ವಿಶ್ವ ವಿಜ್ಞಾನಕ್ಕೆ ನಿಗೂಢವಾಗಿರುವ ಭಾರತದ ಐದು ವಿಚಿತ್ರ ಸ್ಥಳಗಳು!!
ಭೂಮಿಯ ಮೇಲೆ ನೈಸರ್ಗಿಕವಾಗಿ ನಡೆಯುವ ಕೆಲವೊಂದು ವಿಚಿತ್ರ ಘಟನೆಗಳನ್ನು ನಮಗೆ ಯಥಾವತ್ತಾಗಿ ವಿಜ್ಞಾನದ ಮೂಲಕ ವಿವರಿಸಲಾಗುವುದಿಲ್ಲ ಎಂದರೆ ಅಲ್ಲೊಂದು ಪವಾಡ ನಡೆಯಬೇಕು ಅಥವಾ ಅದು ಮನುಷ್ಯನನ್ನು ಮೀರಿದ ವಿಜ್ಞಾನ ಆದಾಗಿರಬೇಕು.! ನಿಗೂಢತೆಯು ಅದ್ಭುತವನ್ನು ಸೃಷ್ಟಿಸುತ್ತದೆ ಮತ್ತು ಆ ಅದ್ಭುತವು ಮಾನವನ ಅರ್ಥಮಾಡಿಕೊಳ್ಳುವ ಬಯಕೆಯ ಮೂಲವಾಗಿದೆ ಎಂದು ಚಂದ್ರನ ಮೇಲೆ ಮೊದಲು ಕಾಲಿಟ್ಟ ಮಾನವ ನೀಲ್ ಆರ್ಮ್ಸ್ಟ್ರಾಂಗ್ ಹೇಳಿದ್ದು ವಿಜ್ಞಾನ ಪ್ರಪಂಚದ ಕೌತುಕ ವಿಷಯವನ್ನು ಪ್ರಸ್ತಾಪಿಸುತ್ತದೆ.
ಹೀಗೆಯೇ ಅರ್ಥಮಾಡಿಕೊಳ್ಳಲು ಸಾಧ್ಯವಾಗದೇ ಇರುವ ವಿಷಯಗಳನ್ನು ತಿಳಿಯುವ ಬಯಕೆಯನ್ನು ಈ ನಿಗೂಢತೆಯು ನಮ್ಮಲ್ಲಿ ಉಂಟುಮಾಡುತ್ತದೆ. ಅಜ್ವಾತ, ಕೌತುಕಮಯವಾಗಿರುವ ಅಂಶಗಳನ್ನು ನಾವು ನಿಗೂಢತೆಯೊಂದಿಗೆ ಜೋಡಿಸುತ್ತೇವೆ. ನೈಸರ್ಗಿಕವಾಗಿ ನಡೆಯುವ ಎಷ್ಟೆಷ್ಟೋ ವಿಚಿತ್ರಗಳನ್ನು ವೈಚಿತ್ರ್ಯಗಳನ್ನು ಈ ಭೂ ಸೃಷ್ಟಿಯು ಒಳಗೊಂಡಿದೆ. ವಿಶ್ವದ ಹಲವು ಪ್ರದೇಶಗಳು ಹಲವಾರು ರೀತಿಯ ನಿಗೂಢತೆಯನ್ನು ಹೊಂದಿರುವ ಮಾಹಿತಿಗಳನ್ನು ನೀವು ಕೇಳಿರುತ್ತೀರಾ ಅಲ್ಲವೇ.

