ್ಧ ಟಾಯ್ಲೆಟ್ ವಿನ್ಯಾಸ
ನಿಮ್ಮ ಮನೆ ವಿನ್ಯಾಸ ಮಾಡುವಾಗ ಈ ಅರ್ಧ ಟಾಯ್ಲೆಟ್ ವಿನ್ಯಾಸ ಚೆನ್ನಾಗಿರಬಹುದು. ಅಷ್ಟಕ್ಕೂ ಈ ಎಂಜಿನಿಯರ್ ತಲೆಯಲ್ಲಿ ಏನಿದೆ?
6 ನಿಷ್ಪ್ರಯೋಜಕ ವಿನ್ಯಾಸ
ಶೋಕಿಗಾಗಿ ಮನೆಮುಂದೆ ಕಾರುಗಳನ್ನು ನಿಲ್ಲಿಸುವವರನ್ನು ನೋಡಿದ್ದೇವೆ. ಆದರೆ, ಮನೆಗೆ ಯಾವುದೇ ಅವಶ್ಯಕತೆ ಇಲ್ಲದ ಮೆಟ್ಟಿಲುಗಳು ಇವು.!
7 ಮಧ್ಯದಲ್ಲಿ ಪೋಲ್
ಪಾರ್ಕಿಂಗ್ ಜಾಗದಿಂದ ನೇರವಾಗಿ ಕಾರರು ಹೋಗಲು ರಸ್ತೆ ನಿರ್ಮಿಸಲಾಗಿದೆ. ಆದರೆ, ಆ ಮಧ್ಯದಲ್ಲಿ ಕಂಬ ಇರುವುದು ಕಿರಿ ಕಿರಿ ಎನಿಸುತ್ತಿಲ್ಲವೇ?
8 ಕುಳ್ಳರಿಗೆ ಮಾತ್ರ ಈ ಎಸ್ಕಲೇಟರ್
ಇದು ಸಂಪೂರ್ಣವಾಗಿ ವಿನ್ಯಾಸಗೊಳಿಸಿರುವ ಎಸ್ಕಲೇಟರ್ ಆಗಿ ಕಾಣುತ್ತದೆಯಾದರೂ, ಸಾಮಾನ್ಯ ಎತ್ತರವಿರುವ ಮನುಷ್ಯ ಅದನ್ನು ಬಳಸಲಾಗುವುದಿಲ್ಲ! ಹಾಗಾಗಿ, ಕುಳ್ಳರಿಗೆ ಮಾತ್ರ ಈ ಎಸ್ಕಲೇಟರ್!
9 ಸೀಲಿಂಗ್ಗೆ ಮೆಟ್ಟಿಲುಗಳು
ಮಹಡಿಗೆ ಮೆಟ್ಟಿಲುಗಳು ಇರಬೇಕು ಎಂಬುದು ನಿಜ. ಆದರೆ, ತೆರಯದಿರುವ ಮನೆಯ ಸೀಲಿಂಗ್ಗೆ ಮೆಟ್ಟಿಲುಗಳನ್ನು ನಿರ್ಮಿಸಿದ ಎಂಜಿನಿಯರ್ ಮನಸ್ಸಿನಲ್ಲಿ ಏನಿತ್ತು?
10 ಅಪೂರ್ಣ ಮಾರ್ಗ
ದೈಹಿಕವಾಗಿ ಸವಾಲಿನ್ನು ಹೊಂದಿರುವ ಜನರಿಗೆ ಈ ಮಾರ್ಗವನ್ನು ವಿನ್ಯಾಸಗೊಳಿಸಲಾಗಿದೆ ಎಂಬುದರಲ್ಲಿ ಸಂದೇಹವಿಲ್ಲ, ಆದರೆ ಎಂಜಿನಿಯರ್ ಏಕೆ ಅದನ್ನು ಅಲ್ಲಿಯೇ ಕೊನೆಗೊಳಿಸಿದ್ದಾರೆ?
11 ಪ್ರವೇಶವಿರದ ಕ್ಲಬ್!
