Just In
- 13 min ago Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- 1 hr ago iPhones: ಬೇಕಿತ್ತಾ ಇದೆಲ್ಲ? ನಕಲಿ ಐಫೋನ್ ಮೂಲಕ ಆಪಲ್ಗೆ ಪಂಗನಾಮ ಹಾಕಿದವನಿಗೆ ಜೈಲೂಟ
- 2 hrs ago ಮತ್ತೊಂದು ಅಗ್ಗದ 5G ಫೋನ್ ಲಾಂಚ್ ಮಾಡಲು ಸಜ್ಜಾದ ರಿಯಲ್ಮಿ!..ಫೀಚರ್ಸ್ ಏನು?
- 4 hrs ago OnePlus: ಒನ್ಪ್ಲಸ್ ನಾರ್ಡ್ CE 4 ಫೋನ್ನ ಭಾರತದ ಬೆಲೆ ಮಾಹಿತಿ ಲೀಕ್! ಲಾಂಚ್ಗೆ ನಾಲ್ಕೇ ದಿನ ಬಾಕಿ
Don't Miss
- News Agniveer: 'ಅಗ್ನಿವೀರ್' ಯೋಜನೆಗೆ ಬದಲಾವಣೆ ತರಲು ಕೇಂದ್ರ ಮುಕ್ತ: ರಕ್ಷಣಾ ಸಚಿವ
- Automobiles ಯುಎಸ್ಎ, ಕೆನಡಾಗೂ ಕಾಲಿಟ್ಟ ಭಾರತೀಯ ಬೈಕ್: ಮುಂದುವರೆದ ವಿಶ್ವಗುರು ಭಾರತದ ನಾಗಾಲೋಟ
- Movies ಗುರುಪ್ರಸಾದ್ಗೆ ತಿರುಗೇಟು ಕೊಟ್ಟ ಶ್ರುತಿ ಹರಿಹರನ್ ; ನನ್ನ ಮೀಟೂ ಕಥೆ ಇನ್ನೂ ಮುಗಿದಿಲ್ಲ ಎಂದ ನಟಿ..!
- Lifestyle ವಿಶ್ವದಲ್ಲೇ ಅತೀ ಹೆಚ್ಚು ಬಾರಿ ಚುನಾವಣೆ ಸೋತ ವ್ಯಕ್ತಿ..! ಯಾರು ಈ ಸೋಲುವ ಸರದಾರ ಗೊತ್ತಾ?
- Finance ನಿಮಗೆ ಗೊತ್ತಲ್ಲದೇ ನಿಮ್ಮ ಹೆಸರಲ್ಲಿ ಖಾತೆ ತೆರೆದಿರ್ತಾರೆ, ಪಿಂಚಣಿ ಯೋಜನೆ ಬಗ್ಗೆ ಹುಷಾರಾಗಿರಿ
- Sports IPL 2024: ಐಪಿಎಲ್ನಲ್ಲಿ ವಿಶಿಷ್ಟ ದಾಖಲೆ ಬರೆದ ಜಯದೇವ್ ಉನಾದ್ಕಟ್; ಈ ಸಾಧನೆ ಮಾಡಿದ ಮೊದಲ ಭಾರತೀಯ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಭಾರತೀಯ ಫೇಸ್ಬುಕ್ಗೆ ಹೊಸ ಸಾರಥಿ..! ಅಜಿತ್ ಮೋಹನ್ ನೂತನ ಎಂಡಿ
ಸಾಮಾಜಿಕ ಜಾಲತಾಣದ ದೈತ್ಯ ಫೇಸ್ಬುಕ್ ಆಡಳಿತದಲ್ಲಿ ಅಮೂಲಾಗ್ರ ಬದಲಾವಣೆಯನ್ನು ತರಲು ಮುಂದಾಗಿದೆ. ಭಾರತದಲ್ಲಿ ಫೇಸ್ಬುಕ್ ಇನ್ನಷ್ಟು ಜನಸ್ನೇಹಿಯಾಗಲು ಮತ್ತು ಅನೇಕ ಯೋಜನೆಗಳನ್ನು ಕಾರ್ಯಗತಗೊಳಿಸಲು ಹೊಸ ವ್ಯವಸ್ಥಾಪಕ ನಿರ್ದೇಶಕ ಹಾಗೂ ಉಪಾಧ್ಯಕ್ಷರನ್ನು ನೇಮಕ ಮಾಡಿದ್ದು, 2015 ಅಕ್ಟೋಬರ್ ನಂತರ ಭಾರತದಲ್ಲಿ ಮುಖ್ಯಸ್ಥರಿಲ್ಲದೇ ಕಾರ್ಯನಿರ್ವಹಿಸುವುತ್ತಿದ್ದ ಫೇಸ್ಬುಕ್ ಹೊಸ ಸಾರಥಿಯನ್ನು ನೇಮಿಸಿಕೊಂಡಿದೆ.