ಇದೇ ರೀತಿಯ ನಿಗೂಢತೆಯನ್ನು ಹೊತ್ತ ಹಲವು ಪ್ರದೇಶಗಳು ಭಾರತದಲ್ಲಿ ಕೂಡ ಇವೆ. ಭಾರತದ ಇತಿಹಾಸವೇ ಒಂದು ನಿಗೂಢವಾದರೂ ಕೂಡ ಇಂದಿನ ಆಧುನಿಕ ಪ್ರಪಂಚದಲ್ಲಿಯೂ ನಿಗೂಢತೆಯನ್ನು ಉಳಿಸಿಕೊಂಡಿವೆ. ಹಾಗಾಗಿ, ಇಂದಿನ ಲೇಖನದಲ್ಲಿ ವಿಶ್ವ ವಿಜ್ಞಾನ ಪ್ರಪಂಚಕ್ಕೆ ಕೌತುಕವಾಗಿರುವ ಭಾರತದ 5 ಸ್ಥಳಗಳ ಬಗ್ಗೆ ಸ್ಥಳಗಳ ಬಗೆಗೆ ಮಾಹಿತಿ ತಿಳಿಸುವ ಪ್ರಯತ್ನ ಇಲ್ಲಿದೆ. ಅವುಗಳು ಯಾವುವು ಎಂಬುದನ್ನು ಮುಂದೆ ಓದಿ ತಿಳಿಯಿರಿ.
ಓದಿರಿ: ಚೀನಾದ ಈ ಜೈಲಿನಲ್ಲಿ ಮಾತ್ರ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ!!

ಅಯಸ್ಕಾಂತೀಯ ಪ್ರಭಾವ
ಕಾರ್ಗಿಲ್- ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಆಯಸ್ಕಾಂತೀಯ ಗುಡ್ಡ ಇದೆ. ಇದು ಸಮುದ್ರ ಮಟ್ಟದಿಂದ ಸುಮಾರು 11 ಸಾವಿರ ಅಡಿ ಎತ್ತರದಲ್ಲಿದೆ. ಇಲ್ಲಿಗೆ ಕಾರಿನಲ್ಲಿ ಬರುವ ಪ್ರವಾಸಿಗರಿಗೆ ಆಯಸ್ಕಾಂತಿಯ ಗುಡ್ಡ ಪ್ರಸಿದ್ಧ ನಿಲುಗಡೆ ಸ್ಥಳ. ಲೇಹ್ನಿಂದ ಕಾಗರ್ಗಿಲ್ ಗೆ ತೆರಳುವ 30 ಕಿ.ಮಿ. ಉದ್ದದ ರಸ್ತೆಯಲ್ಲಿನ ಒಂದು ನಿರ್ದಿಷ್ಟ ಜಾಗದಲ್ಲಿ ಇಂಥದ್ದೊಂದು ಅನುಭವ ಆಗುತ್ತದೆ. ರಸ್ತೆಯ ಪಕ್ಕದಲ್ಲಿ ಆಯಸ್ಕಾಂತೀಯ ಗುಡ್ಡ ಆರಂಭವಾಗುತ್ತಿದೆ ಎಂಬುದನ್ನು ತೋರಿಸುವ ಸೂಚನಾ ಫಲಕವನ್ನು ಅಳವಡಿಸಲಾಗಿದೆ. ಸೂಚನಾ ಫಲಕದ ಪಕ್ಕದಲ್ಲಿ ಒಂದು ಚೌಕಾಕಾರದ ಗುರುತನ್ನು ಹಾಕಲಾಗಿದೆ. ಅಲ್ಲಿ ನಿಮ್ಮ ವಾಹನವನ್ನು ನಿಲ್ಲಿಸಿ ಇಂಜಿನ್ ಆಫ್ ಮಾಡಬೇಕು. ತಕ್ಷಣವೇ ಕಾರು ತನ್ನಿಂದ ತಾನಾಗಿ ಗಂಟೆಗೆ ಸುಮಾರು 20 ಕಿ.ಮೀ. ವೇಗದಲ್ಲಿ ಏರು ಮುಖವಾಗಿ ಚಲಿಸಲು ಆರಂಭಿಸುತ್ತದೆ. ಮುಂದೆ ಕಾಣುವ ಬೆಟ್ಟದ ಪ್ರಭಾವದಿಂದಲೇ ಕಾರು ಮುಂದೆ ಚಲಿಸುತ್ತಿದೆ ಎಂಬ ಅನುಭವಕ್ಕೆ ಚಾಲಕರು ಒಳಗಾಗುತ್ತಾರೆ. ಒಂದು ವೇಳೆ ಕಾರನ್ನು ಹಿಮ್ಮುಖವಾಗಿ ನಿಲ್ಲಿಸಿರೂ ಅದೇ ದಿಕ್ಕಿಗೆ ಚಲಿಸಲು ಆರಂಭಿಸುತ್ತದೆ. ಆದರೆ, ಕ್ರಿಯೆಗೆ ಏನು ಕಾರಣ ಎಂಬುದು ಮಾತ್ರ ನಿಗೂಢ.