ಈ ಸ್ಥಳದಲ್ಲಿ ಮೊದಲು ಇದ್ದ ಒಂದು ವಿಶೇಷ ಕ್ಲಬ್ ಈಗ ಲಭ್ಯವಿಲ್ಲ. ಇದ್ದರೂ ಪ್ರವೇಶ ದ್ವಾರ ಎಲ್ಲಿದೆ?
ವಿಶ್ವವನ್ನೇ ಬದಲಾಯಿಸಿದ ಅಸಾಮಾನ್ಯ ಭಾರತೀಯ ವಿಜ್ಞಾನಿಗಳು ಇವರೆಲ್ಲರೂ!!
ಪ್ರತಿಯೊಬ್ಬರ ಜೀವನದಲ್ಲಿಯೂ ಅವರೆ ಗಮನಿಸದಷ್ಟು ಬದಲಾವಣೆ ಮಾಡಿರುವ ವಿಜ್ಞಾನವು ಇಂದು ದಿನ ಬಳಕೆಯ ವಸ್ತುಗಳಿಂದ ಹಿಡಿದು ಉನ್ನತ ತಂತ್ರಜ್ಞಾನದವರೆಗೆ ಸಾಗಿದೆ. ವಿಜ್ಞಾನದ ನೆರವಿಲ್ಲದೆ ಒಂದು ಕ್ಷಣವೂ ಬದುಕಲು ಸಾಧ್ಯವಿಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ, ಈಗ ಜೀವನವೇ ವಿಜ್ಞಾನ!!
ಇನ್ನು ವಿಶ್ವ ವಿಜ್ಞಾನ ಲೋಕಕ್ಕೆ ಭಾರತೀಯರ ಕೊಡುಗೆ ಏನು ಎಂದು ಪ್ರಶ್ನಿಸಿದರೆ ಎಲ್ಲರಿಗೂ ಥಟ್ಟನೆ ನೆನಪಾಗುವುದು 'ಸೊನ್ನೆ' ಎಂದು ಮಾತ್ರ! ಇಡೀ ವಿಶ್ವಕ್ಕೆ ಭಾರತೀಯರು ಸೊನ್ನೆಯನ್ನು ನೀಡಿರುವುದು ಅದ್ಬುತವೇ ಸರಿ. ಆದರೆ, ಸೊನ್ನೆಯೊಂದನ್ನು ಬಿಟ್ಟು ಭಾರತೀಯರು ವಿಶ್ವಕ್ಕೆ ನೀಡಿರುವ ಕೊಡುಗೆಗಳನ್ನು ನೆನಪಿಸಿಕೊಳ್ಳದೇ ಇರುವುದು ಮಾತ್ರ ದುರಂತ.!!
ಹಾಗೆಯೇ ವಿಜ್ಞಾನಿಗಳು ಎಂದರೆ ಐನ್ಸ್ಟೀನ್, ಐಸಾಕ್ ನ್ಯೂಟನ್ ಮತ್ತು ಸ್ಟೀಫನ್ ಹಾಕಿಂಗ್ ಎಂದು ಹೇಳುತ್ತಾರೆ ಹೊರತು ಭಾರತದ ಯಾವೊರ್ವ ಸಾಧಕ ವಿಜ್ಞಾನಿಯನ್ನು ಸಹ ನೆನೆಸಿಕೊಳ್ಳುವುದಿಲ್ಲ.! ಹಾಗಾಗಿ, ಭಾರತ ಕಂಡಂತಹ ಅಸಾಮಾನ್ಯ 7 ಜನ ಭಾರತೀಯ ವಿಜ್ಞಾನಿಗಳನ್ನು ನಾವು ಮತ್ತೆ ಮತ್ತೆ ನೆನಪಿಸಿಕೊಳ್ಳೋಣ ಎಂಬುದಕ್ಕೆ ಇಂದಿನ ಲೇಖನ.!!
ಸಿ.ವಿ. ರಾಮನ್!!
