ಜಾಗತಿಕ ತಾಪಮಾನಕ್ಕೆ ಅಮೆರಿಕ 'ಹಾರ್ಪ್' ವೆಪನ್ ಕಾರಣ
ಅಮೆರಿಕ ವೆಪನ್ ತಯಾರಿ ಮಾಡುತ್ತಿರುವ ವ್ಯವಸ್ಥೆಯು ವಾತಾವರಣದ ಮೇಲೆ ನೇರವಾಗಿ ಪರಿಣಾಮ ಬೀರುತ್ತಿದೆ, ವಿದ್ಯುತ್ಕಾಂತೀಯ ಕಿರಣದ ಮೇಲೆ ಹೆಚ್ಚು ಗಮನಹರಿಸುತ್ತಿರುವುದು ಜಾಗತಿಕ ತಾಪಮಾನಕ್ಕೆ ಕಾರಣವಾಗಿದೆ ಎಂದು ಸರ್ಕಾರ ಹೇಳಿದೆ.
ಅಮೆರಿಕ ವೆಪನ್ ತಯಾರಿ ಮಾಡುತ್ತಿರುವ ಪದ್ಧತಿಯಿಂದ ಭಾರತದ ಗೋಧಿ ಮತ್ತು ಮೆಕ್ಕೆಜೋಳ ಬೆಳೆಗಳ ಇಳುವರಿ ಕಡಿಮೆಯಾಗಲು ಕಾರಣವಾಗಿದೆ ಎಂಬುದನ್ನು ಸಹ ಹೇಳಲಾಗಿದ್ದು ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಲೇಖನದ ಸ್ಲೈಡರ್ ಕ್ಲಿಕ್ಕಿಸಿ ಓದಿರಿ.
ಭೂಮಿಗೆ ಅಪ್ಪಳಿಸಲಿದೆ ನಿಯಂತ್ರಣ ತಪ್ಪಿದ ಚೀನಾ 'ಸ್ಪೇಸ್ ಸ್ಟೇಷನ್'

ಅಮೆರಿಕ ವೆಪನ್ ತಯಾರಿ
ಅಮೆರಿಕ ವೆಪನ್ ತಯಾರಿ ಮಾಡುತ್ತಿರುವ ವ್ಯವಸ್ಥೆಯು ವಾತಾವರಣದ ಮೇಲೆ ನೇರವಾಗಿ ಪರಿಣಾಮ ಬೀರುತ್ತಿದೆ, ವಿದ್ಯುತ್ಕಾಂತೀಯ ಕಿರಣದ ಮೇಲೆ ಹೆಚ್ಚು ಗಮನಹರಿಸುತ್ತಿರುವುದು ಜಾಗತಿಕ ತಾಪಮಾನಕ್ಕೆ ಕಾರಣವಾಗಿದೆ ಎಂದು ಸರ್ಕಾರ ಹೇಳಿದೆ.

ವೆಪನ್ ತಯಾರಿ ಪರಿಣಾಮ
ಅಮೆರಿಕ ವೆಪನ್ ತಯಾರಿ ಮಾಡುತ್ತಿರುವ ಮಾದರಿಯಿಂದ ಭಾರತದ ಗೋಧಿ ಮತ್ತು ಮೆಕ್ಕೆಜೋಳ ಬೆಳೆಗಳ ಇಳುವರಿ ಕಡಿಮೆಯಾಗಳು ಕಾರಣವಾಗಿದೆ ಎಂಬುದನ್ನು ಹೇಳಲಾಗಿದೆ.