ಹೌದು, ಸ್ಟಾರ್ ಇಂಡಿಯಾ ಮಾಲೀಕತ್ವದ ಆನ್ಲೈನ್ ವಿಡಿಯೋ ಸ್ಟ್ರೀಮಿಂಗ್ ವೇದಿಕೆ ಹಾಟ್ಸ್ಟಾರ್ನ ಪ್ರಸ್ತುತ ಸಿಇಒ ಆಗಿರುವ ಅಜಿತ್ ಮೋಹನ್ ಅವರನ್ನು ಫೇಸ್ಬುಕ್ ಭಾರತಕ್ಕೆ ಹೊಸ ಎಂಡಿ ಮತ್ತು ಉಪಾಧ್ಯಕ್ಷರನ್ನಾಗಿ ನೇಮಿಸಿಕೊಂಡಿದೆ. ಇದಲ್ಲದೇ ಫ್ಲಿಪ್ಕಾರ್ಟ್ ಕೂಡ ತನ್ನ ಸಮೂಹದ ಸಿಇಒವನ್ನು ಕೂಡ ಬದಲಾಯಿಸುತ್ತಿದ್ದು, ಬಿನ್ನಿ ಬನ್ಸಾಲ್ ಸ್ಥಾನಕ್ಕೆ ಹೊಸ ಹೆಸರು ಯಾವುದು ಎಂಬುದನ್ನು ಟೆಕ್ ಲೋಕ ಕಾತುರದಿಂದ ಕಾಯುತ್ತಿದೆ. ಹಾಗಿದ್ದರೆ ಎರಡು ಟೆಕ್ ಕಂಪನಿಗಳಲ್ಲಿ ಏನೇನು ಬೆಳವಣಿಗೆಯಾಗುತ್ತಿದೆ ಎಂಬುದನ್ನು ಮುಂದೆ ನೋಡಿ.
ಜನೇವರಿಯಿಂದ ಕಾರ್ಯಾರಂಭ
ಫೇಸ್ಬುಕ್ ಭಾರತದ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಆಯ್ಕೆಯಾಗಿರುವ ಅಜಿತ್ ಮೋಹನ್ ಮುಂದಿನ ವರ್ಷದ ಜನೇವರಿಯಿಂದ ಫೇಸ್ಬುಕ್ನಲ್ಲಿ ಕಾರ್ಯಾರಂಭ ಮಾಡಲಿದ್ದಾರೆ. ಭಾರತದಲ್ಲಿ ಫೇಸ್ಬುಕ್ನ ಸುಗಮ ಕಾರ್ಯನಿರ್ವಹಣೆಗೆ ಅನುವು ಮಾಡಿಕೊಡುವ ಉದ್ದೇಶದಿಂದ ಹೊಸದಾಗಿ ಸೃಷ್ಟಿಸಲಾಗಿರುವ ಎಂಡಿ ಹುದ್ದೆಗೆ ಮೋಹನ್ ನೇಮಕವಾಗಿದ್ದಾರೆ.
