Just In
- 2 hrs ago Smartphones: ಕ್ಷಣ ಮಾತ್ರದಲ್ಲಿ ಚಾರ್ಜ್ ಆಗಲಿವೆ ಈ ಸ್ಮಾರ್ಟ್ಫೋನ್ಗಳು! ಇವುಗಳ ಬೆಲೆ ಎಷ್ಟು?
- 3 hrs ago ಕಡಿಮೆ ಬೆಲೆಗೆ ಲಾಂಚ್ ಆಯ್ತು ಐಟೆಲ್ ಐಕಾನ್ 3 ಸ್ಮಾರ್ಟ್ವಾಚ್!..ಕರ್ವ್ ಡಿಸ್ಪ್ಲೇ ಇದೆ!
- 4 hrs ago WhatsApp: ವಾಟ್ಸಾಪ್ನಲ್ಲಿ ಶೀಘ್ರದಲ್ಲೇ ಬಳಕೆದಾರರಿಗೆ ಬರಲಿದೆ ಈ ಫೀಚರ್ಸ್: ಉಪಯೋಗ ಏನು?
- 7 hrs ago IPL 2024: ಮೊಬೈಲ್ನಲ್ಲೇ RCB ಮತ್ತು CSK ಮ್ಯಾಚ್ ಲೈವ್ ನೋಡಲು ಹೀಗೆ ಮಾಡಿ!
Don't Miss
- Movies ಕಳ್ಳತನದ ಆರೋಪದಿಂದ ಶಾರ್ವರಿಯನ್ನು ತಪ್ಪಿಸಿದ ತುಳಸಿ; ದೀಪಿಕಾ ಕುತಂತ್ರಕ್ಕೆ ತಿರುಗೇಟು ಕೊಡ್ತಾರಾ?
- News ಮೋದಿಯವರನ್ನು ಮತ್ತೆ ಪ್ರಧಾನಿ ಮಾಡಲು ಜೋಶಿಯವರನ್ನು ಗೆಲ್ಲಿಸಿ: ಮಾಜಿ ಸಿಎಂ
- Sports IPL 2024: RCB vs CSK; ಟಾಸ್ ಗೆದ್ ಆರ್ಸಿಬಿ, ಬ್ಯಾಟಿಂಗ್ ಆಯ್ಕೆ: ಇಲ್ಲದೆ ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್
- Automobiles Ertiga: ಫ್ಯಾಮಿಲಿ ಕಾರು ಮಾರುತಿ ಸುಜುಕಿ ಎರ್ಟಿಗಾದ ಆನ್ ರೋಡ್ ಬೆಲೆ ಎಷ್ಟು, EMI ಏನು?
- Lifestyle ಮಾರುಕಟ್ಟೆಗೆ ಬರುತ್ತಿದೆ ವಿಷಯುಕ್ತ ದ್ರಾಕ್ಷಿ! ವೈರಲ್ ವೀಡಿಯೋ: ದ್ರಾಕ್ಷಿಯಲ್ಲಿನ ಕೆಮಿಕಲ್ ತೆಗೆಯುವುದು ಹೇಗೆ?
- Finance ಕರ್ನಾಟಕ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಮಳೆಯ ಮುನ್ಸೂಚನೆ ನೀಡಿದ ಐಎಂಡಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಫೇಸ್ಬುಕ್ ಬಳಸಿ ಚೆನ್ನೈಗೆ ಆಸರೆಯಾದ ಬೆಂಗಳೂರ ಹುಡುಗ
ಚೆನ್ನೈಯಲ್ಲಿ ನಡೆದ ಜಲಪ್ರವಾಹ ದುರಂತ ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಜಲಾವೃತಗೊಂಡಿರುವ ಅವರುಗಳ ಜೀವನ ಇನ್ನೂ ಸಹಜ ಸ್ಥಿತಿಗೆ ಮರಳಿಲ್ಲ. ಬೇರೆ ಬೇರೆ ದೇಶಗಳಿಂದ ಸಹಾಯ ಇವರನ್ನು ಹುಡುಕೊಂಡು ಬರುತ್ತಿದೆ ಅಂತೆಯೇ ಸಾಮಾಜಿಕ ತಾಣ ಕೂಡ ಚೆನ್ನೈ ಜನರ ಪಾಲಿಗೆ ಅಭಯಹಸ್ತವನ್ನು ಚಾಚಿದೆ.