ವಿಶ್ವದ ಭೌತ ವಿಜ್ಞಾನಕ್ಕೆ ಭಾರೀ ಕೊಡುಗೆಯನ್ನು ನೀಡಿದ ಸಿ.ವಿ. ರಾಮನ್ ಅವರು 1888 ನವೆಂಬರ್ 7ರಂದು ತಮಿಳುನಾಡಿನ ತಿರುಚನಾಪಳ್ಳಿಯಲ್ಲಿ ಜನಿಸಿದರು. 1930ರಲ್ಲಿ . ಇವರು ಆವಿಷ್ಕರಿಸಿದ ರಾಮನ್ ಪರಿಣಾಮಗಳಿಗೆ ಭೌತಶಾಸ್ತ್ರ ವಿಭಾಗದಲ್ಲಿ 'ನೊಬೆಲ್' ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇವರು 1970 ನವೆಂಬರ್ 21 ರಂದು ಬೆಂಗಳೂರಿನಲ್ಲಿ ಮೃತಪಟ್ಟರು.
ಸರ್.ಎಂ ವಿಶ್ವೇಶ್ವರಯ್ಯ!!
1860ರಲ್ಲಿ ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯಲ್ಲಿ ಜನಿಸಿದ ಕರ್ನಾಟಕದ ಸುಪುತ್ರ ಸರ್.ಎಂ ವಿಶ್ವೇಶ್ವರಯ್ಯನವರು ವಿಶ್ವದ ಪ್ರಖ್ಯಾತ ಇಂಜಿನಿಯರ್ಗಳಲ್ಲಿ ಒಬ್ಬರು ಎಂದು ಇಡೀ ವಿಶ್ವವೇ ಒಪ್ಪಿಕೊಂಡಿದೆ. ಕರ್ನಾಟಕದಲ್ಲಿ ಕೆಆರ್ಎಸ್ ನಿರ್ಮಿಸಿದ ಇವರು ದೇಶದಲ್ಲಿ ಕಾಲುವೆ ನೀರಾವರಿ ವ್ಯವಸ್ಥೆ ನಿರ್ಮಾಣದಲ್ಲಿ ಗಣನೀಯ ಸೇವೆ ಸಲ್ಲಿಸಿದರು. ಏಪ್ರಿಲ್ 14 1962ರಲ್ಲಿ ಈ ಭಾರತ ರತ್ನ ತನ್ನ ಸೇವೆಯನ್ನು ನಿಲ್ಲಿಸಿತು.!!
ಎಸ್.ಚಂದ್ರಶೇಖರ್!!
ಕಪ್ಪುಕುಳಿಗಳ ಗಣಿತ ಸಿದ್ದಾಂತಕ್ಕಾಗಿ 1983ರಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಎಸ್.ಚಂದ್ರಶೇಖರ್ ಅವರು 1910 ಅಕ್ಟೋಬರ್ 19ರಂದು ಬ್ರಿಟಿಷ್ ಇಂಡಿಯಾದ ಆಳ್ವಿಕೆಯ ಲಾಹೋನ್ನಲ್ಲಿ ಜನಿಸಿದರು. ಕುಬ್ಜ ನಕ್ಷತ್ರಗಳಿಗೆ ಸಂಬಂಧಿಸಿದಂತೆ ಅನೇಕ ಸಂಶೋಧನೆ ಹಾಗೂ ಪ್ರಬಂಧಗಳನ್ನು ನೀಡಿದ ಇವರು ರಲ್ಲಿ ಚಿಕಾಗೋದಲ್ಲಿ ತಮ್ಮ 82ನೇ ವಯಸ್ಸಿನಲ್ಲಿ ಮೃತಪಟ್ಟರು.
ಹೋಮಿ ಜೆ ಬಾಬಾ!!
ಭಾರತದ ಮೊದಲ ಪರಮಾಣು ಶಕ್ತಿ ಆಯೋಗದ ಅಧ್ಯಕ್ಷರಾಗಿದ್ದ ಹೋಮಿ ಜೆ ಬಾಬಾ ಅವರು 1909 ಅಕ್ಟೋಬರ್ 30 ರಂದು ಮುಂಬೈನಲ್ಲಿ ಜನಿಸಿದರು. ದೇಶದ ಪರಮಾಣು ಶಕ್ತಿಯ ಪಿತಾಮಹ ಎಂದೇ ಖ್ಯಾತರಾಗಿದ್ದ ಹೋಮಿ ಜೆ ಬಾಬಾ ಅವರು 1966 ಜನವರಿ 24ರಂದು ವಿಮಾನ ಅಪಘಾತದಲ್ಲಿ ಮೃತಪಟ್ಟರು.