ಭಾರತದಲ್ಲಿ ಇನ್ನಷ್ಟು ಪ್ರಭಲವಾಗಲು ಕಾರ್ಯತಂತ್ರ
ಫೇಸ್ಬುಕ್ಗೆ ಭಾರತ ದೊಡ್ಡ ಮಾರುಕಟ್ಟೆಯಾಗಿದ್ದು, ಇಲ್ಲಿನ ಆಗು-ಹೋಗುಗಳು ಫೇಸ್ಬುಕ್ಗೆ ನೇರ ಪರಿಣಾಮವನ್ನು ಬೀರುತ್ತವೆ. ಆದ್ದರಿಂದ ಸಾಮಾಜಿಕ ಜಾಲತಾಣವನ್ನು ಭಾರತದಲ್ಲಿ ಪ್ರಭಲ ಪಡಿಸಲು ಹೊಸ ಕಾರ್ಯತಂತ್ರ ಎಣೆದಿದ್ದು, ಅದರ ಮೊದಲ ಅಂಶವಾಗಿ ಹೊಸ ಎಂಡಿಯನ್ನು ನೇಮಕ ಮಾಡಿರುವುದು. ಇದರಿಂದ ಫೇಸ್ಬುಕ್ ತನ್ನ ಕಾರ್ಯತಂತ್ರಗಳನ್ನು ಬಲಪಡಿಸಿಕೊಳ್ಳುವುದಲ್ಲದೇ, ಜನರು, ಉದ್ಯಮಗಳು ಹಾಗೂ ಸರ್ಕಾರದ ಜತೆ ಉತ್ತಮ ಸಂಪರ್ಕ ಸಾಧಿಸಲು ನೆರವಾಗುತ್ತದೆ ಎಂಬುದು ಫೇಸ್ಬುಕ್ನ ಚಿಂತನೆ.
ಅಜಿತ್ಗೆ ಸಂತಸ
ಫೇಸ್ಬುಕ್ ಭಾರತದ ಹೊಸ ಎಂಡಿಯಾಗಿ ಆಯ್ಕೆಯಾಗಿರುವ ಅಜಿತ್ ಮೋಹನ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, "ಫೇಸ್ಬುಕ್ ನೀಡಿರುವ ಹೊಸ ಜವಾಬ್ದಾರಿ ವಹಿಸಿಕೊಳ್ಳಲು ಸಂತಸವಾಗುತ್ತಿದೆ. ಭಾರತದಲ್ಲಿಫೇಸ್ಬುಕ್ ಸಂಸ್ಥೆಯನ್ನು ಮತ್ತಷ್ಟು ಬಲಪಡಿಸುವುದು ನನ್ನ ಮುಖ್ಯ ಗುರಿ ಆಗಿದೆ ಎಂದು ತಮ್ಮ ಖುಷಿ ಹಂಚಿಕೊಂಡಿದ್ದಾರೆ.
ಎರಡು ದಶಕದ ಅನುಭವ
ಫೇಸ್ಬುಕ್ ಭಾರತದ ಹೊಸ ಎಂಡಿ ಆಗಿ ನೇಮಕಗೊಂಡಿರುವ ಅಜಿತ್ ಮೋಹನ್ ತಮ್ಮ 20 ವರ್ಷದ ಅನುಭವವನ್ನು ಫೇಸ್ಬುಕ್ನಲ್ಲಿ ಧಾರೆ ಎರೆಯಲಿದ್ದಾರೆ. ಸ್ಟಾರ್ ಇಂಡಿಯಾ, McKinsey and Co.ನಲ್ಲಿ ಸೇವೆ ಸಲ್ಲಿಸಿರುವ ಇವರು Arthur D.Little ಎಂಬ ಮ್ಯಾನೆಜ್ಮೆಂಟ್ ಕನ್ಸಲ್ಟಿಂಗ್ ಉದ್ಯಮದಲ್ಲಿಯೂ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ 21st Century Fox Mediaದ ಸ್ಟಾರ್ ಇಂಡಿಯಾ ಒಡೆತನದಲ್ಲಿರುವ ಆನ್ಲೈನ್ ವಿಡಿಯೋ ಸ್ಟ್ರೀಮಿಂಗ್ ವೇದಿಕೆ ಹಾಟ್ಸ್ಟಾರ್ನ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದು, ಜನೇವರಿಯಲ್ಲಿ ಫೇಸ್ಬುಕ್ ಭಾರತದ ಸಾರಥ್ಯ ವಹಿಸಿಕೊಳ್ಳಲಿದ್ದಾರೆ.
