ಇನ್ನು ಮುಂದೆ ಆಧಾರ್ ಜೆರಾಕ್ಸ್ ಪ್ರತಿ ಬೇಡ: ಈ ಆಪ್ ಇದ್ದರೇ ಸಾಕು
ಜನರ ಸಹಾಯಕ್ಕಾಗಿ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (UIDAI) ಆಧಾರ್ ಮೊಬೈಲ್ ಆಪ್ ಬಿಡುಗಡೆ ಮಾಡಿದ್ದು, ಮೂಲಕ ಜೆರಾಕ್ಸ್ ಪ್ರತಿ ನೀಡುವ ಕ್ರಮವನ್ನು ಕೊನೆಗಾಣಿಸಲು ಮುಂದಾಗಿದೆ. ಇದಲ್ಲದೇ ಬಳಕೆದಾರರು ಆಧಾರ್ ಕಾರ್ಡ್ ಅನ್ನು ಎಲ್ಲ ಕಡೆಗೂ
ಸರ್ಕಾರದ ಹಾಗೂ ಬ್ಯಾಂಕ್ ಯೋಜನೆಗಳ ಸೌಲಭ್ಯ ಪಡೆಯುವ ಸಲುವಾಗಿ ಆಧಾರ್ ಕಾರ್ಡ್ ನೀಡುವುದು ಸದ್ಯಕ್ಕೆ ಕಡ್ಡಾಯವಾಗಿದೆ. ಇದಕ್ಕಾಗಿ ಇನ್ನು ಮುಂದೆ ಆಧಾರ್ ಜೆರಾಕ್ಸ್ ಪ್ರತಿಯನ್ನು ನೀಡುವುದು ಬೇಡ ಎನ್ನಲಾಗಿದೆ. ಇದಕ್ಕಾಗಿ ಈ ಆಪ್ ಇದ್ದರೇ ಸಾಕು

ಓದಿರಿ: ಜಿಯೋ ಫೋನ್ಗಿಂತಲೂ BSNL ಫೋನ್ ಬೆಸ್ಟ್: ಬೇಕಿದ್ರೆ ನೀವೇ ನೋಡಿ..!
ಜನರ ಸಹಾಯಕ್ಕಾಗಿ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (UIDAI) ಆಧಾರ್ ಮೊಬೈಲ್ ಆಪ್ ಬಿಡುಗಡೆ ಮಾಡಿದ್ದು, ಮೂಲಕ ಜೆರಾಕ್ಸ್ ಪ್ರತಿ ನೀಡುವ ಕ್ರಮವನ್ನು ಕೊನೆಗಾಣಿಸಲು ಮುಂದಾಗಿದೆ. ಇದಲ್ಲದೇ ಬಳಕೆದಾರರು ಆಧಾರ್ ಕಾರ್ಡ್ ಅನ್ನು ಎಲ್ಲ ಕಡೆಗೂ ತೆಗದುಕೊಂಡು ಹೋಗಬೇಕಾಗಿಲ್ಲ.
ದತ್ತಾಂಶಗಳ ಮೂಲಕ ಸಾರ್ವಜನಿಕರ ಮಾಹಿತಿ ಎಂ ಆಧಾರ್ ಆಪ್ ನಲ್ಲಿ ದೊರೆಯಲಿದೆ. ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಮತ್ತು ಭಾವಚಿತ್ರ ದೊರೆಯುತ್ತದೆ. ಇದನ್ನು ಸರ್ಕಾರಿ ಕಚೇರಿಗಳಿಗೆ ಆನ್ಲೈನ್ ಮೂಲಕವೇ ಸುಲಭವಾಗಿ ವರ್ಗಾಯಿಸಬಹುದಾಗಿದೆ.

ಓದಿರಿ: ಬರಲಿದೆ ಮೊಟೊ G6 ಸ್ಮಾರ್ಟ್ಫೋನ್ ಶೀಘ್ರವೇ ಲಾಂಚ್..!
ಇನ್ನು ಮುಂದೆ ಸಾರ್ವಜನಿಕರು ಎಂ ಆಧಾರ್ ಮೊಬೈಲ್ ಆಪ್ ಮೂಲಕವೇ ಸಂಬಂಧಪಟ್ಟ ಇಲಾಖೆಗಳು ಮತ್ತು ಬ್ಯಾಂಕ್ಗಳಿಗೆ ಆನ್ಲೈನ್ ಮೂಲಕವೇ ಆಧಾರ್ ಕಾರ್ಡ್ ಅನ್ನು ವರ್ಗಾವಣೆ ಮಾಡಬಹುದು. ಇದರಿಂದ ಆಧಾರ್ ಜೆರಾಕ್ಸ್ ಮಾಡಿಸುವುದು ತಪ್ಪಲಿದೆ.


Click it and Unblock the Notifications