ಇಲ್ಲೇನು ಜಾದೂ ನಡೆಯುತ್ತಾ?
ಚಾಂಡಿಪುರ ಸಮುದ್ರ ಇರುವುದು ಒಡಿಶಾ ರಾಜಧಾನಿ ಭುವನೇಶ್ವರದಿಂದ 200 ಕಿ.ಮೀ. ದೂರದಲ್ಲಿ. ಬಾಲಾಸೋರ್ ಜಿಲ್ಲೆಂದ 10 ಕಿ.ಮೀ. ಪ್ರಯಾಣಿಸಿದರೆ ಈ ಜಾಗವನ್ನು ತಲುಪಬಹುದು. ನೀರು ಇದ್ದಕ್ಕಿಂದ್ದಂತೆ ಮಾಯವಾಗುವ ವಿದ್ಯಮಾನದಿಂದಾಗಿ ಚಂಡಿಪುರ ಸಮುದ್ರ ತೀರ ಜಗತ್ತಿನ ಗಮನ ಸೆಳೆದಿದೆ. ದಡಕ್ಕೆ ಬಂದು ಅಪ್ಪಳಿಸುತ್ತಿದ್ದ ಸಮುದ್ರದ ಅಲೆಗಳು ನೋಡ ನೋಡುತ್ತಿದ್ದಂತೆ 5-6 ಕಿ.ಮೀ. ಹಿಂದೆ ಸರಿಯುತ್ತವೆ. ಸಮುದ್ರದ ಉಬ್ಬರ ಮತ್ತು ಇಳಿತದ ವೇಳೆ ಪ್ರತಿನಿತ್ಯವೂ ಇಂಥದ್ದೊಂದು ವಿದ್ಯಮಾನ ನಡೆಯುತ್ತದೆ. ಇಳಿತದ ವೇಳೆ ಸಮುದ್ರ ಬಯಲಿನಂತಾಗುತ್ತದೆ. ಆಗ ಅಲ್ಲಿ ಅಕ್ಷರಶಃ ನಡೆದಾಡಬಹುದು. ಅಷ್ಟೇ ಅಲ್ಲ ಸಮುದ್ರದಲ್ಲಿ ಬೈಕನ್ನೂ ಓಡಿಸಬಹುದು. ಹೀಗೆ ಮಾಯವಾದ ಸಮುದ್ರದ ನೀರು ಉಬ್ಬರದ ಸಮಯದಲ್ಲಿ ಮರಳಿ ಬರುತ್ತದೆ. ಬರಿದಾಗಿದ್ದ ಸಮುದ್ರದ ಒಡಲು ಮತ್ತೆ ತುಂಬಿಕೊಳ್ಳುತ್ತದೆ. ಅಲೆಗಳು ವಾಪಸ್ ಬರುವುದನ್ನು ನೋಡುವುದೂ ಕೂಡ ಅಷ್ಟೇ ಕುತೂಹಲ. ಸ್ಥಳಿಯರಿಗೆ ಇದೊಂದು ನಿತ್ಯದ ವಿದ್ಯಮಾನದಂತೆ ಕಂಡರೂ ಪ್ರವಾಸಿಗರಿಗೆ ಅಪೂರ್ವ ಅನುಭವ ನೀಡುತ್ತದೆ. ಉಬ್ಬರ ಮತ್ತು ಇಳಿತದ ವೇಳೆ ಸಮುದ್ರದ ನೀರಿನ ಮಟ್ಟದಲ್ಲಿ ಸ್ವಲ್ಪ ಮಟ್ಟಿನ ವ್ಯತ್ಯಾಸವಾಗುವುದು ಸಾಮಾನ್ಯ. ಆದರೆ, ಕಿಲೋಮೀಟರ್ಗಟ್ಟಲೆ ಹಿಂದೆ ಸರಿಯುವುದನ್ನು ಬೇರೆಲ್ಲಿಯೂ ನೋಡಲು ಸಿಗುವುದಿಲ್ಲ. ಈ ರೀತಿ ಆಗುವುದಕ್ಕೆ ಏನು ಕಾರಣ ಎನ್ನುವುದಕ್ಕೆ ಇದುವರೆಗೂ ನಿಖರ ಉತ್ತರ ಸಿಕ್ಕಿಲ್ಲ.