2015ರ ನಂತರ ಸಾರಥಿಯೇ ಇದ್ದಿಲ್ಲ
ಅಕ್ಟೋಬರ್ 2015ರಲ್ಲಿ ಅಂದಿನ ಫೇಸ್ಬುಕ್ ಭಾರತದ ಎಂಡಿ ಉಮಾಂಗ್ ಬೇಡಿ ನೇಮಕವಾದ ಕೇವಲ 15 ತಿಂಗಳಿನಲ್ಲಿಯೇ ರಾಜೀನಾಮೆ ಕೊಟ್ಟು ಫೇಸ್ಬುಕ್ನಿಂದ ಹೊರನಡೆದ ನಂತರ ಭಾರತದಲ್ಲಿ ಫೇಸ್ಬುಕ್ನ ಮುಖ್ಯಸ್ಥರ ಹುದ್ದೆ ಖಾಲಿ ಇತ್ತು. ಆದ್ದರಿಂದ ಫೇಸ್ಬುಕ್ ಭಾರತ ಹಾಗೂ ದಕ್ಷಿಣ ಏಷ್ಯಾದ ನಿರ್ದೇಶಕ ಸಂದೀಪ್ ಭೂಷಣ್ ಹಂಗಾಮಿ ಎಂಡಿ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಭಾರತ ಪ್ರಮುಖ ರಾಷ್ಟ್ರ
ಫೇಸ್ಬುಕ್ಗೆ ಭಾರತ ಪ್ರಮುಖವಾದ ರಾಷ್ಟ್ರವಾಗಿದ್ದು, ಈ ಮೂಲಕ ಜನರನ್ನು ಒಟ್ಟಾಗಿ ಕರೆದುಕೊಂಡು ಸಮುದಾಯವನ್ನು ಅಭಿವೃದ್ಧಿಪಡಿಸಲು ಮುಂದಾಗುತ್ತೇವೆ. ಅದಕ್ಕಾಗಿ ಅಜಿತ್ ತಮ್ಮ ಅನುಭವವನ್ನು ವಿನಿಯೋಗಿಸುತ್ತಾರೆ. ಭಾರತದಲ್ಲಿ ಫೇಸ್ಬುಕ್ ಸಕಾರಾತ್ಮಕ ಪರಿಣಾಮವನ್ನು ಸಮುದಾಯಗಳು, ಸಂಸ್ಥೆಗಳು, ಉದ್ಯಮಗಳು ಹಾಗೂ ಸರ್ಕಾರದ ಮೇಲೆ ಉಂಟು ಮಾಡುತ್ತೇವೆ ಎಂದು ಫೇಸ್ಬುಕ್ನ ಬ್ಯುಸಿನೆಸ್ ಮತ್ತು ಮಾರುಕಟ್ಟೆ ಪಾಲುದಾರಿಕೆಯ ಉಪಾಧ್ಯಕ್ಷರಾದ ಡೇವಿಡ್ ಫೀಶ್ಕರ್ ಹೇಳಿದ್ದಾರೆ.
ವಾಟ್ಸ್ಆಪ್ ಮತ್ತು ಇನ್ಸ್ಟಾಗ್ರಾಂಗೆ ಇಲ್ಲ
ಹೊಸ ಎಂಡಿ ಅಜಿತ್ ಮೋಹನ್ ಕೇವಲ ಫೇಸ್ಬುಕ್ಗೆ ಕಾರ್ಯನಿರ್ವಹಿಸಲಿದ್ದು, ಫೇಸ್ಬುಕ್ ಮಾಲೀಕತ್ವದ ವಾಟ್ಸ್ಆಪ್ ಮತ್ತು ಇನ್ಸ್ಟಾಗ್ರಾಂನ ಜವಾಬ್ದಾರಿಯನ್ನು ಹೊತ್ತುಕೊಂಡಿಲ್ಲ. ಎರಡು ಪ್ಲಾಟ್ಫಾರ್ಮ್ಗಳು ಪ್ರಸ್ತುತ ಭಾರತದಲ್ಲಿ ಮುಖ್ಯಸ್ಥರನ್ನು ಹೊಂದಿಲ್ಲ. ಆದರೆ, ವಾಟ್ಸ್ಆಪ್ ಕೋಮಲ್ ಲಹಿರಿ ಎನ್ನುವವರನ್ನು ದೂರು ಅಧಿಕಾರಿಯನ್ನಾಗಿ ನೇಮಕ ಮಾಡಿಕೊಂಡಿದ್ದು, ವಾಟ್ಸ್ಆಪ್ನಲ್ಲಿ ಬದಲಾವಣೆಗಳನ್ನು ಕಾಣಬಹುದು.
ನಂಬಿಕೆ ಹೆಚ್ಚಿಸಿಕೊಳ್ಳಲು ಉತ್ತಮ ಅಸ್ತ್ರ
ಇತ್ತೀಚೆಗೆ ತಾನೇ ಕೆಂಬ್ರಿಡ್ಜ್ ಅನಾಲಿಟಿಕಾ ಡೇಟಾ ಸೋರಿಕೆ ಪ್ರಕರಣದಲ್ಲಿ ಜನರ ನಂಬಿಕೆ ಕಳೆದುಕೊಂಡಿದ್ದ ಫೇಸ್ಬುಕ್ ಭಾರತದಲ್ಲಿ ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗೆ ತಯಾರಾಗುತ್ತಿದೆ. ಸುಳ್ಳು ಸುದ್ದಿ ಮತ್ತೀತರ ಅಪಾಯಕಾರಿ ಅಂಶಗಳ ವಿರುದ್ಧ ಗಂಭೀರ ಹೋರಾಟ ನಡೆಸಿರುವ ಫೇಸ್ಬುಕ್ ಈಗ ಭಾರತೀಯರನ್ನೇ ಭಾರತದ ಮುಖ್ಯಸ್ಥರನ್ನಾಗಿ ನೇಮಕ ಮಾಡಿ, ಉತ್ತಮ ಕಾರ್ಯಗಳನ್ನು ಮಾಡುವ ಮೂಲಕ ಜನರ ನಂಬಿಕೆಯನ್ನು ಉತ್ತಮಗೊಳಿಸಿಕೊಳ್ಳುತ್ತಿದೆ.
ಫ್ಲಿಪ್ಕಾರ್ಟ್ನಲ್ಲೂ ಬದಲಾವಣೆ
ವಾಲ್ಮಾರ್ಟ್ ನಿಯಂತ್ರಣದಲ್ಲಿರುವ ಫ್ಲಿಪ್ಕಾರ್ಟ್ನಲ್ಲಿಯೂ ಸಹ ಬಹಳಷ್ಟು ಬದಲಾವಣೆಗಳಾಗುತ್ತಿದ್ದು, ಫ್ಲಿಪ್ಕಾರ್ಟ್ ಸಮೂಹದ ಸಿಇಒ ಬಿನ್ನಿ ಬನ್ಸಾಲ್ ಸ್ಥಾನಕ್ಕೆ ಹೊಸ ಮುಖ ಬರುವ ಸಾಧ್ಯತೆಯಿದೆ. ಕಂಪನಿ ಬೋರ್ಡ್ನಲ್ಲಾದ ಬದಲಾವಣೆಗಳಿಂದ ಮೇ ನಂತರ ಫ್ಲಿಪ್ಕಾರ್ಟ್ ಚೇರ್ಮನ್ ಸಚಿನ್ ಬನ್ಸಾಲ್ ಹುದ್ದೆ ತೊರೆದಿದ್ದು, ಈಗ ಬಿನ್ಜಿ ಬಿನ್ಸಾಲ್ ಸಿಇಒದಿಂದ ಫ್ಲಿಪ್ಕಾರ್ಟ್ ಸಮೂಹದ ಚೇರ್ಮನ್ ಆಗಲಿದ್ದು, ಬಿನ್ನಿ ಜಾಗಕ್ಕೆ ಪ್ರಸ್ತುತ ಫ್ಲಿಪ್ಕಾರ್ಟ್ನ ಸಿಇಒ ಕಲ್ಯಾಣ್ ಕೃಷ್ಣಮೂರ್ತಿ ನೇಮಕಗೊಳ್ಳಲಿದ್ದಾರೆ.
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999