ಹಾರ್ಪ್(HAARP)
ಅಮೆರಿಕ " ಹೈ ಫ್ರಿಕ್ವೆನ್ಸಿ ಆಕ್ಟಿವ್ ಅರೋರಲ್ ರಿಸರ್ಚ್ ಪ್ರೋಗ್ರಾಮ್(High Frequency Active Auroral Research Programme)" ವೆಪನ್ ತಯಾರಿಸಿದೆ. ಹಾರ್ಪ್ ವಿದ್ಯುತ್ಕಾಂತೀಯ ಕಿರಣ ಜೊತೆಗೆ ಹೆಚ್ಚಿನ ಗಮನಸೆಳೆದು ವಾತಾವರಣದ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ ಎಂದು ಪರಿಸರ ಸಚಿವ 'ಅನಿಲ್ ಮಾಧವ್ ದೇವ್' ರಾಜ್ಯ ಸಭಗೆ ಬರಹದ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

ಏನಿದು ಹಾರ್ಪ್ ವೆಪನ್?
ಹಾರ್ಪ್ ಅತ್ಯಾಧುನಿಕ ಮಾದರಿಯ ಪ್ರಬಲವಾದ ಅಯಾನುಗೋಳ ಶಾಖೋತ್ಪನ್ನ ವಾಗಿದ್ದು, ಪ್ರಪಂಚ ಹೆಚ್ಚು ಬಿಸಿಯಾಗುವಂತೆ ಮಾಡುತ್ತದೆ. ಅಲ್ಲದೇ ಪರಿಣಾಮಕಾರಿಯಾಗಿ ಜಾಗತಿಕ ತಾಪಮಾನ ಉಂಟುಮಾಡುತ್ತದೆ ಎಂದು 'ಅನಿಲ್ ಮಾಧವ್ ದೇವ್' ಹೇಳಿದ್ದಾರೆ.

ದೇವ್'ರವರ ಉತ್ತರ
ವಾತಾವರಣಕ್ಕೆ ಸಂಬಂಧಿಸಿದ ಪ್ರಶ್ನೆಯೊಂದಕ್ಕೆ ದೇವ್ ರವರು "ಸರ್ಕಾರ ಹಾರ್ಪ್ ಬಗ್ಗೆ ಎಚ್ಚರ ಹೊಂದಿರಬೇಕು. ಹಾರ್ಪ್, ಭಾರತವು ಸೇರಿದಂತೆ ವಿಶ್ವದ ಮೇಲೆ ವಿನಾಶಕಾರಿ ಪರಿಣಾಮ ಬೀರಲಿದೆ. ಕೃಷಿ ಮತ್ತು ಪರಿಸರ ವ್ಯವಸ್ಥೆಗಳು ಅಸ್ಥಿರತೆ ಹೊಂದುವಲ್ಲಿ ಸಂಶಯವಿಲ್ಲ ಎಂದು ದೇವ್'ರವರು ಉತ್ತರಿಸಿದ್ದಾರೆ.

ಅಧ್ಯಯನ
'ಕೃಷಿ ಸಂಶೋಧನೆಯ ಭಾರತೀಯ ಮಂಡಳಿ' ಹವಾಮಾನ ಬದಲಾವಣೆಯ ಪರಿಣಾಮ ಗೋಧಿ, ಮೆಕ್ಕೆಜೋಳ, ಸಾಸಿವೆ, ಆಲೂಗಡ್ಡೆ ಮತ್ತು ಹಳ್ಳುಜೋಳ ಸೇರಿದಂತೆ ಪ್ರಮುಖ ಬೆಳೆಗಳ ಇಳುವರಿ ಕಡಿತ ವಿಷಯದ ಪರಿಣಾಮದ ಬಗ್ಗೆ ಅಧ್ಯಯನ ಕೈಗೊಳ್ಳಲಾಗಿ ಈ ಪ್ರತಿಕೂಲ ಉತ್ತರ ಸಿಕ್ಕಿದೆ ಎಂದು ದೇವ್'ರವರು ಹೇಳಿದ್ದಾರೆ.

ಹವಾಮಾನ ಬದಲಾವಣೆ ರಾಷ್ಟ್ರೀಯ ಕ್ರಿಯಾ ಯೋಜನೆ
ಹವಾಮಾನ ಬದಲಾವಣೆ ಪ್ರತಿಕೂಲ ಪರಿಣಾಮಕ್ಕಾಗಿ ಸರ್ಕಾರ 2008 ರ ಜೂನ್ನಲ್ಲಿ "ಹವಾಮಾನ ಬದಲಾವಣೆ ರಾಷ್ಟ್ರೀಯ ಕ್ರಿಯಾ ಯೋಜನೆ( NAPCC)" ಜಾರಿಗೆ ತಂದಿರುವುದನ್ನು ಸಚಿವರು ಗಮನಕ್ಕೆ ತಂದಿದ್ದಾರೆ.