ಓದಿರಿ:ಎಚ್ಚರ! ನಿಮ್ಮ ಫೇಸ್ಬುಕ್ ಮೇಲು ಹದ್ದಿನ ಕಣ್ಣು
ಸಿಲಿಕಾನ್ ಸಿಟಿ ಬೆಂಗಳೂರು ಕೂಡ ತನ್ನ ನೆರೆಯ ಚೆನ್ನೈಗೆ ಮುಕ್ತ ಹಸ್ತದಿಂದ ಸಹಾಯವನ್ನು ಮಾಡುತ್ತಿದೆ. ಐಟಿ ಬಿಟಿ ಕಂಪೆನಿಗಳು, ಸಣ್ಣ ಸಣ್ಣ ಸಂಸ್ಥೆಗಳು, ಶಾಲಾ ಕಾಲೇಜು ಸಮೂಹ ಸಂಸ್ಥೆಗಳು ಹೀಗೆ ತಮ್ಮಿಂದ ಸಾಧ್ಯವಾದಷ್ಟು ಸಹಾಯವನ್ನು ಚೆನ್ನೈ ನಿರಾಶ್ರಿತರಿಗಾಗಿ ಮಾಡುತ್ತಿದ್ದಾರೆ. ಆದರೆ ಇಂದಿನ ಲೇಖನದಲ್ಲಿ ಬೆಂಗಳೂರಿನ ನಿವಾಸಿಯೊಬ್ಬರು ಚೆನ್ನೈ ನೆರೆಗೆ ವಿಭಿನ್ನ ರೀತಿಯಲ್ಲಿ ತಮ್ಮ ಸಹಾಯ ಹಸ್ತವನ್ನು ಚಾಚಿದ್ದು ಅದು ಹೇಗೆ ಎಂಬುದನ್ನು ತಿಳಿಸಿಕೊಡಲಿದ್ದೇವೆ.
ಬೆಂಗಳೂರಿನ ನಿವಾಸಿಯಾಗಿರುವ ರಾಮ್ ಕಶ್ಯಪ್ ಧೈರ್ಯದಿಂದ ಮುನ್ನುಗ್ಗಿ ಚೆನ್ನೈಗೆ ನೆರವನ್ನು ನೀಡಿದ್ದಾರೆ. ಬೆಂಗಳೂರು ಮತ್ತು ಚೆನ್ನೈ ನಡುವೆ ನೆರವಿನ ಕೊಂಡಿಯಂತೆ ಪಾತ್ರವಹಿಸುವ ಹೊಣೆಗಾರಿಕೆಯ ಕೆಲಸವನ್ನು ಇವರು ಹೊತ್ತಿದ್ದಾರೆ. ತಮ್ಮ ಪ್ರಥಮ ಪ್ರವಾಸವನ್ನು ಡಿಸೆಂಬರ್ 3 ರಿಂದ ಆರಂಭಿಸಿದ ಇವರು ಆಹಾರ ಸಾಮಾಗ್ರಿಗಳು, ಪೇಪರ್ ಕಪ್ಗಳು, ಪಾತ್ರೆಗಳು, ರೈನ್ ಕೋಟ್, ಕೊಡೆ ಮೊದಲಾದವನ್ನು ಸಂಗ್ರಹಿಸಿಕೊಂಡು ಚೆನ್ನೈಗೆ ಪ್ರಯಾಣ ಬೆಳೆಸಿದ್ದಾರೆ. ರಾಮ್ ಈ ವಸ್ತುಗಳ ಸಂಗ್ರಹಕ್ಕಾಗಿ ತಮ್ಮ ಫೇಸ್ಬುಕ್ ಅನ್ನು ಬಳಸಿಕೊಂಡಿದ್ದು ಅದರಲ್ಲಿ ಪೋಸ್ಟ್ಗಳನ್ನು ದಾಖಲಿಸುವ ಮೂಲಕ ಜನರನ್ನು ಸಹಾಯಕ್ಕಾಗಿ ಮನವಿ ಮಾಡಿಕೊಂಡಿದ್ದಾರೆ. ತಮ್ಮ ಸ್ನೇಹಿತರ ಜೊತೆಗೂಡಿ 14 ಸ್ಥಳಗಳನ್ನು ಬೆಂಗಳೂರಿನಲ್ಲಿ ನಿಗದಿಪಡಿಸಿ ದಾನಿಗಳಿಗೆ ತಮ್ಮಿಂದಾದ ಸಹಾಯವನ್ನು ಈ ಸ್ಥಳಗಳಿಗೆ ನೀಡುವುದಕ್ಕೆ ನೆರವಾಗಿ ಚೆನ್ನೈ ಸಹಾಯದ ಅಭಿಯಾನವನ್ನು