ಜಿಯೋಗಿಂತಲೂ ಏರ್ಟೆಲ್ ಮೇಲೆ ಪ್ರೀತಿ ಹೆಚ್ಚಾಗಲು ಇದೊಂದೇ ಕಾರಣ ಸಾಕು!!
ಏರ್ಟೆಲ್ ಸಮೂಹದ ಮುಖ್ಯಸ್ಥ ಸುನಿಲ್ ಮಿತ್ತಲ್ ಅವರು ಕುಟುಂಬ ಮಾಡಿರುವ ಕೆಲಸದಿಂದ ಏರ್ಟೆಲ್ ಮೇಲೆ ನಿಮಗೆ ಪ್ರೀತಿ ಹೆಚ್ಚಾಗಬಹುದು.!!
ಜಿಯೋ ಬರುವುದಕ್ಕೂ ಮೊದಲು ಭಾರತೀಯರನ್ನು ಏರ್ಟೆಲ್ ಸುಲಿಗೆ ಮಾಡುತ್ತಿತ್ತು ಎನ್ನುವ ನಿರ್ಧಗಾರವನ್ನು ಹೊಂದಿದ್ದ ಹಲವರು ಏರ್ಟೆಲ್ ಅನ್ನು ದ್ವೇಷಿಸುತ್ತಿದ್ದರು. ಆದರೆ, ಏರ್ಟೆಲ್ ಸಮೂಹದ ಮುಖ್ಯಸ್ಥ ಸುನಿಲ್ ಮಿತ್ತಲ್ ಅವರು ಕುಟುಂಬ ಮಾಡಿರುವ ಕೆಲಸದಿಂದ ಏರ್ಟೆಲ್ ಮೇಲೆ ನಿಮಗೆ ಪ್ರೀತಿ ಹೆಚ್ಚಾಗಬಹುದು.!!
ಹೌದು, ಭಾರ್ತಿ ಏರ್ಟೆಲ್ ಸಮೂಹದ ಮುಖ್ಯಸ್ಥ ಸುನಿಲ್ ಮಿತ್ತಲ್ ಅವರ ಕುಟುಂಬ ಸುಮಾರು 7,000 ಕೋಟಿ ರೂಪಾಯಿಗಳನ್ನು ಸಮಾಜ ಕಲ್ಯಾಣ ಚಟುವಟಿಕೆಗಳಿಗೆ ದಾನವಾಗಿ ನೀಡುವ ವಾಗ್ದಾನ ಕೊಟ್ಟಿದೆ.! ಮೊದಲ ಟೆಲಿಕಾಂ ಕಂಪೆನಿ ಇಂತಹ ವಾಗ್ದಾನ ನೀಡಿದ್ದು, ಹಾಗಾದರೆ, ಏರ್ಟೆಲ್ನ ಈ ವಾಗ್ದಾನ ಹೇಗಿದೆ ಎಂದು ಕೆಳಗಿನ ಸ್ಲೈಡರ್ಗಳಲ್ಲಿ ತಿಳಿಯಿರಿ.!!

ನಿಲೇಕಣಿ ದಂಪತಿ ಅರ್ಧ ಆಸ್ತಿ ದಾನ!!
ಇತ್ತೀಚೆಗೆ ಇನ್ಫೋಸಿಸ್ನ ಅಧ್ಯಕ್ಷ ನಂದನ್ ನಿಲೇಕಣಿ ಹಾಗೂ ಪತ್ನಿ ರೋಹಿಣಿ ನಿಲೇಕಣಿ ಅವರು ತಮ್ಮ ಸಂಪತ್ತಿನ ಅರ್ಧ ಪಾಲನ್ನು ಸಾಮಾಜಿಕ ಯೋಜನೆಗಳಿಗೆ ದಾನ ನೀಡುವುದಾಗಿ ವಚನ ನೀಡಿ ಗಿವಿಂಗ್ ಪ್ಲೆಡ್ಜ್ ಅಭಿಯಾನಕ್ಕೆ ಸಹಿ ಹಾಕಿದ್ದರು.! ಇದೇ ಸಮಯದಲ್ಲಿ ಏರ್ಟೆಲ್ ಕೂಡ ದಾನ ನೀಡುವ ವಾಗ್ದಾನ ನೀಡಿದೆ.!!

7,000 ಕೋಟಿ ರೂ.ದಾನ!!
ಟೆಲಿಕಾಂ ಕಂಪೆನಿಗಳಲ್ಲಿಯೇ ಮೊದಲು ಬಾರಿ ಏರ್ಟೆಲ್ ತನ್ನ ಸಂಪತ್ತಿನಲ್ಲಿ 7,000 ಕೋಟಿ ರೂ.ದಾನಮಾಡುವುದಾಗಿ ತಿಳಿಸಿದೆ. ಅಂದರೆ ಭಾರ್ತಿ ಏರ್ಟೆಲ್ ಸಮೂಹ ಹೊಂದಿರುವ 70,000 ಕೋಟಿ ರೂ.ಸಂಪತ್ತಿನಲ್ಲಿ ಶೇ.10ರಷ್ಟು ಸಂಪತ್ತನ್ನು ಏರ್ಟೆಲ್ ಸಮೂಹ ದಾನ ಮಾಡುತ್ತಿದೆ.!!

ಹಣವನ್ನು ಹೇಗೆ ದಾನ ಮಾಡುತ್ತಿದ್ದಾರೆ!!
7,000 ಕೋಟಿ ರೂ.ಹಣವನ್ನು ಏರ್ಟೆಲ್ ಸಮೂಹದ ಭಾರ್ತಿ ಫೌಂಡೇಷನ್ ಮೂಲಕ ನಡೆಯುವ ಸಾಮಾಜಿಕ ಚಟುವಟಿಕೆಗಳಲ್ಲಿ ವಿನಿಯೋಗಿಸಲಾಗುವುದು ಎಂದು ಏರ್ಟೆಲ್ ಸಂಸ್ಥೆ ತಿಳಿಸಿದೆ. ಅಂದರೆ ಏರ್ಟೆಲ್ ಖದ್ದಾಗಿ ತಾನೆ ಹಣ ವಿನಿಯೋಗಿಸಲು ಮುಂದಾಗಿದೆ.!!

ಸುನಿಲ್ ಮಿತ್ತಲ್ ಹೇಳಿದ್ದೇನು?
ದೇಶದಲ್ಲಿ ಹಿಂದುಳಿದವರ ಅಭಿವೃದ್ಧಿಗೆ, ಶೈಕ್ಷಣಿಕ ಸುಧಾರಣೆಗೆ ಭಾರ್ತಿ ಸಮೂಹ ಈ ಮೂಲಕ ಯೋಜನೆಗಳನ್ನು ಹಮ್ಮಿಕೊಳ್ಳಲಿದೆ. ಮೊದಲಿನಿಂದಲೂ ಭಾರ್ತಿ ಸಮೂಹ ಸಾಮಾಜಿಕ ಸೇವೆಗಳಲ್ಲಿ ನಿರತವಾಗಿದೆ. ಇನ್ನೂ ಮುಂದುವರಿಸಲಿದೆ' ಎಂದು ಸಮೂಹದ ಅಧ್ಯಕ್ಷ ಸುನಿಲ್ ಮಿತ್ತಲ್ ಹೇಳಿದ್ದಾರೆ.


Click it and Unblock the Notifications