ಹವಾಮಾನ ಬದಲಾವಣೆ ರಾಷ್ಟ್ರೀಯ ಕ್ರಿಯಾ ಯೋಜನೆ ಒಳಗೊಂಡಿರುವ ಕಾರ್ಯಗಳು
ಸೌರ ಶಕ್ತಿ, ವರ್ಧಿತ ಇಂಧನ ದಕ್ಷತೆ, ಆವಾಸಸ್ಥಾನ ಸುರಕ್ಷತೆ, ನೀರು, ಹಿಮಾಲಯ ಪರಿಸರ ಸುಸ್ಥಿರ, ಅರಣ್ಯ, ಕೃಷಿ ಮತ್ತು ಹವಾಮಾನ ಬದಲಾವಣೆಗಳ 8 ಕಾರ್ಯಗಳನ್ನು 'ಹವಾಮಾನ ಬದಲಾವಣೆ ರಾಷ್ಟ್ರೀಯ ಕ್ರಿಯಾ ಯೋಜನೆ' ಹೊಂದಿದೆ.

ಜಾಗತಿಕ ತಾಪಮಾನ
ಜಾಗತಿಕ ತಾಪಮಾನ ತಗ್ಗಿಸಲು 'ಹವಾಮಾನ ಬದಲಾವಣೆ ರಾಷ್ಟ್ರೀಯ ಕ್ರಿಯಾ ಯೋಜನೆ'ಯು ಹಿಂದಿನ ಸ್ಲೈಡರ್ನಲ್ಲಿ ತಿಳಿಸಿದ ಅಂಶಗಳ ಜೊತೆಗೆ 'ಹಸಿರು ಮನೆ ಪರಿಣಾಮ ತಗ್ಗಿಸುವಿಕೆ, ಪರಿಸರದ ಮೇಲೆ ಹವಾಮಾನ ಬದಲಾವಣೆ, ಅರಣ್ಯ, ಆವಾಸಸ್ಥಾನ, ಜಲಸಂಪನ್ಮೂಲ ಮತ್ತು ಕೃಷಿ ಪ್ರತಿಕೂಲ ಪರಿಣಾಮಗಳ ರೂಪಾಂತರ ಕಾರ್ಯಗಳನ್ನು ಹೆಚ್ಚುವರಿಯಾಗಿ ಹೊಂದಿರುವುದಾಗಿ ಹೇಳಿದೆ.

ಹವಾಮಾನ ಬದಲಾವಣೆಯ ರಾಜ್ಯ ಕ್ರಿಯಾ ಯೋಜನೆ
ದೇವ್'ರವರು ಅಮೆರಿಕದ ಹಾರ್ಪ್ ವೆಪನ್ ತಯಾರಿ ವ್ಯವಸ್ಥೆಯು ಜಾಗತಿಕ ತಾಪಮಾನಕ್ಕೆ ಕಾರಣ ಎಂಬುದನ್ನು ತಿಳಿಸುವ ಜೊತೆಗೆ 32 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಈಗಾಗಲೇ 'ಹವಾಮಾನ ಬದಲಾವಣೆಯ ರಾಜ್ಯ ಕ್ರಿಯಾ ಯೋಜನೆ' ರೂಪಿಸಲು ಸಿದ್ಧವಾಗಿವೆ ಎಂದು ಪರಿಸರ ಮತ್ತು ಹವಾಮಾನ ಬದಲಾವಣೆ ಇಲಾಖೆಯ ಸಚಿವರಾದ 'ಅನಿಲ್ ಮಾಧವ್ ದೇವ್' ಹೇಳಿದ್ದಾರೆ.


Click it and Unblock the Notifications