ಶ್ರೀನಿವಾಸನ್ ರಾಮಾನುಜಂ!!
ಡಿಸೆಂಬರ್ 22, 1887 ನೇ ವರ್ಷ ತಮಿಳುನಾಡಿನಲ್ಲಿ ಭಾರತದ ಗಣಿತಶಾಸ್ತ್ರದ ಅದ್ಭುತ ಪ್ರತಿಭೆ ಶ್ರೀನಿವಾಸನ್ ರಾಮಾನುಜಂ ಅವರ ಜನನವಾಯಿತು. ಇಡೀ ವಿಶ್ವಕ್ಕೆ ಗಣೀತ ವಿಶ್ಲೇಷಣೆ, ಸಂಖ್ಯೆ ಸಿದ್ಧಾಂತ, ಅನಂತ ಸರಣಿ, ಮತ್ತು ಮುಂದುವರಿದ ಭಿನ್ನರಾಶಿಗಳ ಬಗ್ಗೆ ಹೆಚ್ಚಿನ ಕೊಡುಗೆ ನೀಡಿದ ಇವರು ಕೇವಲ 32ನೇ ವಯಸ್ಸಿಗೆ ವಿಧಿವಶವಾದರು.!!
ಜಗದೀಶ್ ಚಂದ್ರ ಬೋಸ್
ಸಸ್ಯಗಳಿಗೂ ಜೀವವಿದೆ ಎಂಬುದನ್ನು ಇಡೀ ಜಗತ್ತಿಗೆ ತಿಳಿಸಿಕೊಟ್ಟವರು ಅಸಾಮಾನ್ಯ ವಿಜ್ಞಾನಿ ಜಗದೀಶ್ ಚಂದ್ರ ಬೋಸ್ ಅವರು. ನವೆಂಬರ್ 30 1858 ರಲ್ಲಿ ಪಶ್ಚಿಮ ಬಂಗಾಳದಲ್ಲಿ ಜನಿಸಿದ ಬೋಸ್ ಅವರು ಭೌತವಿಜ್ಞಾನ, ಜೀವಶಾಸ್ತ್ರ, ಸಸ್ಯಶಾಸ್ತ್ರಗಳ ಬಗ್ಗೆ ತಿಳಿದಿದ್ದರು. ವಿಶ್ವದ ಹಲವು ಖ್ಯಾತ ವಿಜ್ಞಾನಿಗಳೊಂದಿಗೆ ಇವರು ಸಂಪರ್ಕ ಹೊಂದಿದ್ದರು.
ಎ.ಪಿ.ಜೆ. ಅಬ್ದುಲ್ ಕಲಾಂ
ಭಾರತದ ಮಾಜಿ ರಾಷ್ಟ್ರಪತಿಗಳಾದ ಕಲಾಂ ಅವರು ಭಾರತದ ಅಣು ವಿಜ್ಞಾನದ ಪ್ರಗತಿಯಲ್ಲಿ ಅಪಾರ ಸಾಧನೆ ಮಾಡಿದರು. ತಮಿಳುನಾಡಿನ ರಾಮೇಶ್ವರಂನಲ್ಲಿ ಬಡಕುಟುಂಬವೊಂದರಲ್ಲಿ ಜನಿಸಿದ ಅಬ್ದುಲ್ ಕಲಾಂ ಅವರು ಬಾಹ್ಯಕಾಶ ವಿಜ್ಞಾನದಲ್ಲಿ ಖ್ಯಾತನಾಮರಾಗಿದ್ದರು. ಭಾರತ ರತ್ನ ಪ್ರಶಸ್ತಿ ಪಡೆದ ಇವರು ಜುಲೈ 25, 2015ರಂದು ಮೃತರಾದರು.
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999