ಇಳಿಜಾರಿನಲ್ಲಿ ಇದ್ದರೂ ಉರುಳದ ಬಂಡೆ!!
ಈ ಬಂಡೆ ಇರುವುದು ತಮಿಳುನಾಡಿನ ಕಾಂಚಿಪುರಂ ಜಿಲ್ಲೆಯ ಪ್ರಸಿದ್ಧ ಯಾತ್ರಾಸ್ಥಳ ಮಹಾಬಲಿಪುರಂನಲ್ಲಿ. ಇಲ್ಲಿ 250 ಟನ್ ತೂಕದ ಬೃಹತ್ ಬಂಡೆಯೊಂದು ಕದಲದೇ ಇಳಿಜಾರಿನಲ್ಲಿ ನಿಂತುಕೊಂಡಿದೆ. ಅದೂ 1200 ವರ್ಷಗಳಿಂದಲೂ ಅಲ್ಲಿಯೇ ಇದೆ ಎಂದು ಹೇಳಲಾಗಿದೆ. ಇಷ್ಟೊಂದು ಸುದೀರ್ಘ ವರ್ಷಗಳಿಂದ ಬಂಡೆ ಎಂತಹ ಮಳೆ, ಗಾಳಿಗೂ ಜಗ್ಗದೇ ಇರುವುದಕ್ಕೆ ವೈಜ್ಞಾನಿಕವಾಗಿಯೂ ಕಾರಣ ಸಿಕ್ಕಿಲ್ಲ. ಈ ಬಂಡೆಗೆ ತಮಿಳಿನ ಮೂಲ ಹೆಸರು "ವಾಣಿರೈ ಕಲ್". ಅಂದರೆ ಆಕಾಶ ದೇವತೆಯ ಬಂಡೆ ಎಂದು ಅರ್ಥವಿದೆ. 1908ರಲ್ಲಿ ಮದ್ರಾಸ್ ಗವರ್ನರ್ ಆರ್ಥರ್ ಲಾವ್ಲಿ, ಈ ಬಂಡೆ ಹೀಗೆಯ ಇದ್ದರೆ ಜನರಿಗೆ ಅಪಾಯ ಎಂಬುದನ್ನು ಅರಿತು ಅದನ್ನು ಉರುಳಿಸಲು ಮುಂದಾಗಿದ್ದರು. ಅದಕ್ಕಾಗಿ ಏಳು ಆನೆಗಳನ್ನು ಬಂಡೆಗೆ ಕಟ್ಟಿ ಎಳೆಸುವ ಯತ್ನ ಮಾಡಲಾಯಿತು. ಆದರೆ, ಬಂಡೆ ಒಂದಿಚೂ ಕದಲಲಿಲ್ಲ. ಕೊನೆಗೆ ಗವರ್ನರ್ ಬಂಡೆಯನ್ನು ಉರುಳಿಸುವ ಪ್ರಯತ್ನವನ್ನು ಕೈಬಿಡಬೇಕಾಯಿತು.

ಅವಳಿ ಮಕ್ಕಳ ಊರು!
ಕೇರಳದ ಗ್ರಾಮವೊಂದರಲ್ಲಿ ಬರೋಬ್ಬರಿ 400 ಜೋಡಿ ಅವಳಿ ಮಕ್ಕಳಿದ್ದಾರೆ. ಮಲಪ್ಪುರಂ ಜಿಲ್ಲೆಯ ಕೊಡಿನ್ಹಿ ಎಂಬ ಗ್ರಾಮದ ವೈಶಿಷ್ಟ್ಯತೆ ವಿಜ್ಞಾನಿಗಳಲ್ಲೂ ಅಚ್ಚರಿ ಮೂಡಿಸಿದೆ. ಸುಮಾರು 2 ಸಾವಿರ ಕುಟುಂಬಗಳಿರುವ ಈ ಗ್ರಾಮದಲ್ಲಿ ಸದ್ಯ 400 ಜೋಡಿ ಅವಳಿ ಮಕ್ಕಳಿದ್ದಾರೆ. ದೇಶದ ಸರಾಸರಿ ಪ್ರಕಾರ ಪ್ರತಿ ಸಾವಿರ ಮಕ್ಕಳಿಗೆ 9 ಕ್ಕಿಂತ ಕಡಿಮೆ ಅವಳಿ ಮಕ್ಕಳು ಜನಿಸುತ್ತವೆ. ಆದರೆ, ಕೊಡಿನ್ಹಿ ಗ್ರಾಮದಲ್ಲಿ ಮಾತ್ರ ಪ್ರತಿ ಸಾವಿರ ಮಕ್ಕಳಿಗೆ 45 ಅವಳಿ ಮಕ್ಕಳು ಹುಟ್ಟುತ್ತಾರೆ. ಈ ಗ್ರಾಮದಲ್ಲಿ ಅವಳಿ ಮಕ್ಕಳ ಜನನದ ಹಿಂದಿನ ವಿಸ್ಮಯ ಪತ್ತೆ ಹಚ್ಚಲು ವಿಜ್ಞಾನಿಗಳು ಕೂಡ ಮುಂದಾಗಿದ್ದರು. ಆದರೆ, ವಿಜ್ಞಾನಿಗಳಿಗೆ ಅದನ್ನು ಸಂಪೂರ್ಣವಾಗಿ ಭೇದಿಸಲು ಸಾಧ್ಯವಾಗಿಲ್ಲ. ಸಂಶೋಧಕರು ಈ ಸಂಬಂಧ ನಡೆಸಿದ ಸಂಶೋಧನೆ ಅವಳಿ ಮಕ್ಕಳ ಜನನಕ್ಕೆ ಅನುವಂಶೀಯತೆ ಕಾರಣ ಎಂದು ಹೇಳುತ್ತದೆ.

ಜಂತರ್ ಮಂತರ್!
ಇಂದಿನ ತಾಂತ್ರಿಕ ಯುಗದಲ್ಲಿ ಬೆರಳಿನ ತುದಿಯಲ್ಲೇ ನಮಗೆ ಬೇಕಾದ ವಿಷಯಗಳ ಬಗ್ಗೆ ಮಾಹಿತಿ ಪಡೆಯಲು ಸಾಧ್ಯವಿದೆ. ಶತಮಾನಗಳ ಹಿಂದೆ ಕಾಲ, ಗ್ರಹಣ ಮತ್ತು ಅನೇಕ ಖಗೋಳ ಶಾಸ್ತ್ರದ ಬಗ್ಗೆ ಬಯಲಿನಲ್ಲಿ ಸ್ಥಾಪಿಸಿರುವ ಕಟ್ಟಡ, ಗೋಪುರ ಮತ್ತು ಗೋಲಾಕಾರದ ರಚನೆಯ ಸಹಾಯದಿಂದ ನಿಖರವಾಗಿ ಅರಿಯುತ್ತಿದ್ದರು. ಜಂತರ್ ಮಂತರ್ ಎನ್ನುವುದು ಈ ವಿಸ್ಮಯಕಾರಿ ಗಡಿಯಾರ ಮಾಪನ ಹೊಂದಿರುವ ಧಾಮ. ಜಂತರ್ ಅಂದರೆ ಯಂತ್ರ ಎಂತಲೂ ಮಂತರ್ ಅಂದರೆ ಸೂತ್ರ ಎಂದೂ ಅರ್ಥವಿದೆ. ಹೀಗಾಗಿ ಜಂತರ್ ಮಂತರ್ ಅಂದರೆ ಕನ್ನಡದಲ್ಲಿ ಲೆಕ್ಕಾಚಾರ ಯಂತ್ರ ಎಂದು ಅರ್ಥ ಕಲ್ಪಿಸಬಹುದಾಗಿದೆ. ದೇಶದ ಐದು ಅತಿದೊಡ್ಡ ಖಗೋಳ ವೀಕ್ಷಣಾಲಯಗಳಲ್ಲಿ ಜಂತರ್ ಮಂತರ್ ಕೂಡಾ ಒಂದು. ಇಲ್ಲಿನ ಸಾಮ್ರಾಟ್ ಯಂತ್ರವು ಎಷ್ಟು ನಿಖರವಾಗಿದೆ ಅಂದರೆ ಜೈಪುರದ ಸಮಯಕ್ಕೆ ಕೇವಲ ಎರಡು ಕ್ಷಣಗಳ ವ್ಯತ್ಯಾಸವಿದೆ. ಸಾಮ್ರಾಟ್ ಯಂತ್ರದ ಸನ್ ಡಯಲ್ (ಸೂರ್ಯನ ಬೆಳಕಿನಿಂದ ಸಮಯ ಹೇಳುವ ಗಡಿಯಾರ)ನ ನೆರಳು ಪ್ರತಿ ಸೆಕೆಂಡಿಗೆ ಒಂದು ಮಿ.ಮೀ.ಗಳಷ್ಟು ದೂರ ಚಲಿಸುತ್ತದೆ ಎಂಬುದು ಎಂತವರಿಗೂ ವಿಸ್ಮಯಗೊಳಿಸುವ ವಿಷಯ.

ಆನ್ಲೈನ್ ಕಂಪೆನಿಗಳು ಮಾಡುವ ಅಮೇಜಿಂಗ್ ಮೋಸಗಳಿವು!..ಎಲ್ಲರೂ ತಿಳಿಯಲೇಬೇಕು!!
ಆನ್ಲೈನ್ ಮಾರುಕಟ್ಟೆಯಲ್ಲಿ ಎಲ್ಲವೂ ಕಡಿಮೆ ದರದಲ್ಲಿಯೇ ಸಿಗಲಿದೆ ಎಂಬ ಪೂರ್ವಗ್ರಹ ನಂಬಿಕೆಯೊಂದು ಇಂದಿನ ಡಿಜಿಟಲ್ ಯುಗದಲ್ಲಿ ಸೃಷ್ಟಿಯಾಗಿದೆ. ಹಾಗಾಗಿ, ಎಷ್ಟೋ ಬಾರಿ ಒಂದು ಖರೀದಿಯ ವಾಸ್ತವ ಬೆಲೆಯನ್ನು ಬೇರೆಡೆ ಪರೀಕ್ಷಿಸದೇ ಆನ್ಲೈನಿನಲ್ಲಿ ವಸ್ತುಗಳನ್ನು ಖರೀದಿ ಮಾಡುವವರ ಸಂಖ್ಯೆ ಹೆಚ್ಚಾಗಿದೆ ಎಂದರೆ ಅದು ನಮ್ಮ ಮೂರ್ಖತನ.
ಆನ್ಲೈನಿನಲ್ಲಿ ಕೆಲವೊಂದು ಆಫರ್ಗಳು ಲಾಭವಾಗಬಹುದಾದರೂ ಅದನ್ನು ಸಮರ್ಥವಾಗಿ ತಿಳಿದುಕೊಳ್ಳಬೇಕಿರುತ್ತದೆ. ಇಲ್ಲವಾದಲ್ಲಿ ನೀವು ಮೋಸಹೋಗಬಹುದು. ಇದಕ್ಕೆ ಉದಾಹರಣೆ ಎಂದರೆ, ಆನ್ಲೈನ್ ಕಂಪನಿಗಳಾದ ಇಬೇ, ಅಮೆಜಾನ್ಗಳು "ರಿಫರ್ಬಶಿಂಗ್ ಐಟಂ'ಗಳನ್ನು ಮಾರಲಾರಂಭಿಸಿವೆ. ಆದರೆ, ಈ ಮಾಹಿತಿ ನಮ್ಮ ಕಣ್ಣಿಗೆ ಕಾಣಿಸದಂತೆ ಇರುತ್ತದೆ.!
ಇಷ್ಟಕ್ಕೂ ರಿಫರ್ಬಶಿಂಗ್ ಎಂದರೆ, ಗ್ಯಾರಂಟಿ ಅವಧಿಯಲ್ಲಿ ದೋಷಪೂರಿತವಾದ ತಯಾರಿಕೆಯನ್ನು ಅಧಿಕೃತ ರಿಪೇರಿಗಾರರಿಂದ ಸರಿಪಡಿಸಿ ಮಾರಾಟಗಾರ ಮತ್ತೆ ವ್ಯಾಪಾರಕ್ಕೆ ಬಿಟ್ಟಿರುವಂತದು. ಹಾಗಾಗಿ, ಇಂದಿನ ಲೇಖನದಲ್ಲಿ ಆನ್ಲೈನ್ ಕಂಪೆನಿಗಳು ನಮಗೆ ಮಾಡುತ್ತಿರುವ ಅಮಮೇಜಿಂಗ್ ಮೋಸಗಳು ಯಾವುವು ಎಂಬುದನ್ನು ತಿಳಿದುಕೊಳ್ಳೊಣ!!

ಬೆಲೆ ಕಮ್ಮಿ ಇದ್ದರೂ ಖರೀದಿ ಕಷ್ಟ!!
ಮೊದಲೇ ಹೇಳಿದಂತೆ ಇ ಬೇ, ಅಮೆಜಾನ್ಗಳು "ರಿಫರ್ಬಶಿಂಗ್ ಐಟಂ'ಗಳನ್ನು ಮಾರಲಾರಂಭಿಸಿವೆ. ರಿಫರ್ಬಶಿಂಗ್ ಐಟಂಗಳ ಖರೀದಿ ದರದಲ್ಲಿ ಸದರಿ ಐಟಂನ ಬೆಲೆ ಇವತ್ತಿನ ಎಂಆರ್ಪಿಗಿಂತ ಬೆಲೆ ತೀರಾ ಕಡಿಮೆ ಇರುತ್ತದೆ. ಇದಕ್ಕೆ ಕೇವಲ ಮಾರಾಟಗಾರರ ಗ್ಯಾರಂಟಿ ಮಾತ್ರ ಲಭ್ಯವಾಗುತ್ತದೆ. ಹಾಗಾಗಿ, ಬೆಲೆ ಕಮ್ಮಿ ಇದ್ದರೆ ಎಚ್ಚರ ವಹಿಸುವುದು ಉತ್ತಮ.

ಆನ್ಲೈನ್ನಲ್ಲೂ ನಯವಂಚನೆ!
ಆನ್ಲೈನ್ ದೈತ್ಯ ಅಮೆಜಾನ್ ತನ್ನ ಅಮೆಜಾನ್ ಪೇ ಗ್ರಾಹಕರಿಗೆ ಅಕೌಂಟ್ಗೆ 500 ರೂ. ತುಂಬಿದರೆ ನಿಮಗೆ ಅದಕ್ಕೆ 100 ರೂ. ಕ್ಯಾಷ್ಬ್ಯಾಕ್ ನೀಡುವುದಾಗಿ ಹೇಳಿಕೊಂಡಿತು. ಆದರೆ, . 500 ರೂ. ಭರ್ತಿ ಮಾಡಿದವರಿಗೆ ಹೆಚ್ಚುವರಿ 100 ರೂ. ಸಿಗಲಿಲ್ಲ. ಅಲ್ಲಿಟ್ಟ ಹಣಕ್ಕೆ ಏನಾದರೊಂದು ಖರೀದಿ ಮಾಡಲೇಬೇಕು ಎಂಬ ಷರತ್ತನ್ನು ಕಣ್ಣಿಗೆ ಕಾಣದಂತೆ ಅಮೆಜಾನ್ ಹೇಳಿತ್ತು.

up to ಸೂಪರ್ ಕ್ಯಾಷ್!
