ಶಾಕಿಂಗ್ ನ್ಯೂಸ್! ಭಾರತದ ಯಾವುದೇ ಇ-ವಾಲೆಟ್ ಕಂಪೆನಿಗಳು ಸುರಕ್ಷಿತವಲ್ಲ!!
ಇ-ವಾಲೆಟ್ ಕಂಪೆನಿಯ ಹಾರ್ಡ್ವೇರ್ ಎನ್ಸ್ಕ್ರಿಪ್ಷನ್ನಿಂದ ಬಳಕೆದಾರರ ಮಾಹಿತಿ ಮತ್ತು ಡೇಟಾವನ್ನು ಕದಿಯಬಹುದಾಗಿದೆ ಎಂದು ಕ್ವಾಲ್ಕಾಮ್ ಕಂಪೆನಿಯ ಹಿರಿಯ ನಿರ್ದೇಶಕ ಎಸ್ ಚೌಧರಿ ಅಭಿಪ್ರಾಯಪಟ್ಟಿದ್ದಾರೆ.
ಭಾರತೀಯರು ಉಪಯೋಗಿಸುತ್ತಿರುವ ಯಾವುದೇ ಇ-ವಾಲೆಟ್ ಕಂಪೆನಿಯೂ ಸಹ ಪೂರ್ಣ ಸುರಕ್ಷಿತವಾಗಿಲ್ಲ ಎಂದು ಪ್ರಖ್ಯಾತ ಮೊಬೈಲ್ ಚಿಪ್ಸೆಟ್ ತಯಾರಿಕಾ ಕಂಪೆನಿ ಕ್ವಾಲ್ಕಾಮ್ ಹೇಳಿದೆ!! ಈ ಮೂಲಕ ಕ್ವಾಲ್ಕಾಮ್ ಇ-ವಾಲೆಟ್ ಬಳಕೆದಾರರಿಗೆ ಶಾಕ್ ನೀಡಿದೆ!
ಈ ಬಗ್ಗೆ ಕ್ವಾಲ್ಕಾಮ್ ಕಂಪೆನಿಯ ಹಿರಿಯ ನಿರ್ದೇಶಕ ಎಸ್ ಚೌಧರಿ ಮಾತನಾಡಿ, ಪ್ರಪಂಚದಲ್ಲಿನ ಬಹುತೇಕ ಎಲ್ಲಾ ಬ್ಯಾಂಕ್ ಮತ್ತು ಇ-ವಾಲೆಟ್ ಆಪ್ಗಳು ಕೇವಲ ಆಂಡ್ರಾಯ್ಡ್ ಸಿಸ್ಟಮ್ ಬಳಸುತ್ತಿದ್ದು, ಹಾರ್ಡ್ವೇರ್ ಸೆಕ್ಯುರಿಟಿಯನ್ನು ಬಳಸುತ್ತಿಲ್ಲ . ಇದರಿಂದಾಗಿ ಎಲ್ಲಾ ಇ-ವಾಲೆಟ್ ಕಂಪೆನಿಯ ಹಾರ್ಡ್ವೇರ್ ಎನ್ಸ್ಕ್ರಿಪ್ಷನ್ನಿಂದ ಬಳಕೆದಾರರ ಮಾಹಿತಿ ಮತ್ತು ಡೇಟಾವನ್ನು ಕದಿಯಬಹುದಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕಕ್ಕೆ ಹೆಚ್ಚು ವರ್ಧ ಚಂಡಮಾರುತದ ಎಫೆಕ್ಟ್!!..ಇದು ಟೆಕ್ ವಿಷಯ!
ದೇಶದಲ್ಲಿ 500 ಮತ್ತು 1000 ರೂಪಾಯಿ ನೋಟು ರದ್ದು ನಂತರ ಕ್ಯಾಶ್ಲೆಸ್ ವ್ಯವಹಾರ ಶೇಕಡ ಸಾವಿರಪಟ್ಟು ಹೆಚ್ಚಾಗಿದ್ದು, ಜನರು ಆನ್ಲೈನ್ ವ್ಯವಹಾರಕ್ಕೆ ಮೊರೆಹೋಗಿದ್ದಾರೆ. ಆದರೆ, ಭಾರತದಲ್ಲಿನ ಎಲ್ಲಾ ಇ-ವಾಲೆಟ್ ಕಂಪೆನಿಯ ಹಾರ್ಡ್ವೇರ್ ಎನ್ಸ್ಕ್ರಿಪ್ಷನ್ ಸರಿಯಾಗಿಲ್ಲ ಎನ್ನುವ ಸುದ್ದಿ ಆನ್ಲೈನ್ ವ್ಯವಹಾರ ಬಳಕೆದಾರರಿಗೆ ಶಾಕ್ ನೀಡಿದೆ!.

ಇನ್ನು ಕೇಂದ್ರ ಸರ್ಕಾರ ಸಹ ಆನ್ಲೈನ್ ವ್ಯವಹಾರಕ್ಕೆ ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದು, ಕ್ಯಾಶ್ಲೆಸ್ ಸಮಾಜ ನಿರ್ಮಾಣ ಮಾಡಬೇಕು ಎನ್ನುವ ಕೇಂದ್ರ ಸರ್ಕಾರದ ಯೋಜನೆಗೆ ಎದುರಾಗಿ ಇ- ವಾಲೆಟ್ಗಳಲ್ಲಿನ ಸೆಕ್ಯುರಿಟಿ ವ್ಯವಸ್ಥೆ ನಿಂತಿದೆ ಎನ್ನಬಹುದು. ಕೇವಲ ಒಂದೆರಡು ಆನ್ಲೈನ್ ಮೋಸದ ಸುದ್ದಿಗಳು ಜನರಿಗೆ ಬಿದ್ದರೆ ಕೇಂದ್ರದ ಕ್ಯಾಶ್ಲೆಸ್ ಯೋಜನೆಗೆ ಭಂಗ ತಂದಂತೆಯೇ ಸರಿ!.

ಹಾಗಾಗಿ ಕೇಂದ್ರ ಸರ್ಕಾರ ಇ-ವಾಲೆಟ್ಗಳ ಸುರಕ್ಷತೆಯ ಮೇಲೆ ಎಚ್ಚರಿಕೆ ವಹಿಸಬೇಕಿದ್ದು, ಇತ್ತೀಚಿಗೆ ಸೈಬರ್ ಕ್ರಿಮಿನಲ್ಗಳ ಮೋಸಗಾರಿಕೆಯ ಭಯ ಹೊಂದಿರುವ ಭಾರತೀಯರಿಗೆ ಈ ಸುದ್ದಿ ಯಾವ ರೀತಿಯಲ್ಲಿ ಪ್ರಭಾವ ಬೀರಬಹುದು ಎಂಬುದನ್ನು ಕಾದುನೋಡಬೇಕಿದೆ.
ಹೊಸ ಟ್ಯಾಬ್ಲೆಟ್ಗಳ ಆನ್ಲೈನ್ ಡೀಲ್ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications








