ವಾಟ್ಸ್ಆಪ್ ಮೇಸೆಜ್ ಶೇರ್ ಮಾಡುವ ಮುನ್ನ ಎಚ್ಚರ: ಪೊಲೀಸರ ಅತಿಥಿಯಾಗಬೇಕಾದಿತು..!!
ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಗಳು ಬಹುಬೇಗನೇ ಜನರನ್ನು ತಲುಪುತ್ತಿವೆ. ಈ ಹಿನ್ನಲೆಯಲ್ಲಿ ಅವುಗಳು ಒಳ್ಳೆಯ ಕಾರ್ಯಕ್ಕೆ ಮತ್ತು ಕೆಟ್ಟ ಕಾರ್ಯ ಎರಡಕ್ಕೂ ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ಇಂದಿನ ದಿನದಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆಯೂ ಹೆಚ್ಚಾಗುತ್ತಿದ್ದು, ಅದರಲ್ಲೂ ಜಿಯೋ ಸೇವೆಯನ್ನು ಆಂಭಿಸಿದ ನಂತರದಲ್ಲಿ ಫೇಸ್ಬುಕ್ ಮತ್ತು ವಾಟ್ಸ್ಆಪ್ ಬಳಕೆದಾರರ ಸಂಖ್ಯೆಯಲ್ಲಿ ಹೆಚ್ಚಿನ ಬದಲಾವಣೆಯನ್ನು ಕಾಣಬಹುದಾಗಿದೆ.

ಓದಿರಿ: ಚೀನಾ ಸ್ಮಾರ್ಟ್ಫೋನ್ ಕಂಪನಿಗಳ ಮತ್ತೊಂದು ಮೋಸ ಬಯಲು..!! ಗೊತ್ತಾದ್ರೆ ಖಂಡಿತ ಶಾಕ್ ಆಗ್ತೀರಾ..!!
ಇದೇ ಮಾದರಿಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಗಳು ಬಹುಬೇಗನೇ ಜನರನ್ನು ತಲುಪುತ್ತಿವೆ. ಈ ಹಿನ್ನಲೆಯಲ್ಲಿ ಅವುಗಳು ಒಳ್ಳೆಯ ಕಾರ್ಯಕ್ಕೆ ಮತ್ತು ಕೆಟ್ಟ ಕಾರ್ಯ ಎರಡಕ್ಕೂ ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ತಮಿಳುನಾಡಿನಲ್ಲಿ ವ್ಯಕ್ತಿ ಬಂಧನ:
ಇದೇ ಮಾದರಿಯಲ್ಲಿ ತಮಿಳುನಾಡಿನ ಚೆನ್ನೈ ನಗರದಲ್ಲಿ ಪೊಲೀಸರು ವ್ಯಕ್ತಿಯೊಬ್ಬನ್ನು ಬಂಧಿಸಿದ್ದು, ಆತ ವಾಟ್ಸ್ಆಪ್ ನಲ್ಲಿ ದೇಶ ದೋಹ್ರದ ಸಂದೇಶವನ್ನು ಕಳುಹಿಸದ ಆರೋಪವನ್ನು ಹೊರಿಸಲಾಗಿದ್ದು, ಆತನನ್ನು ಅಬ್ಬರ್ ಸಲೀಮ್ ಎಂದು ಗುರುತಿಸಲಾಗಿದೆ.

ಮೇಸೆಜ್ ಗಳನ್ನು ಕಳುಹಿಸುವ ಮುನ್ನ ಎಚ್ಚರ.!
ವಾಟ್ಸ್ಆಪ್ ನಲ್ಲಿ ದಿನಕ್ಕೆ ನೂರಾರು ಮೇಸೆಜ್ ಗಳು ಹರಿದಾಡುತ್ತಿರುತ್ತದೆ. ಈ ಹಿನ್ನಲೆಯಲ್ಲಿ ನೀವು ಅವುಗಳನ್ನು ಶೇರ್ ಮಾಡುವ ಮುನ್ನ ಎಚ್ಚರವಹಿಸಿ, ಇಲ್ಲವಾದರೆ ನೀವು ಕಳುಹಿಸುವ ಮೇಸೆಜ್ ನಲ್ಲಿ ಯಾವುದದಾರು ತಪ್ಪು ಸಂದೇಶವಿದ್ದರೇ ಜೈಲು ಕಂಬಿ ಎಣಿಸಬೇಕಾಗುತ್ತದೆ.

ಯಾರದೋ ತಪ್ಪಿಗೆ ನಿಮಗೆ ಶಿಕ್ಷೆ:
ನೀವು ಗ್ರೂಪ್ ಆಡ್ಮಿನ್ ಆಗಿರುವ ಗ್ರೂಪ್ ನಲ್ಲಿ ಸಮಾಜದಲ್ಲಿ ಆಶಾಂತಿ ಉಂಟುಮಾಡುವ ಮತ್ತು ಕ್ರಾಂತಿಕಾರಕ ಪೋಸ್ಟ್ ಗಳನ್ನು ಯಾರಾದರು ಪೋಸ್ಟ್ ಮಾಡಿದರೆ ಅದನ್ನು ಡಿಲೀಟ್ ಮಾಡಿ, ಮತ್ತೇ ಶೇರ್ ಮಾಡಲು ಪ್ರೇರೆಪಿಸಬೇಡಿ ಇದರಿಂದಲೂ ನಿಮಗೆ ಶಿಕ್ಷೆಯಾಗುವ ಸಾಧ್ಯತೆ ಇದೆ.


Click it and Unblock the Notifications