ಆರಂಭಿಸಿದ್ದಾರೆ. ತಮ್ಮ ಸಂಗ್ರಹಣೆ ತಾವು ಯೋಜಿಸಿರುವ ಮಟ್ಟವನ್ನು ತಲುಪಿತ್ತಿದೆ ಎಂಬುದನ್ನು ಅರಿತ ಕೂಡಲೇ ಇವರು ಚೆನ್ನೈಗೆ ಹೋಗುವ ಪ್ರಯಾಣವನ್ನು ಆರಂಭಿಸಿದ್ದು ಫೇಸ್ಬುಕ್ನಲ್ಲಿ ಇದನ್ನು ಕುರಿತು ವಿವರವಾಗಿ ದಾಖಲಿಸುತ್ತಿದ್ದರು. ಇವರ ಫೇಸ್ಬುಕ್ ಪೋಸ್ಟ್ 1,200 ಗಿಂತಲೂ ಹೆಚ್ಚಿನ ಬೆಂಗಳೂರು ವಾಸಿಗಳನ್ನು ತಲುಪಿದೆ ಅಂತೆಯೇ 250 ಕ್ಕಿಂತಲೂ ಹೆಚ್ಚಿನ ದಾನಿಗಳು ಮತ್ತು ಸ್ವಯಂಸೇವಕರು ಇವರ ನೆರವಿಗಾಗಿ ಧಾವಿಸಿ ಇವರೊಂದಿಗೆ ಚೆನ್ನೈ ಸಂತ್ರಸ್ಥರಿಗೆ ನೆರವಾಗುವ ಕಾಯಕದಲ್ಲಿ ಕೈ ಜೋಡಿಸಿದ್ದಾರೆ. 1500 ಕರೆಗಳು, 2500 ಫೇಸ್ಬುಕ್ ಶೇರ್ಗಳು ಮತ್ತು ನೂರಕ್ಕಿಂತಲೂ ಹೆಚ್ಚಿನ ದಾನಿಗಳನ್ನು ಫೇಸ್ಬುಕ್ ದಯಪಾಲಿಸಿರುವುದಾಗಿ ರಾಮ್ ಬರೆದುಕೊಂಡಿದ್ದಾರೆ. ಚೆನ್ನೈಗೆ ಈ ಎಲ್ಲಾ ವಸ್ತುಗಳನ್ನು ಇವರು ಯಶಸ್ವಿಯಾಗಿ ತಲುಪಿಸಿದ್ದಾರೆ. ಅದನ್ನು ತಮ್ಮ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದು ಬೆಂಗಳೂರಿನ ಮಾನವೀಯ ಹೃದಯಕ್ಕೆ ನಾನು ತಲೆಬಾಗುತ್ತಿದ್ದೇನೆ ಎಂಬುದಾಗಿ ವಾಲ್ನಲ್ಲಿ ಬರೆದುಕೊಂಡಿದ್ದಾರೆ. ತಮ್ಮ ಬ್ಯಾಂಕ್ ಖಾತೆ ವಿವರಗಳ ಮಾಹಿತಿಯನ್ನು ಫೇಸ್ಬುಕ್ನಲ್ಲಿ ರಾಮ್ ಪೋಸ್ಟ್ ಮಾಡಿದ್ದು, ನೆರವನ್ನು ನೀಡುವವರು ಈ ಖಾತೆಯನ್ನು ಬಳಸಿಕೊಂಡು ಧನ ಸಹಾಯನ್ನು ಮಾಡಬಹುದಾಗಿದೆ.ಬೆಂಗಳೂರಿನ ನಿವಾಸಿ
ತಮ್ಮ ಪ್ರಥಮ ಪ್ರವಾಸ
14 ಸ್ಥಳ
ಸಂಗ್ರಹಣೆ
ಫೇಸ್ಬುಕ್ ಪೋಸ್ಟ್
ಫೇಸ್ಬುಕ್ ಶೇರ್
ಯಶಸ್ವಿಯಾಗಿ ತಲುಪಿಸಿದ್ದಾರೆ
ಬ್ಯಾಂಕ್ ಖಾತೆ ವಿವರ
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999