ಗ್ರಾಹಕರು ಯಾವ ಅನುಮಾನವಿಲ್ಲದೇ ಈ up to ಕ್ಯಾಷ್ ಬ್ಯಾಕ್ ಆಫರ್ ಅನ್ನು ನಂಬದೇ ಇದ್ದರೆ ಒಳಿತು. ಇರುವ ಹತ್ತು ವಸ್ತುಗಳಲ್ಲಿ ಡಮ್ಮಿಯಂತಹ ಒಂದು ವಸ್ತುವಿಗೆ ಹೆಚ್ಚು ಕ್ಯಾಶ್ಬ್ಯಾಕ್ ನೀಡಿ ಮಾರಾಟ ಮಾಡುವ ತಂತ್ರ ಇದು. ಇತ್ತೀಚೆಗೆ ಕ್ಯಾಶ್ಬ್ಯಾಕ್ ಎಂಬ ವಾಲೆಟ್ಗಳ ಆಕರ್ಷಕ ಸ್ಲೋಗನ್ನ ಕೊನೆಯಲ್ಲಿ ಅದನ್ನು ಸೂಪರ್ ಕ್ಯಾಷ್ ಸೂತ್ರ ಜಾರಿಗೆ ಬಂದಿದೆ.

ಮೊಬಿಕ್ವಿಕ್ ಸೂಪರ್ ಕ್ಯಾಶ್?
ಮೊಬಿಕ್ವಿಕ್ ಪಾವತಿ ನಿಮಗೆ ಗೊತ್ತಿರಬಹುದು. ಈ ಪಾವತಿ ಆಪ್ 100 ರೂ. ಸೂಪರ್ ಕ್ಯಾಶ್ ಎಂಬ ಆಫರ್ ಅನ್ನು ನೀಡಿದೆ. 100 ರೂಪಾಯಿಗಳ ಸೂಪರ್ ಕ್ಯಾಶ್ಬ್ಯಾಕ್ ನಲ್ಲಿ ಗ್ರಾಹಕ ತನ್ನ ಪ್ರತಿ ಖರೀದಿಯ ಶೇ. 10ರಷ್ಟನ್ನು ಮಾತ್ರ ಬಳಸಿಕೊಳ್ಳಬಹುದು. ಹಾಗಾಗಿ, 100 ರೂ. ಸೂಪರ್ ಕ್ಯಾಶ್ ಬಳಸಿಕೊಳ್ಳಲು ಸಾವಿರ ರೂ. ವ್ಯಾಪಾರ ಮಾಡಬೇಕು.

ಕಮರ್ಷಿಯಲ್ ಜಾಹೀರಾತು!
ಫೇಸ್ಬುಕ್ ಬಳಕೆದಾರರಿಗೆ ಫೇಸ್ಬುಕ್ ಯಾವುದೋ ಆನ್ಲೈನ್ ಕಂಪನಿಯ ಕಮರ್ಷಿಯಲ್ ಜಾಹೀರಾತು ನೀಡುತ್ತದೆ. ಆ ಕಂಪೆನಿಯನ್ನು ನಿಮ್ಮ ಸ್ನೇಹಿತರು ಲೈಕ್ ಮಾಡಿರುವುದಾಗಿ ಪೋಸ್ಟ್ನಲ್ಲಿ ತೋರಿಸುತ್ತದೆ. ಸ್ನೇಹಿತರು ಲೈಕ್ ಮಾಡಿರುವ ಆ ಆನ್ಲೈನ್ ಕಂಪೆನಿಗಳು ಮೋಸ ಮಾಡುವ ಕಂಪೆನಿಗಳು ಆಗಿರಬಹುದು ಎಂದು ತಿಳೀಯುವುದಿಲ್ಲ. ಇದರಿಂದ ಏನೂ ತಿಳಿಯದವರೂ ಗುಂಡಿಗೆ ಬೀಳುತ್ತಾರೆ.
ಓದಿರಿ: 1999ರ ಮೊದಲು ಹುಟ್ಟಿದವರು ಮಾತ್ರ ಈ ಮೀಮ್ಸ್ ನೋಡಿ!..ಬೇರೆಯವರಿಗೆ ಇವು ಅರ್ಥವಾಗಲ್ಲ!!


Click it and Unblock the Notifications








